ಮಾಹಿತಿ ಹಕ್ಕು ವೇದಿಕೆ ಮಾಸಿಕ ಸಭೆ ಹಾಗೂ ಕಾರ್ಯಾಗಾರ
(SHIVAMOGA): ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ (ರಿ), ಶಿವಮೊಗ್ಗ ಜಿಲ್ಹಾ ಘಟಕ ದ ವತಿಯಿಂದ ಇಂದು ಶಿವಮೊಗ್ಗ ನಗರದ ಬಸವಸನಗುಡಿಯ ಜಿಲ್ಲಾ ವಿಕಾಸ ಕೇಂದ್ರದಲ್ಲಿ ಮಾಸಿಕ ಸಭೆ ಹಾಗೂ ಕಾರ್ಯಾಗಾರ ನೆಡೆಯಿತು.
ಕಾರ್ಯಾಗಾರದಲ್ಲಿ ಮಾಹಿತಿ ಹಕ್ಕಿನಡಿ ಸಾರ್ವಜನಿಕರು ಸರ್ಕಾರಿ ಇಲಾಖೆಗಳಲ್ಲಿ ದಾಖಲೆಗಳನ್ನು ಪಡೆಯಲು ಯಾವ ರೀತಿ ಅರ್ಜಿ ಹಾಕಬೇಕು. ಅದರ ಸೆಕ್ಷನ್ ಗಳೊಂದಿಗೆ ಸಂಪೂರ್ಣವಾಗಿ ಸಂಪನ್ಮೂಲ ವ್ಯಕ್ತಿಗಳಾದರಾಷ್ಟ್ರೀಯ ಮಾನವ ಹಕ್ಕು ಸೇವಾ ಸಮಿತಿ ಹಾಗೂ ಮಾಹಿತಿ ಹಕ್ಕು ಹೋರಾಟ ಸಮಿತಿಯ ರಾಜ್ಯ ಕಾರ್ಯಧ್ಯಕ್ಷರಾದ ಸುರೇಶ್ ರವರು ವಿವರಿಸಿದರು.
ಈ ಕಾರ್ಯಾಗಾರದ ಅಧ್ಯಕ್ಷತೆಯನ್ನು ಕರ್ನಾಟಕ ಮಾಹಿತಿ ಹಕ್ಕು ವೇದಿಕೆಯ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ರಾಘವೇಂದ್ರ ತಾಳಗುಪ್ಪ, ದಾವಣಗೆರೆ ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀನಿವಾಸ್, ಧಾರವಾಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಪರಶುರಾಮ್ ಜೆ ಬಗಲಿ ಉಪಸ್ಥಿತರಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