ಜಿಲ್ಲೆನ್ಯೂಸ್

ಬಾಳೆಹೊನ್ನೂರಲ್ಲಿ ರಾಮತಾರಕ ಹೋಮ| ಕರ ಸೇವಕರಿಗೆ ಸನ್ಮಾನ

ಬಾಳೆಹೊನ್ನೂರಲ್ಲಿ ರಾಮತಾರಕ ಹೋಮ| ಕರ ಸೇವಕರಿಗೆ ಸನ್ಮಾನ

(CHIKKAMAGALURU): ಬಾಳೆಹೊನ್ನೂರು: ರಾಮ ಮಂದಿರದ್ದು 5೦೦ ವರ್ಷಗಳಿಗೂ ಅಧಿಕವಾದ ಹೋರಾಟವಾಗಿದ್ದು, ತ್ಯಾಗ, ಬಲಿದಾನ, ಪ್ರತಿಭಟನೆ, ರಥಯಾತ್ರೆ ಹಾಗೂ ಸಮಾಜವನ್ನು ಜಾಗೃತಿಗೊಳಿಸುವ ಕಾರ್ಯದಲ್ಲಿ ತೊಡಗಿದ್ದ ಹಲವು ಹಿರಿಯರು ತಮ್ಮ ಜೀವಿತದ ಅವಧಿಯಲ್ಲಿ ರಾಮಮಂದಿರವನ್ನು ನೋಡಬೇಕು ಎಂದು ಕನಸು ಕಂಡಿದ್ದರು ಎಂದು ವಿಶ್ವ ಹಿಂದೂ ಪರಿಷತ್ ಹಾಸನ ವಿಭಾಗದ ಸಹ ಕಾರ್ಯದರ್ಶಿ ಆರ್.ಡಿ.ಮಹೇಂದ್ರ ಹೇಳಿದರು.


ಅಯೋಧ್ಯೆ ಬಾಲರಾಮನ ಪ್ರಾಣಪ್ರತಿಷ್ಠೆ, ರಾಮಮಂದಿರ ಲೋಕಾರ್ಪಣೆ ಅಂಗವಾಗಿ ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದಲ್ಲಿ ವಿಹಿಂಪ ಸೋಮವಾರ ಆಯೋಜಿಸಿದ್ದ ರಾಮ ತಾರಕ ಹೋಮ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದು ನಮ್ಮ ಅವಧಿಯಲ್ಲಿ ರಾಮ ಮಂದಿರಕ್ಕೆ ದೇಣಿಗೆ ಸಂಗ್ರಹ, ದೇಣಿಗೆ ನೀಡುವ ಭಾಗ್ಯದೊಂದಿಗೆ ಭವ್ಯ ಮಂದಿರವನ್ನು ನೋಡುವ ಸೌಭಾಗ್ಯ ನಮ್ಮದಾಗಿದೆ. ರಾಮಮಂದಿರದಿoದ ಬಂದoತಹ ಮಂತ್ರಾಕ್ಷತೆಯನ್ನು ಮನೆ ಮನೆಗೆ ಕೊಡುವ ಹಾಗೂ ಸ್ವೀಕಾರ ಮಾಡುವ ಅಪೂರ್ವ ಕ್ಷಣಗಳು ನಮ್ಮದಾಗಿದೆ.
ಅಯೋಧ್ಯೆಯ ರಾಮಲಲ್ಲಾನ ಪ್ರಾಣಪ್ರತಿಷ್ಠೆಯನ್ನು ದೇವಾಲಯಗಳಲ್ಲಿ ಸಾಮೂಹಿಕವಾಗಿ ವೀಕ್ಷಣೆ, 108 ಬಾರಿ ರಾಮನಾಮ ಜಪ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿ, ಸಹ ಭೋಜನ ಸಹ ನಮಗೆ ದೊರಕಿದೆ ವರವಾಗಿದೆ ಎಂದು ಹೇಳಿದರು.


