ಕೋಲಾರ

ರೇಣುಕಾ ಯಲ್ಲಮ್ಮ ಜಯಂತಿಯನ್ನು ಫೆ.12ರ ಬದಲಾಗಿ ಫೆ.16 ರಂದು ಅದ್ದೂರಿಯಾಗಿ ಆಚರಣೆ,

ರೇಣುಕಾ ಯಲ್ಲಮ್ಮ ಜಯಂತಿಯನ್ನು ಫೆ.12ರ ಬದಲಾಗಿ ಫೆ.16 ರಂದು ಅದ್ದೂರಿಯಾಗಿ ಆಚರಣೆ,

(KOLARA): ಬಂಗಾರಪೇಟೆ: ಶ್ರೀ ರೇಣುಕಾ ಯಲ್ಲಮ್ಮ ಜಯಂತಿಯನ್ನು ಫೆ.12ರ ಬದಲಾಗಿ ಫೆ.16 ರಂದು ಅದ್ದೂರಿಯಾಗಿ ಆಚರಣೆ, ನಮ್ಮ ಸಮುದಾಯದ ಹಿರಿಯ ಮುಖಂಡರ ಮಾರ್ಗದರ್ಶನದಂತೆ ಈ ಕಾರ್ಯಕ್ರಮದಲ್ಲಿ 180ಕ್ಕೂ ಹೆಚ್ಚು ಪಲ್ಲಕ್ಕಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಪಿಚ್ಚಹಳ್ಳಿ ಗೋವಿಂದರಾಜು ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು, ಫೆಬ್ರವರಿ 16 ರಂದು ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸ್ತಬ್ದ ಚಿತ್ರಗಳು ಸೇರಿ ಬೆಳಿಗ್ಗೆ 11ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ರವರ ಪುತ್ತಳಿಗೆ ಮಾಲಾರ್ಪಣೆಯನ್ನು ಮಾಡಿ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ, ಶ್ರೀ ರೇಣುಕಾಯಲ್ಲಮ್ಮ ದೇವಿಯ ಪೂರ್ಣ ಕುಂಬ ಕಳಶಗಳನ್ನೊಳಗೊಂಡ ಮೆರವಣಿಗೆಗೆ ಚಾಲನೆ ನೀಡಲಾಗುವುದು ಎಂದರು.

ನಂತರ ಈ ಮೆರವಣಿಗೆಯೂ ನಂದಿ ಮೆಡಿಕಲ್ ಮಾರ್ಗವಾಗಿ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಲಿದೆ. ಹಾಗೂ ಕುವೆಂಪು ವೃತ್ತದ ಬಳಿ ವೇದಿಕೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ವಿವಿಧ ಗ್ರಾಮಗಳಿಂದ ಬಂದ ಪಲ್ಲಕ್ಕಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಲಾಗುವುದು, ಮತ್ತು 5 ಪ್ರಮುಖ ಸ್ಥಳಗಳಲ್ಲಿ ಊಟದ ವ್ಯವಸ್ಥೆ, ಪಾನಕ, ಮಜ್ಜಿಗೆ ವ್ಯವಸ್ಥೆ ಮಾಡಲಾಗಿದೆ. ಹಾಗೂ ಕಲಾವಿದ ಯಲ್ಲಪ್ಪ ತಂಡದವರಿಂದ ಬೆಳಿಗ್ಗೆ 8 ಗಂಟೆಯಿಂದ ಮದ್ಯಾಹ್ನ 12ಗಂಟೆಯವರೆಗೆ ಶ್ರೀ ರೇಣುಕಾಯಲ್ಲಮ್ಮ ದೇವಿಯ ಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸರ್ವರು ಭಾಗವಹಿಸಬೇಕೆಂದು ಮನವಿ ಮಾಡಿದರು.


