ಜಿಲ್ಲೆನ್ಯೂಸ್

ಜನವರಿ ಒಂದರಂದು ರೇಣುಕನಗರ ಅಯ್ಯಪ್ಪಸ್ವಾಮಿ ದೀಪೋತ್ಸವ, ಅನ್ನದಾನ.

ಜನವರಿ ಒಂದರಂದು ರೇಣುಕನಗರ ಅಯ್ಯಪ್ಪಸ್ವಾಮಿ ದೀಪೋತ್ಸವ, ಅನ್ನದಾನ.

(CHIKKAMAGALURU): ಬಾಳೆಹೊನ್ನೂರು: ರೇಣುಕನಗರದ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ 31ನೇ ವರ್ಷದ ದೀಪೋತ್ಸವ, ಅನ್ನದಾನ ಕಾರ್ಯಕ್ರಮ, ಜನಜಾಗೃತಿ ಧರ್ಮಸಭೆ ಜನವರಿ ೧ರಂದು ಪ್ರಸನ್ನ ಗಣಪತಿ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಅಯ್ಯಪ್ಪ ಸಮಿತಿ ಅಧ್ಯಕ್ಷ ಆರ್.ಡಿ.ಮಹೇಂದ್ರ ತಿಳಿಸಿದ್ದಾರೆ.
ಜ.1ರ ಸೋಮವಾರ ಮುಂಜಾನೆ 5ಕ್ಕೆ ಗುರುಸ್ವಾಮಿ ಎಕೆಪಿ ಕೃಷ್ಣ ಪೊದುವಾಳ್ ನೇತೃತ್ವದಲ್ಲಿ ಭದ್ರಾನದಿಯಿಂದ ಆಗ್ರೋದಕವನ್ನು ತಂದು ಶ್ರೀಸ್ವಾಮಿಯ ಮಹಾ ರುದ್ರಾಭಿಷೇಕ, ಪೂಜೆ ನೆರವೇರಿಸಲಾಗುವುದು.


ಮಧ್ಯಾಹ್ನ 12.30ಕ್ಕೆ ಮಹಾ ಪೂಜೆಯ ಬಳಿಕ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ 4.30ಕ್ಕೆ ಅಯ್ಯಪ್ಪ ಸ್ವಾಮಿಯ ರಾಜಬೀದಿ ಉತ್ಸವವು ರೇಣುಕನಗರದ ಮುಖ್ಯರಸ್ತೆಯಲ್ಲಿ ಸಾಗಿ ಕೊಪ್ಪಲು ಚೌಡೇಶ್ವರಿ ಹಾಗೂ ಕೆರೆ ಚೌಡೇಶ್ವರಿ ದೇವಾಲಯದಲ್ಲಿ ದೀಪಾರಾಧನೆ ನಡೆದು ಪ್ರಸನ್ನ ಗಣಪತಿ ದೇವಸ್ಥಾನದ ಆವರಣದಲ್ಲಿ ಸಂಪನ್ನಗೊಳ್ಳಲಿದೆ.
ಅದೇ ದಿನ ಸಂಜೆ 7.30ಕ್ಕೆ ರಂಭಾಪುರಿ ಖಾಸಾ ಶಾಖಾ ಮಠದ ಪಟ್ಟಾಧ್ಯಕ್ಷರಾದ ಬೀರೂರು ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿಗಳ ಸಾನಿಧ್ಯದಲ್ಲಿ ಜನಜಾಗೃತಿ ಧಾರ್ಮಿಕ ಸಭೆ ನಡೆಯಲಿದೆ.


ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ರಮೇಶ್ ಬೇಗಾರ್ ಅವರಿಗೆ ರಂಗಭೂಮಿ, ಯಕ್ಷಗಾನ ಕಲೆ, ಚಲನಚಿತ್ರರಂಗದ ಜೀವಮಾನದ ಸಾಧನೆಯನ್ನು ಗೌರವಿಸಿ ಸಮಿತಿ ವತಿಯಿಂದ ಕಲಾರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು.
ಉದಯೋನ್ಮುಖ ಚಿತ್ರನಟಿ ನಾಗಶ್ರೀ ಬೇಗಾರ್ ಅವರಿಗೆ ಅಯ್ಯಪ್ಪಸ್ವಾಮಿಯ ಗೌರವ ಗುರುರಕ್ಷೆ ನೀಡಲಾಗುವುದು. ಸಭಾ ಕಾರ್ಯಕ್ರಮದಲ್ಲಿ ಗಣಪತಿ ದೇವಸ್ಥಾನದ ಅಧ್ಯಕ್ಷ ಎಂ.ಎಸ್.ಜಯಪ್ರಕಾಶ್, ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಸಚಿವರಾದ ಡಿ.ಎನ್.ಜೀವರಾಜ್, ಪ್ರಮೋದ್ ಮಧ್ವರಾಜ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಕಳೆದ ವರ್ಷದಂತೆ ಈ ವರ್ಷವೂ ಸಹ ಸೇವಾ ಸಮಿತಿ ವತಿಯಿಂದ ಹೋಬಳಿಯಾದ್ಯಂತ ಇರುವ ನಾಲ್ಕು ಸಾವಿರ ಹಿಂದೂ ಮನೆಗಳಿಗೆ ಅಯ್ಯಪ್ಪ ಸ್ವಾಮಿಯ ಅನ್ನದಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಅಯ್ಯಪ್ಪ ಮಾಲಾಧಾರಿಗಳು ತಂಡಗಳನ್ನು ರಚಿಸಿಕೊಂಡು ಆಹ್ವಾನಿಸುತ್ತಿದ್ದು, ಪ್ರತೀ ಹಿಂದೂಗಳ ಮನೆಯನ್ನು ಸಂಪರ್ಕ ಮಾಡುವ ವಿಶೇಷ ಅಭಿಯಾನ ಹಮ್ಮಿಕೊಂಡಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Scan the code