ಆರ್‌ಎಸ್‌ಎಸ್ ಜಿಲ್ಲಾ ಕಾರ್ಯವಾಹ ಅನಿಲ್ ಶೆಣೈ ಮಾತನಾಡಿ, ಶ್ರೀರಾಮನ ಆದರ್ಶಗಳು ಸರ್ವ ಕಾಲಕ್ಕೂ ಸಕಾಲಿಕವಾಗಿದ್ದು, ಪ್ರತಿಯೊಬ್ಬರೂ ಜೀವನದಲ್ಲಿ ರಾಮನ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕಿದೆ. ಶ್ರೀರಾಮ ಕರುಣಾ ಸಾಗರಿ, ದಯಾವಂತನಾಗಿದ್ದು ಅವನ ಕರುನೆ ಬೇರೆಲ್ಲೂ ದೊರಕಲು ಸಾಧ್ಯವಿಲ್ಲ ಎಂದರು.
ರಾಮಲಲ್ಲಾ ಪ್ರತಿಷ್ಠಾಪನೆ ಅಂಗವಾಗಿ ಮಾರ್ಕಾಂಡೇಶ್ವರಸ್ವಾಮಿಗೆ ರುದ್ರಾಭಿಷೇಕ, ಫಲ ಸಮರ್ಪಣೆ ಮಾಡಲಾಯಿತು. ನಂತರ ಅರ್ಚಕ ಕೆ.ಎಸ್.ಪ್ರಕಾಶ್ ಭಟ್, ಶಿವಶಂಕರ್ ಭಟ್ ನೇತೃತ್ವದಲ್ಲಿ 1008 ಸಂಖ್ಯೆಯಲ್ಲಿ ರಾಮ ತಾರಕ ಹೋಮ ನೆರವೇರಿಸಿ ಪೂರ್ಣಾಹುತಿ ಮಾಡಲಾಯಿತು.
ಆಯೋಧ್ಯೆ ರಾಮಶಿಲಾ ಯಾತ್ರೆಯ ಸೇವೆಯಲ್ಲಿ ಭಾಗವಹಿಸಿದ್ದ ಸುರೇಂದ್ರ ಪೈ, ರಾ.ವೆಂಕಟೇಶ್, ಎಚ್.ಕೆ.ಸುಧಾಕರಭಟ್, ಅಣ್ಣಪ್ಪ, ಬಿ.ಕೆ.ಮಧುಸೂದನ್ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮೂರು ಸಾವಿರಕ್ಕೂ ಅಧಿಕ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು.

ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಉಮೇಶ್, ಆರ್‌ಎಸ್‌ಎಸ್ ಜಿಲ್ಲಾ ವ್ಯವಸ್ಥಾಪಕ ಪ್ರಮುಖ್ ಮಹೇಶ್ಚಂದ್ರ, ತಾಲೂಕು ಶಾರೀರಿಕ ಪ್ರಮುಖ್ ಅರುಣ್ ಭಂಡಾರಿ, ರಾಮಮಂದಿರ ಉದ್ಘಾಟನಾ ಅಭಿಯಾನದ ತಾಲೂಕು ಸಂಯೋಜಕ ಬಿ.ವೆಂಕಟೇಶ್, ಕಾಫಿ ಮಂಡಳಿ ಸದಸ್ಯ ಭಾಸ್ಕರ್ ವೆನಿಲ್ಲಾ, ಹೋಬಳಿ ಬಿಜೆಪಿ ಅಧ್ಯಕ್ಷ ಪ್ರಭಾಕರ್ ಪ್ರಣಸ್ವಿ, ಪ್ರಮುಖರಾದ ಸಂದೀಪ್‌ಶೆಟ್ಟಿ, ಜಗದೀಶ್ಚಂದ್ರ, ಮಂಜು ಹಲಸೂರು, ಶರತ್‌ಪೂಜಾರಿ, ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *

Scan the code