ಈ ವೇಳೆ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಮಚಂದ್ರಪ್ಪ ಮಾತನಾಡಿ,ರೇಣುಕಾ ಯಲ್ಲಮ್ಮದೇವಿ ಒಂದು ವರ್ಗ ಅಥವಾ ಸಮುದಾಯಕ್ಕೆ ಸೀಮಿತವಲ್ಲ, ಸರ್ವ ಜನಾಂಗದ ಆರಾಧ್ಯ ದೈವವಾಗಿದ್ದು, ಭರತ ಹುಣ್ಣಿಮೆ ಪ್ರಯುಕ್ತ ದಿನಾಂಕ 12ರಂದು ಪಟ್ಟಣದ ಗೌತಮ್ ನಗರದಲ್ಲಿರುವ ಶ್ರೀ ಯಲ್ಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ, ಹವಣಗಳನ್ನು ಏರ್ಪಡಿಸಲಾಗಿದ್ದು, ಎಲ್ಲಾ ಕುಲಬಾಂದವರು ಹಾಗೂ ದೇವಿಯ ಆರಾಧಕರು ಭಾಗವಹಿಸಬೇಕು ಹಾಗೂ ಇದಕ್ಕೆ ಪೂರಕ ಎಂಬಂತೆ ದಿನಾಂಕ 16ರ ಭಾನುವಾರದಂದು  ಶ್ರೀ ರೇಣುಕಾ ಯಲ್ಲಮ್ಮದೇವಿ ಜಯಂತ್ಸೋವವನ್ನು ಸಂಭ್ರಮ ಸಡಗರದಿಂದ ಆಚರಿಸಲು ತೀರ್ಮಾನಿಸಲಾಗಿದ್ದು, ಕ್ಷೇತ್ರದ ಸರ್ವ ಜನಾಂಗದವರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ತಿಳಿಸಿದರು.

ಕಾರ್ಯಕ್ರಮ ಒಂದು ವರ್ಷಕ್ಕೆ ಸೀಮಿತವಲ್ಲ:
ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಮಾತನಾಡಿ, ಕಳೆದ ಎಂಟು ವರ್ಷಗಳಿಂದ ರೇಣುಕಾಯಲ್ಲಮ್ಮ ದೇವಿಯ ಉತ್ಸವವನ್ನು ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿತ್ತು. ಕಾರಣಾಂತರಗಳಿಂದ 2ವರ್ಷ ಕಾರ್ಯಕ್ರಮ ನಡೆಯಲಿಲ್ಲ. ಈ ಭಾರಿ ಸಮುದಾಯದ ಎಲ್ಲಾ ಮುಖಂಡರು ಮತ್ತು ನಾಯಕರ ಒಕ್ಕೊರಲಿನ ಅಭಿಪ್ರಾಯದಂತೆ ಈ ಭಾರಿ ಮತ್ತೊಮ್ಮೆ ಜಯಂತ್ಸೋವವನ್ನು ಆಚರಣೆ ಮಾಡಲು ತೀರ್ಮಾನಿಸಲಾಗಿದೆ. ಅದರಂತೆ ಕ್ಷೇತ್ರದ ಶಾಸಕರು, ಸಂಸದರು ಹಾಗೂ ಎಲ್ಲಾ ಜನಪ್ರತಿನಿದಿಗಳನ್ನೊಳಗೊಂಡಂತೆ ಸಮುದಾಯದ ಮುಖಂಡರ ಸಮೂಹಿಕ ನಾಯಕತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮ ಒಂದು ವರ್ಷಕ್ಕೆ ಸೀಮಿತವಾಗದೆ ಮುಂದುವರೆಸಿಕೊಂಡು ಹೋಗುವ ಗುರುತರ ಜವಾಬ್ದಾರಿ ನಮ್ಮೆಲ್ಲದ್ದರಾಗಿದೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಎಂ.ನಾರಾಯಣಪ್ಪ, ಜೆ.ಶ್ರೀನಿವಾಸ್, ದೇಶಿಹಳ್ಳಿ ವೆಂಕಟರಾಮಪ್ಪ, ಬಿ.ವಿ.ಮಹೇಶ್, ಕಪಾಲಿ ಶಂಕರ್, ಹೆಚ್.ಎಂ.ರವಿ, ಕುಪೇಂದ್ರ, ಹುಣಸನಹಳ್ಳಿ ವೆಂಕಟೇಶ್, ಹುಣಸನಹಳ್ಳಿ ಶ್ರೀನಿವಾಸ್, ಸೂಲಿಕುಂಟೆ ಆನಂದ್, ಕೀಲುಕೊಪ್ಪ ಯಲ್ಲಪ್ಪ, ಗೌತಮನಗರ ನಾರಾಯಣಸ್ವಾಮಿ, ಕಾರಹಳ್ಳಿ ಪ್ರತಾಪ್, ಲಕ್ಷ್ಮೀನಾರಾಯಣ , ಅ.ನಾ.ಹರೀಶ್, ಹುವರಸನಹಳ್ಳಿ ರಾಜಪ್ಪ, ಜೀವಿಕ ಡಾ.ರಾಮಚಂದ್ರಪ್ಪ, ಸಿ.ಜೆ.ನಾಗರಾಜ್, ಕಲಾವಿದ ಯಲ್ಲಪ್ಪ, ಕವಿ ಲಕ್ಷ್ಮಯ್ಯ , ನಂದ, ಚಲಪತಿ, ಇನ್ನಿತರರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code