ಜಿಲ್ಲೆನ್ಯೂಸ್

ಶಾಮ್ ಆಸ್ಪತ್ರೆ ಬಳಿಯ ನಿವಾಸಿಗಳು ಶ್ರೀ ರಾಮ ದೇವರಿಗೆ ವಿಶೇಷ ಪೂಜೆ,

ಶಾಮ್ ಆಸ್ಪತ್ರೆ ಬಳಿಯ ನಿವಾಸಿಗಳು ಶ್ರೀ ರಾಮ ದೇವರಿಗೆ ವಿಶೇಷ ಪೂಜೆ,

(KOLARA): ಬಂಗಾರಪೇಟೆ: ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ರಾಮಲಲ್ಲ ಬಾಲರಾಮ ವಿಗ್ರಹ ಪ್ರತಿಷ್ಠಾಪನೆ ಹಿನ್ನೆಲೆ ಪಟ್ಟಣದ ಶಾಮ್ ಆಸ್ಪತ್ರೆ ಬಳಿಯ ನಿವಾಸಿಗಳು ಶ್ರೀ ರಾಮ ದೇವರಿಗೆ ವಿಶೇಷ ಪೂಜೆ,ದೀಪೋತ್ಸವ, ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ನೆರವೇರಿಸಿದ್ದರು.

ಈ ವೇಳೆ ನ್ಯಾಯಾಧೀಶರಾದ ಕೇಶವಮೂರ್ತಿ ರವರು ಮಾತನಾಡಿ, ಇಂದು ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದ ರಾಮ ಜನ್ಮಭೂಮಿಯ ಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಇಂದು ನೆರವೇರಿದೆ. 500 ವರ್ಷಗಳಿಂದ ಕೋಟ್ಯಂತರ ಭಾರತೀಯರ ನಿರೀಕ್ಷೆಯಂತೆ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಯಾಗಿರುವುದು ನಮ್ಮೆಲ್ಲರ ಸೌಭಾಗ್ಯವೆಂದು ತಿಳಿಸಿದರು.

ಶಿಕ್ಷಕರಾದ ಎಮ್.ನಾರಾಯಣಸ್ವಾಮಿ ಮಾತನಾಡಿ, ಇಂದು ದೇಶಾದ್ಯಂತ ಶ್ರೀ ರಾಮನ ಪ್ರಾಣ ಪ್ರತಿಷ್ಠಾಪನೆ ದಿನವನ್ನು ಜನತೆ ತಮ್ಮ ಮನೆಗಳಲ್ಲಿ ಹಬ್ಬದ ಸಂಭ್ರಮದಂತೆ ಶ್ರೀರಾಮ ಮಹೋತ್ಸವವನ್ನು ಆಚರಿಸಲಾಗುತ್ತಿದೆ. ಅಯ್ಯೋದ್ಯೆಯಲ್ಲಿ ರಾಮಲಲ್ಲ ಪ್ರತಿಷ್ಠಾಪನೆ ಹಿಂದುಗಳ 500 ವರ್ಷಗಳ ಕನಸು ಇಂದು ನನಸಾಗಿದೆ ಸಮಸ್ತ ತಾಲೂಕಿನ ಜನತೆಗೆ ಆ ಭಗವಂತ ಉತ್ತಮ ಮಳೆ, ಬೆಳೆ, ಸುಖ,ಶಾಂತಿ,ನೆಮ್ಮದಿ ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ರಾಮಚಂದ್ರಪ್ಪ, ಗ್ರಾಮ ಪಂಚಾಯತಿ ಸದಸ್ಯ ಗೋಪಾಲ್, ಶಿಕ್ಷಕರಾದ ನಾಗರಾಜ್, ಸುಧಾಕರ್, ಮಂಜುನಾಥ್, ಶ್ರೀನಿವಾಸ್, ಬಾಲಾಜಿ,ರಾಮಚಂದ್ರ,ನವೀನ್, ಮುರಳಿ, ಮುನಿಯಪ್ಪ,ವೆಂಕಟರಾಮ, ರಾಘವೇಂದ್ರರಾವ್, ಅಶ್ವಥ್ ಮೊದಲಾದವರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code