ಎಸ್ಎಸ್ಕೆಬಿ ಕಾಲೇಜಿನಲ್ಲಿ ಜರುಗಿದ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನ ಜಾಗೃತಿ ಜಾಥಾ, ಸಮಾವೇಶ
(BIDAR): ಬಸವಕಲ್ಯಾಣ: ಭಾರತ ದೇಶದ ಸಂಸ್ಕೃತಿ ಪರಂಪರೆ ಬಹಳ ಮಹತ್ವದ್ದಾಗಿದೆ. ಆದರೆ ಇಂದು ಸಂಸ್ಕೃತಿ ಹಾಗೂ ಸಂಸ್ಕಾರ ಹಾಳಾಗುತ್ತಿದ್ದು ಯುವ ಸಮೂಹ ವಿದೇಶಿ ಸಂಸ್ಕೃತಿಗೆ ಮಾರು ಹೋಗುತ್ತಿರುವದು ಕಳವಳಕಾರಿ ಸಂಗತಿಯಾಗಿದೆ ಅವರನ್ನು ಸರಿ ದಾರಿಗೆ ತರಲು ಪ್ರಯತ್ನಿಸಬೇಕು ಸಧೃಡ ಸಮಾಜ ನಿರ್ಮಿಸಬೇಕಿದೆ ಎಂದು ಇಲ್ಲಿಯ ತ್ರೀಪುರಾಂತನ ಗವಿ ಮಠದ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್(ರಿ) ಬಸವಕಲ್ಯಾಣ, ತಾಲೂಕ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ಬೆಳ್ತಂಗಡಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಬೀದರ, ಎಸ್.ಎಸ್.ಕೆ. ಬಸವೇಶ್ವರ ಕಲಾ, ವಿಜ್ಞಾನ, ವಾಣಿಜ್ಯ, ಸ್ನಾತಕ ಮತ್ತು ಸ್ನಾತಕೋತ್ತರ ಮಹಾವಿದ್ಯಾಲಯ, ಬಸವಕಲ್ಯಾಣ ಇವರ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡ ಗಾಂಧಿ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನ ಜಾಗೃತಿ ಜಾಥಾ ಸಮಾವೇಶ ಉದ್ಘಾಟಿಸಿ ಶ್ರೀಗಳು ಮಾತನಾಡಿದರು. ಡಾ. ವಿರೇಂದ್ರ ಹೇಗಡೆ ಅವರು ಸುಂದರ ಸಮಾಜ ನಿರ್ಮಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೂರಾರು ಯೋಜನೆಗಳ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನಿಯವಾಗಿದೆ. ಗಾಂಧಿ ಜಯಂತಿ ಸಂಭ್ರಾಮಾಚಾರಣೆ ಯಶಸ್ವಿಯಾಗಬೇಕಾದರೆ ಎಲ್ಲರು ತಮ್ಮಲಿರುವ ದುಶ್ಚಟಗಳನ್ನು ಈಗಿನಿಂದಲೇ ಬಿಡಬೇಕು ಎಂದು ಕರೆ ನಿಡಿದರು.
