ಪಟ್ಟಣದಿಂದ ಕೋಲಾರಕ್ಕೆ ಹೆಚ್ಚುವರಿ ಬಸ್ಸುಗಳನ್ನು ನಿಯೋಜನೆ ಮಾಡಬೇಕೆಂದು ಕರ್ನಾಟಕ ದಲಿತ ರೈತ ಸೇನೆಯಿಂದ ಮನವಿ
(KOLARA): ಬಂಗಾರಪೇಟೆ: ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಬಂಗಾರಪೇಟೆಯಿOದ ಕೋಲಾರಕ್ಕೆ ಹೆಚ್ಚುವರಿ ಬಸ್ಗಳನ್ನು ನಿಯೋಜನೆ ಮಾಡಲು ಕರ್ನಾಟಕ ದಲಿತ ರೈತಸೇನೆ ವತಿಯಿಂದ ಬಂಗಾರಪೇಟೆ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಂಸ್ಥಾಪಕ ಅಧ್ಯಕ್ಷ ಹುಣಸನಹಳ್ಳಿ ಎನ್.ವೆಂಕಟೇಶ್ ಮಾತನಾಡಿ, ಆಂದ್ರ, ತಮಿಳುನಾಡುಗೆ ಹೊಂದಿಕೊOಡಿರುವ ಗಡಿಭಾಗದ ತಾಲ್ಲೂಕಾದ ಬಂಗಾರಪೇಟೆಯಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕೋಲಾರಕ್ಕೆ ಹೋಗುತ್ತಿದ್ದು, ಪ್ರತಿನಿತ್ಯ ಮುಂಜಾನೆ 7 ಗಂಟೆಯಿoದ 9ಗಂಟೆಯವರೆಗೂ ಯಾವುದೇ ರೀತಿ ಅನುಕೂಲವಾಗುವ ಬಸ್ ಸೌಲಭ್ಯವಿಲ್ಲದೆ, ಬಳ್ಳಾರಿ ಎಕ್ಸ್ಪ್ರೆಸ್, ಮಂತ್ರಾಲಯ ಎಕ್ಸ್ಪ್ರೆಸ್ಗಳು ಹಾಗೂ ಇತರೆ ಮಾರ್ಗಗಳಿಗೆ ಬಸ್ಸುಗಳು ಚಲಿಸುತ್ತಿದ್ದು, ಈ ಪೈಕಿ ಕೆಜಿಎಫ್ ಡಿಪೋಯಿಂದಲೇ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ, ಆದರೆ ಬಂಗಾರಪೇಟೆ ಬಸ್ ನಿಲ್ದಾಣಕ್ಕೆ ಬರುವಷ್ಟರಲ್ಲಿಯೇ ಬಸ್ಗಳು ತುಂಬಿರುತ್ತವೆ. ಈ ಕಾರಣದಿಂದ ವಿದ್ಯಾರ್ಥಿಗಳು ಪ್ರಯಾಣಿಸಲಾಗದೆ ತುಂಬಾ ಹರಸಾಹಸ ಪಡುತ್ತಿದ್ದಾರೆ. ವಿದ್ಯಾಭ್ಯಾಸದ ಹಿತದೃಷ್ಠಿಯಿಂದ ಹೆಚ್ಚುವರಿ ಬಸ್ಗಳನ್ನು ಬಂಗಾರಪೇಟೆಯಿoದ ಕೋಲಾರಗೆ ನಿಯೋಜನೆ ಮಾಡಲು ಆಗ್ರಹಿಸಿದ್ದೇವೆ. ಈ ಸಮಸ್ಯೆಯನ್ನು ಗಂಬೀರವಾಗಿ ಪರಿಗಣಿಸಬೇಕು, ನಮ್ಮ ಮನವಿಯನ್ನು ಪುರಸ್ಕರಿಸದಿದ್ದಲ್ಲಿ ತಾಲ್ಲೂಕಿನ ದಲಿತ, ರೈತ, ಕನ್ನಡಪರ, ಪ್ರಗತಿಪರ ಸಂಘಟನೆಗಳೊಟ್ಟಿಗೆ ಬಂಗಾರಪೇಟೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದೆಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಐತಾಂಡಹಳ್ಳಿ ಮಂಜುನಾಥ್, ಕೀಲುಕೊಪ್ಪ ಮುನಿರಾಜು, ರಾಜ್ಯ ಗೌರವಾಧ್ಯಕ್ಷ ಹುಳದೇನಹಳ್ಳಿ ವೆಂಕಟೇಶ್, ಹುಣಸನಹಳ್ಳಿ ಸತೀಶ್ಕುಮಾರ್, ವರದರಾಜು, ಹಾಗೂ ಇತರರು ಇದ್ದರು.
ವರದಿ ವಿಷ್ಣು ಕೋಲಾರ