News & Updatesಚಿಕ್ಕಮಗಳೂರುಮಲೆನಾಡು

ಸಾಗುವಾನಿ ಮರ ಕಡಿದು ಸಾಗಿಸುತ್ತಿದ್ದಾಗ ಆರೋಪಿಗಳ ಬಂಧನ

ಸಾಗುವಾನಿ ಮರ ಕಡಿದು ಸಾಗಿಸುತ್ತಿದ್ದಾಗ ಆರೋಪಿಗಳ ಬಂಧನ

(ಚಿಕ್ಕಮಗಳೂರು – ಸೆ- 04) ಬಾಳೆಹೊನ್ನೂರು ಬಸವನಕೋಟೆ ಮೀಸಲು (RF) ಅರಣ್ಯದಲ್ಲಿ ಅಕ್ರಮವಾಗಿ ಸಾಗುವಾನೆ ಮರ ಕಡಿದು ಸಾಗಾಟ ಆರೋಪದ ಮೇಲೆ ನಾಲ್ವರು ಆರೋಪಿಗಳನ್ನು ಬಾಳೆಹೊನ್ನೂರು ವಲಯ ಅರಣ್ಯ ಇಲಾಖೆ ಸಿಬ್ಬಂದಿ ಸೋಮವಾರ ಬಂಧಿಸಿದ್ದಾರೆ. ಅಂಡವಾನೆಯ ಎ.ಎನ್.ಆರ್ಥೇಶ್, ಹುಯಿಗೆರೆ ಗ್ರಾಮದ ಎ.ರ್ಆ.ಪ್ರದೀಪ್,

ಎ.ಎಲ್.ಮಂಜುನಾಥ್, ಕೆ.ಜಿ.ಧರ್ಮಪ್ಪ ಬ೦ಧಿತ ಆರೋಪಿಗಳು, ಆರ್ಥೇಶ್, ಪ್ರದೀಪ್, ಮಂಜುನಾಥ್‌ ಮೂವರು ಸೇರಿ ಭಾನುವಾರ ರಾತ್ರಿ ಬಸವನಕೋಟೆ ಮೀಸಲು ಅರಣ್ಯದ ಸಾಗುವಾಣಿ ನೆಡುತೋಪಿನಲ್ಲಿ ಬೆಳೆದಿದ್ದ ಬೃಹತ್ ಸಾಗುವಾನೆ ಮರವೊಂದನ್ನು ಅಕ್ರಮವಾಗಿ ಕಡಿದು ದಿಮ್ಮಿಗಳನ್ನಾಗಿ ತಯಾರಿಸಿ ಸಾಗಾಟಕ್ಕೆ ಸಿದ್ಧತೆ ನಡೆಸಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಅಕ್ರಮ ಮರ ಕಡಿದಿರುವುದು ಬೆಳಕಿಗೆ ಬಂದಿದೆ.

ಈ ಮೂವರು ಆರೋಪಿಗಳು ಮರವನ್ನು ಕೆ.ಜಿ.ಧರ್ಮಪ್ಪ ಅವರಿಗೆ ಮಾರಾಟ ಮಾಡಲು ಸಾಗುವಾನೆ ಮರಗಳು ಕಡಿದಿದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ. ಆರೋಪಿಗಳಿಂದ 8 ಸಾಗುವಾನೆ ಮರದ ದಿಮ್ಮಿಗಳು ಹಾಗೂ ಮರ ಕಡಿಯಲು ಬಳಸಿದ್ದ ಗರಗಸ, ಕೊಡಲಿ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ಚಿಕ್ಕಮಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಎಸಿಎಫ್ ಚೇತನ್ ಮಂಗಲ್‌ ಗಸ್ತಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Scan the code