ಪುಟ್ ಪಾತ್ ಅತಿಕ್ರಮಣ ಸಮಂಜಸವಲ್ಲ: ನಂಜಪ್ಪ.
(KOLARA): ಬಂಗಾರಪೇಟೆ: ಸಾರ್ವಜನಿಕರು ಮತ್ತು ಅಂಗಡಿ ಮಾಲಿಕರು ಪಾದಚಾರಿ ರಸ್ತೆಯನ್ನು ಅತಿಕ್ರಮಿಸಿಕೊಂಡ ಕಾರಣ ಒಳಚರಂಡಿಗಳನ್ನು ಸ್ವಚ್ಛ ಮಾಡಲು ಸಾಧ್ಯವಾಗಿದೆ ಗಬ್ಬುನಾರುತಿತ್ತು, ಇತ್ತೀಚೆಗೆ ಪಟ್ಟಣದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಒಳಚರಂಡಿ ನೀರು ರಸ್ತೆ ಬಂದು ಸಾರ್ವಜನಿಕರು ಪರದಾಡುತ್ತಿದ್ದರು, ಇದರಿಂದ ಮಾಧ್ಯಮದವರು ಪುಂಕಾನು ಪುಂಕವಾಗಿ ನಗರದ ಸ್ವಚ್ಛತೆಯ ಅಸಮರ್ಪಕ ನಿರ್ವಹಣೆ ಕುರಿತು ವರದಿ ಪ್ರಸಾರಮಾಡಿದರು. ಇದರಿಂದ ಎಚ್ಚೆತ್ತ ಪುರಸಭೆ ಅಧಿಕಾರಿಗಳು ಪೊಲೀಸ್ ನಿರೀಕ್ಷಕ ನಂಜಪ್ಪ ನವರ ಸಹಕಾರದೊಂದಿಗೆ ಪುಟ್ ಪಾತ್ ತೆರುವು ಗೊಳಿಸುವ ಕಾರ್ಯದಲ್ಲಿ ನಿರತರಾದರು.
ಪಟ್ಟಣದ ಕೋಲಾರ ಮುಖ್ಯ ರಸ್ತೆಯಲ್ಲಿರುವ ಮಳಿಗೆಗಳ ಅತಿಕ್ರಮ ಒತ್ತುವರಿ ತೆರುವುಗೊಳಿಸುವ ಸಂದರ್ಭದಲ್ಲಿ ಪೊಲೀಸ್ ನಿರೀಕ್ಷಕ ನಂಜಪ್ಪ ಮಾತನಾಡಿ, ಕೆಲ ಅಂಗಡಿಗಳ ಮಾಲೀಕರು ರಸ್ತೆಯಲ್ಲಿಯೇ ನಾಮಫಲಕ ಹಾಕಿದ್ದರಿಂದ ಸಾರ್ವಜನಿಕರಿಗೆ ಸಂಚರಿಸಲು ತೊಂದರೆಯಾಗುತ್ತು, ಆದರಿಂದ ಇಂದು ಅವುಗಳನ್ನು ತೆರವುಗೊಳಿಸಿ ಮತ್ತೊಮ್ಮೆ ನಾಮಫಲಕಗಳನ್ನು ಅಳವಡಿಸದಂತೆ ವರ್ತಕರಿಕೆ ಎಚ್ಚರಿಕೆ ನೀಡಲಾಗಿದೆ, ಇದರೊಟ್ಟಿಗೆ ನಿಷೇಧಿತ ಸ್ಥಳದಲ್ಲಿ ವಾಹನಗಳ ನಿಲುಗಡೆ, ಏಕಮುಖ ರಸ್ತೆಯಲ್ಲಿ ವಾಹನ ಸಂಚಾರ ಸಮಂಜಸವಲ್ಲ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧಿಕಾರಿ ಶ್ರೀಕಾಂತ್ ಮಾತನಾಡಿ ಪುರಸಭೆ ಮುಖ್ಯಾಧಿಕಾರಿಗಳ ಆದೇಶದಂತೆ ಬಹುತೇಕ ಅಂಗಡಿಯವರು ತಮ್ಮ ಅಂಗಡಿಗಳ ಸರುಕನ್ನು ಅಂಗಡಿಗಳ ಹೊರಗಡೆ ರಸ್ತೆಯಲ್ಲಿ ಹಾಕುವುದರಿಂದ ವಾಹನ ಹಾಗೂ ಸಾರ್ವಜನಿಕರು ಸಂಚಾರ ಮಾಡುವುದು ಕಷ್ಟವಾಗುತ್ತದೆ. ಮತ್ತು ಒಳಚರಂಡಿಯನ್ನು ಕಲ್ಲು ಮತ್ತು ಸಿಮೇಂಟ್ ನಿಂದ ಮುಚ್ಚಿರುವುದರಿಂದ ಮಳೆಯನೀರು ಸರಾಗವಾಗಿ ಹರಿಯಲು ಸಾದ್ಯವಾಗುತ್ತಿಲ್ಲ , ಹಾಗೂ ಹೋಟೇಲ್ ಮಾಲೀಕರು ಮತ್ತು ಅಂಗಡಿಯವರು ತ್ಯಾಜ್ಯಗಳನ್ನು ರಸ್ತೆಗೆ ಎಸೆಯುವುದರಿಂದ ಸಮಸ್ಯೆ ಉಲ್ಬಣಗೊಂಡಿತ್ತು ಈ ಹಿನ್ನಲೆ ಸಿಬ್ಬಂದಿಯೊಂದಿಗೆ ತೆರವು ಕಾರ್ಯಾರಣೆ ಮಾಡಲಾಗುತ್ತಿದೆ. ಪಾದಚಾರಿ ಮಾರ್ಗದಲ್ಲಿ ಯಾವುದೇ ನಾಮಫಲಕ ಅಂಗಡಿ ಸರಕುಗಳನ್ನು ಇಡದೆ ವಾಹನಗಳು ಹಾಗೂ ಪಾದಚಾರಿಗಳು ಸುಗಮವಾಗಿ ಸಂಚಾರಿಸಲು ಅಂಗಡಿ ಮಾಲೀಕರು ಸಹರಿಸಬೇಕು, ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಸ್ತೆಯ ಅಕ್ಕಪಕ್ಕದಲ್ಲಿದ್ದ ಅನಧಿಕೃತ ನಾಮಫಲಕಗಳನ್ನು ತೆರವು ಮಾಡಲಾಯಿತು, ಮತ್ತು ಮತ್ತೊಮ್ಮೆ ಪುಟ್ ಪಾತ್ ಒತ್ತುವರಿಮಾಡಿಕೊಂಡರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಅಂಗಡಿ ಮಾಲೀಕರಿಗೆ ಅಧಿಕಾರಿಗಳು ಎಚ್ಚರಿಕ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ವಿಷ್ಣು ಕೋಲಾರ