ಕೋಲಾರನ್ಯೂಸ್

ಹಿಂದುಳಿದ ವರ್ಗಗಳ ನಾಯಕರ ಮೇಲೆ ಇತ್ತೀಚೆಗೆ ತೇಜೋವದೆ, ದೌರ್ಜನ್ಯ ಹಲ್ಲೆಗಳು ನಡೆಯುತ್ತಿವೆ,

ಹಿಂದುಳಿದ ವರ್ಗಗಳ ನಾಯಕರ ಮೇಲೆ ಇತ್ತೀಚೆಗೆ ತೇಜೋವದೆ, ದೌರ್ಜನ್ಯ ಹಲ್ಲೆಗಳು ನಡೆಯುತ್ತಿವೆ,

(KOLARA): ಬಂಗಾರಪೇಟೆ:ಕೋಲಾರದ ಕಾಂಗ್ರೇಸ್ ಸಭೆಯಲ್ಲಿ ಕಾಂಗ್ರೇಸ್ ಪಕ್ಷ ಜಿಲ್ಲಾಧ್ಯಕ್ಷ ಲಕ್ಷ್ಮಿನಾರಾಯಾಣ ಮತ್ತು ಕೋಲಾರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪ್ರಸಾದ್ ಬಾಬುರ ಮೇಲೆ ನಡೆದಿರುವ ಹಲ್ಲೆಯನ್ನು ಹಿಂದುಳಿದ ವರ್ಗಗಳ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಎಂ.ಮಂಜುನಾಥ್ ಖಂಡಿಸಿದರು. ಅವರು ಪಟ್ಟಣದ ಶ್ರೀ ಸಾಯಿ ಕಂಟ್ರಾಕ್ಟರ್ಸ್ ಕಛೇರಿಯಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಕ್ಷದ ಉಸ್ತುವಾರಿಗಳು, ಶಾಸಕರು ಮತ್ತು ವಿಧಾನ ಪರಿಷತ್ ಸಧಸ್ಯರಗಳ ಎದುರು ಈ ರೀತಿ ಹಲ್ಲೆ ನಡೆದಿರುವುದು ಅತ್ಯಂತ ಬೇಸರದ ಸಂಗತಿ ಎಂದರು.

ಹಿಂದುಳಿದ ವರ್ಗಗಳ ನಾಯಕರ ಮೇಲೆ ಇತ್ತೀಚೆಗೆ ತೇಜೋವದೆ, ದೌರ್ಜನ್ಯ ಹಲ್ಲೆಗಳು ನಡೆಯುತ್ತಿವೆ, ಕೋಲಾರದಲ್ಲಿ ಹಿಂದುಳಿದ ವರ್ಗಗಳ ಮಖಂಡರೂ ಆಗಿರುವ ಲಕ್ಷ್ಮೀನಾರಾಯಣ ಮತ್ತು ಪ್ರಸಾದ್ ಬಾಬುರವರ ಮೇಲೆ ಹಲ್ಲೆ ದೌರ್ಜನ್ಯ ನಡೆದಿರುವುದನ್ನು ಸಹಿಸಲು ಸಾದ್ಯವಿಲ್ಲ ಎಂದರು. ಸಂಬಂಧಪಟ್ಟವರು ಈ ಕೂಡಲೆ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ ಅವರು ಇನ್ನು ಮುಂದೆ ಇದೇ ರೀತಿ ಹಿಂದುಳಿದ ನಾಯಕರ ಮೇಲೆ ದೌರ್ಜನ್ಯಗಳು ನಡೆದರೆ ಉಗ್ರ ರೀತಿಯ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಗೌರವಾಧ್ಯಕ್ಷ ಎಲ್.ರಾಮಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಚಿನ್ನಿವೆಂಕಟೇಶ್, ಜಂಟಿ ಕಾರ್ಯದರ್ಶಿ ಎಸ್.ಬಿ.ವೆಂಕಟೇಶ್, ಸಂಚಾಲಕ ಆದಿನಾರಾಯಣ ಮೊದಲಾದವರಿದ್ದರು. ‌

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code