ಡಾ. ಸಂಗೀತಾ ಮಂಠಾಳೆ ಮಾತನಾಡಿ, ವಿಧ್ಯಾರ್ಥಿಗಳು ಆನಲೈನ ಕ್ಲಾಸಗಾಗಿ ಮೊಬೈಲ ಬಳಿಸಬೇಕು ಅದು ಬಿಟ್ಟು ಬೇರೆ ಬೇರೆ ಕೆಲಸಕ್ಕೆ ಮೊಬೈಲ ಬಳಕೆಯಾಗಿ ವಿಧ್ಯಾರ್ಥಿಗಳು ಅನಾರೋಗ್ಯದಿಂದ ಪಿಡಿತರಾಗುತ್ತಾರೆ ನಿದ್ಯೆಗೆಟ್ಟು ಆರೋಗ್ಯ ಹಾಳು ಮಾಡುಕೊಳ್ಳುತ್ತಿದ್ದಾರೆ ತಂದೆ ತಾಯಿಗಳು ಇದನ್ನು ನಿಷೇಧಿಸಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಾರ್ಥಂಡ ಜೋಶಿ ಮಾತನಾಡಿ, ಇಂದು ದೇಶವು ಸರ್ವ ರೀತಿಯಲ್ಲಿ ಅಭಿವೃದ್ಧಿಯಾಗಿದೆ ಆದರೆ ಬಹಳಷ್ಟು ಯುವಕರು ದುಶ್ಚಟಕ್ಕೆ ಬಲಿಯಾಗುತ್ತಿದ್ದಾರೆ. ಈ ಕುರಿತು ಎಲ್ಲರು ಒಟ್ಟಾಗಿ ಹೋರಾಟ ಮಾಡಿ ದುಶ್ಚಟ ಮುಕ್ತ ಸಮಾಜ ನಿರ್ಮಿಸಬೇಕು, ಉತ್ತಮವಾದ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಲು ದುಶ್ಚಟಗಳು ನಿರ್ಮೂಲನೆ ಮಾಡಬೇಕು ಅಂದಾಗ ಬಲಿಷ್ಟ ಸಮಾಜ ಕಟ್ಟಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿ ಪ್ರಾಂಶುಪಾಲರಾದ ಡಾ. ಬಸವರಾಜ ಎವಲೆ ಮಾತನಾಡಿ, ಸಮಾಜದಲ್ಲಿ ದುಶ್ಚಟಗಳ ನಿರ್ಮೂಲನೆಗೆ ಜನ ಜಾಗೃತಿ ಜಾಥಾ ಹಮ್ಮಿಕೊಂಡಿರುವುದು ಶ್ಲಾಘನಿಯ ಕೆಲಸವಾಗಿದೆ ಇಂದಿನ ಯುವ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿ ದುಶ್ಚಟಕ್ಕೆ ಬಲಿಯಾಗುತ್ತಿರುವುದು ವಿಷಾಧನಿಯ ಸಂಗತಿವಾಗಿದೆ ಎಂದರು.
ಧರ್ಮಸ್ಥಳ ಯೋಜನಾಧಿಕಾರಿ ಸೋಮಲಿಂಗ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಸ್ಥೆಯ ವತಿಯಿಂದ ಸ್ವಸಹಾಯ ಸಂಘಗಳಿಗೆ ಸುಮಾರು 100 ಕೋಟಿ ವ್ಯವಹಾರವನ್ನು ಮಾಡಲಾಗಿದೆ ಅಲ್ಲದೆ ವಿವಿಧ ಸಮಾಜಿಕ ಕೆಲಸಗಳು ಹಮ್ಮಿಕೊಂಡಿದ್ದೇವೆ ಅವುಗಳಲ್ಲಿ ಕೆರೆ ಹುಳು ಎತ್ತುವ ಕೆಲಸ, ಶಾಲೆಗಳಿಗೆ ಪಿಠೋಪಕರಣಗಳನ್ನು ಒದಗಿಸುವುದು, ಬಡ ವಿಧ್ಯಾರ್ಥಿಗಳಿಗೆ, ನಿರ್ಗತಿಕರಿಗೆ, ಅಂಗವಿಕಲರಿಗೆ ಮಾಸಾಶನ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪನೆ, ದೇವಾಲಯಗಳ ಸುತ್ತ ಸ್ವಚ್ಛತೆ ಮುಂತಾದ ಕೆಲಸಗಳು ಮಾಡಲಾಗುತ್ತಿದೆ ಎಂದರು. ವೇದಿಕೆಯಲ್ಲಿ ಬೀದರ ಜಿಲ್ಲಾ ಜನ ಜಾಗೃತಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಗುರುನಾಥ ಗಡ್ಡೆ, ಸದಸ್ಯರಾದ ಶಾಮರಾವ, ರಾಜಶೇಖರ ಮಡಕೆ ಉಪಸ್ಥಿತರಿದ್ದರು. ಇದಕ್ಕೂ ಮುನ್ನ ನಗರದಲ್ಲಿ ಜಾಥಾ ಜರುಗಿತು.
ವರದಿ:- ಉದಯ್ ಮುಳೆ