ಚಿಕ್ಕಮಗಳೂರುನ್ಯೂಸ್

“ದತ್ತಪೀಠ ಅರ್ಚರಕರ ಸಂಭಾವನೆಗಾಗಿ ಜೋಳಿಗೆ ಅಭಿಯಾನ- ಆರ್ ಡಿ ಮಹೇಂದ್ರ”

“ದತ್ತಪೀಠ ಅರ್ಚರಕರ ಸಂಭಾವನೆಗಾಗಿ ಜೋಳಿಗೆ ಅಭಿಯಾನ- ಆರ್ ಡಿ ಮಹೇಂದ್ರ”

(CHIKKAMAGALURU): ರಾಜ್ಯಸರ್ಕಾರವು ದತ್ತಪೀಠದ ವಿಚಾರದಲ್ಲಿ ಕೋರ್ಟ್ ನ ಆದೇಶವನ್ನು ದಿಕ್ಕರಿಸಿರುವುದಲ್ಲದೇ ಇಲ್ಲೂ ಸಹ ಹಿಂದು ವಿರೋಧಿ ನೀತಿ ಅನುಸರಿಸುತ್ತಿದೆ.  ಹಿಂದು ಅರ್ಚಕರ ನೇಮಕಾತಿ ಕೋರ್ಟಿನ ಆದೇಶದ ನಂತರ ಇದುವರೆಗೂ ಜಿಲ್ಲಾಡಳಿತ ಅರ್ಚಕರ ಸಂಭಾವನೆ ನೀಡದೇ ಮುಜಾವರ್ ಗೆ ಮಾತ್ರ ತಿಂಗಳ ಸಂಬಳ ನೀಡುತ್ತಾ ರಾಜ್ಯ ಸರ್ಕಾರ ತನ್ನ ಇಬ್ಬಗೆಯ ನೀತಿಯನ್ನು ಪ್ರದರ್ಶಿಸುತ್ತಿದೆ.

ಇದು ಈಗೆ ಮುಂದುವರೆದರೇ ವಿಶ್ವಹಿಂದೂ ಪರಿಷತ್ ಬಜರಂಗಳದಿoದ ರಾಜ್ಯಾದ್ಯಂತ ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ದ “ಜೋಳಿಗೆ ಅಭಿಯಾನ” ಆರಂಭಿಸಲಾಗುವುದೆoದು ಎಂದು  ವಿಶ್ವಹಿಂದೂ ಪರಿಷತ್ ಹಾಸನವಿಭಾಗ ಸಹಕಾರ್ಯದರ್ಶಿ ಆರ್ ಡಿ ಮಹೇಂದ್ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಸರ್ಕಾರ ಕೋರ್ಟ್ ಆದೇಶದಂತೆ ಕ್ಯಾಬಿನೇಟ್ ಉಪಸಮಿತಿ ರಚಿಸಿ ದತ್ತಪೀಠದ ಸತ್ಯಸತ್ಯತೆಯನ್ನು ಸಾರ್ವಜನಿಕರ ಅಭಿಪ್ರಾಯದ ಪಡೆದು ಮತ್ತು ದತ್ತಪೀಠದ ಸ್ಥಳ ತನಿಖೆ ಮಾಡಿ ಇತಿಹಾಸವನ್ನು ಕೋರ್ಟ್ ನ ಮುಂದಿರಿಸಿ ಇದರ ಅನ್ವಯ ದಿನಾಂಕ 23-03-2023 ಅರ್ಚಕರನ್ನು ನೇಮಿಸಿದ್ದು ಸರಿಯಷ್ಟೇ. ದಿನಾಂಕ  28-03-2024 ರಂದು ಇಬ್ಬರು ಅರ್ಚಕರು ದತ್ತಪೀಠಕ್ಕೆ ನೇಮಿಸಿದ್ದು ಅಂದಿನಿoದ ಇಂದಿನವರೆಗೂ ಕೊರ್ಟಿನ ಆದೇಶದಂತೆ “ಆಗಮ ಪದ್ಧತಿಯ” ಪ್ರಕಾರ  ದತ್ತಪೀಠದಲ್ಲಿ ತ್ರಿಕಾಲ ಪೂಜೆ ನೆರವೇರುತಿದ್ದು ಆದರೇ ಇದುವರೆಗೂ ಅರ್ಚಕರಿಗೆ ಯಾವುದೇ ಸಂಭಾವನೆ ಹಣ ನೀಡಿರುವುದಿಲ್ಲ. ಇದಕ್ಕೆ ಸಂಭoದಪಟ್ಟoತೆ ಸರ್ಕಾರಕ್ಕೂ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳವರಿಗೂ ಮತ್ತು ದತ್ತಪೀಠ ವ್ಯವಸ್ಥಾಪನಾ ಸಮಿತಿಗೆ ಹಲವು ಬಾರಿ ಮನವಿ ಕೊಟ್ಟಿದ್ದರು ಕೂಡಾ ಗಣನೆಗೆ ತೆಗೆದುಕೊಂಡಿಲ್ಲ.


