ಚಿಕ್ಕಮಗಳೂರುನ್ಯೂಸ್

ಚಾರ್ಮಾಡಿ ಘಾಟಿಯಲ್ಲಿ ಮದ್ಯಪಾನ ಸೇವಿಸಿ ನಾಲ್ವರು ಯುವಕರಿಂದ ಗಲಾಟೆ : ಪ್ರಕರಣ ದಾಖಲು.

ಚಾರ್ಮಾಡಿ ಘಾಟಿಯಲ್ಲಿ ಮದ್ಯಪಾನ ಸೇವಿಸಿ ನಾಲ್ವರು ಯುವಕರಿಂದ ಗಲಾಟೆ : ಪ್ರಕರಣ ದಾಖಲು.

(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ರಾಷ್ಟ್ರೀಯ ಚಾರ್ಮಾಡಿ ಘಾಟಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಸೇವಿಸಿ ಗಲಾಟೆ ಮಾಡಿಕೊಂಡ ಆರೋಪದ ಮೇಲೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.


ಚಾರ್ಮಾಡಿ ಘಾಟಿಯಲ್ಲಿ ಬೆಂಗಳೂರು ಮೂಲದ ಪುನೀತ್ ಕುಮಾರ್, ಶಿವು, ವಿಜಯ್, ಸತ್ಯ, ಮದ್ಯಪಾನ ಮಾಡಿ ಗಲಾಟೆ ಮಾಡಿಕೊಂಡಿದ್ದಾರೆ. ಬಳಿಕ ಒಬ್ಬರಿಗೊಬ್ಬರು ಕೈ ಕೈ ಮಿಲಾಯಿಸಿ ಬೀದಿಜಗಳ ಮಾಡಿದ್ದರೆ. ಪೊಲೀಸರ ಎದುರೇ ಕೈ ಕೈ ಮಿಲಾಯಿಸಿದ್ದಾರೆ. ವಾಹನ ಸಂಚಾರಕ್ಕೂ ಅಡ್ಡಿ ಉಂಟಾಗಿದೆ ಈ ಸಂದರ್ಭದಲ್ಲಿ


ಕೊಟ್ಟಿಗೆಹಾರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಮದ್ಯಪಾನ ಮಾಡಿ ಚಾಲನೆ ಮಾಡಿದ ಆರೋಪದ ಮೇಲೆ ಚಾಲಕ ಬೆಂಗಳೂರಿನ ಪುನೀತ್ ಗೌಡ ವಿರುದ್ಧ ಮೂಡಿಗೆರೆ ತಾಲ್ಲೂಕು ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣ ದಾಖಲಿಸಲಾಗಿದೆ.

Leave a Reply

Your email address will not be published. Required fields are marked *

Scan the code