ಮೂಲತ: ದತ್ತಪೀಠ ಹಿಂದೂಗಳ ಶ್ರದ್ಧಾಕೇಂದ್ರ. ಇಲ್ಲಿ ಆಗಮ ಪದ್ಧತಿಯ ಪ್ರಕಾರ ನಿತ್ಯ ಪೂಜೆ ನೆರವೇರಿಸಲು ದಿನನಿತ್ಯ ಪೂಜಾ ಸಾಮಾಗ್ರಿಗಳ ಅಗತ್ಯತೆ ಇದ್ದೇ ಇರುತ್ತದೆ. ಆದರೇ ಜಿಲ್ಲಾಧಿಕಾರಿಗಳು ಮತ್ತು ವ್ಯವಸ್ಥಾಪನಸಮಿತಿ ಇದುವರೆಗೂ ಒಂದೇ ಒಂದು ಪೂಜಾ ಸಾಮಾಗ್ರಿ ನೀಡಿಲ್ಲ. ಜಿಲ್ಲಾಧಿಕಾರಿಗಳು ಬೇಕೆಂದೇ ಹಿಂದುಗಳ ಧಾರ್ಮಿಕ ಆಚರಣೆಗೆ ಅಡಚಣೆ ತರುವ ಉದ್ದೇಶದಿಂದ ಇದುವರೆಗೂ ಒಂದೇ ಒಂದು ರೂ ಗಳನ್ನು ಬಿಡುಗಡೆ ಮಾಡಿಲ್ಲ.
ಮಾತೆತ್ತಿದರೇ ದತ್ತಪೀಠದ ಆಧಾಯದ ಬಗ್ಗೆ ಮಾತನಾಡುವ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾಡಳಿತ ಹಿಂದು ಅರ್ಚಕರ ನೇಮಕ ಆಗುವ ಮೊದಲು ದತ್ತಪೀಠದಲ್ಲಿ ಕಾಣಿಕೆ ಹುಂಡಿಯಿoದ ಕೇವಲ 5ರಿಂದ 6 ಲಕ್ಷ ಆಧಾಯ ಇಂದು ಅರ್ಚಕರ ನೇಮಕವಾದ ನಂತರ ವಾರ್ಷಿಕ 18 ರಿಂದ 20 ಲಕ್ಷಕ್ಕೆ ಹೆಚ್ಚಾಗಿದ್ದು ಅಂದರೇ ಅರ್ಥ ಭಕ್ತಾದಿಗಳು ಶ್ರದ್ಧೆಯಿಂದ ಪೂಜಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆಂದು ಅರ್ಥ. ಇಷ್ಟೇ ಅಲ್ಲದೇ ದತ್ತ ಪೀಠದ ಆವರಣದಲ್ಲಿ ಸಾಕಷ್ಟು ವಾಣಿಜ್ಯ ಮಳಿಗೆಗಳಿದ್ದು ಮತ್ತು ನೆಲಬಾಡಿಗೆ ಬರುತಿದ್ದು ಇದ್ಯಾವುದನ್ನು ಕೂಡ ಒಂದು ವರ್ಷದಿಂದ ಇತ್ತೀಚಿಗೆ ಹರಾಜು ಕರೆಯದೇ ನೇರವಾಗಿ ಒಬ್ಬನ ಹೆಸರಿಗೆ ಹಣ ಸಂಗ್ರಹವಾಗುತ್ತಿದೆ ಇದು ಸರಿಯಾದ ಕ್ರಮವಲ್ಲ. ಕೂಡಲೇ ಜಿಲ್ಲಾಧಿಕಾರಿಗಳು ದತ್ತಪೀಠದ ಕೋಟಿರೂಗಳಿಗೂ ಹೆಚ್ಚು ಆದಾಯ ಸೋರಿಕೆ ಯಾಗುತ್ತಿರುವುದನ್ನು ಸರಿಪಡಿಸಬೇಕು. ಇಷ್ಟೆಲ್ಲ ಆದಾಯವಿರುವ ದೇವಸ್ಥಾನದ ನಿತ್ಯ ಪೂಜೆ ಮಾಡುವ ಅರ್ಚಕರುಗಳಿಗೆ ಸಂಭಾವನೆ ಕೊಡಲು ಹಣ ವಿಲ್ಲವೆನ್ನುವ ಜಿಲ್ಲಾಧಿಕಾರಿಗಳು ದೂಪ ಮಾಡುವ ಮುಜಾವರ್ ಗಳಿಗೆ ಪ್ರತಿ ತಿಂಗಳು ತಫ್ಫದೇ ಸಂಬಳ ನೀಡಲು ಹಣವಿದೆ ಎಂದಾದರೇ ಇದು ಯಾವ ನ್ಯಾಯ?


ಪ್ರತಿನಿತ್ಯ ಅರ್ಚಕರು ಪೂಜಾ ಕೈಕರ್ಯ ಮುಗಿದ ಮೇಲೆ ಸಂಜೆ ಸಮಯದಲ್ಲಿ ಮುಜಾವರ್ ದತ್ತಪೀಠದ ಒಳಾಂಗಣದಲ್ಲಿ ದೂಪ ಮಾಡುವಾಗ ಒಬ್ಬರೇ ಹೋಗಬೇಕು ಆದರೇ ಸದ್ಯ ಹಾಲಿ ಇರುವ ಮುಜಾವರ್ ತನ್ನ ಹತ್ತಿಪ್ಪತ್ತು ಜನ ಪಟಾಲಂ ನೊಂದಿಗೆ ಹೋಗಿ ಘೋಷಣೆ ಕೂಗುತ್ತಾ ಹೋಗುವುದು ಸರಿಯಲ್ಲ ಅಲ್ಲದೇ ಪೀಠದ ಒಳಾಂಗಣದಲ್ಲಿ ದತ್ತ ಪಾದುಕೆ ಮತ್ತು ಸಾಕಷ್ಟು ಪೂಜಾ ಸಾಮಾಗ್ರಿ ಮತ್ತು ಪರಿಕರಗಳು ಇರುತ್ತವೆ ಮುಂದಿನದಿನಗಳಲ್ಲಿ ಅವುಗಳಿಗೆ ಹಾನಿಯಾದರೇ ಜಿಲ್ಲಾ ಆಡಳಿತ ಮತ್ತು ವ್ಯವಸ್ಥಾಪನಾ ಸಮಿತಿಯೇ ನೇರ ಹೊಣೆ ಎಂದು ತಿಳಿಸಿದ್ದಾರೆ. ಅಲ್ಲದೇ ದತ್ತಪೀಠದದ ಒಳಾಂಗಣದಲ್ಲಿ ದಿನನಿತ್ಯ ಪೋಲಿಸ್ ಇರಬೇಕೆಂದು ಕೋರ್ಟ್ ಆದೇಶವಿದ್ದರೂ ಒಬ್ಬರೇ ಒಬ್ಬ ಪೋಲಿಸ್ ಇರುವುದಿಲ್ಲ. ಅಲ್ಲದೇ ದಿನನಿತ್ಯ ಬೇರೆ ಬೇರೆ ರಾಜ್ಯದಿಂದ ಮತ್ತು ರಾಜ್ಯದ ನಾನಾ ಭಾಗದಿಂದ ಅನ್ಯಮತದವರು ಬರುತಿದ್ದು ಅವರು ಬಂದಾಗ ಗರ್ಭಗುಡಿಯಲ್ಲಿ ಪೂಜೆ ಮಾಡುವಂತ ಅರ್ಚಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮತ್ತು ಬೆದರಿಸುವಂತ ಪ್ರಕರಣ ಹೆಚ್ಚಾಗುತ್ತಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಅರ್ಚರಿಗೆ ಹೆಚ್ಚಿನ ಪೋಲಿಸಿ ನಿಯೋಜಿಸಿ ಸೂಕ್ತ ಭದ್ರತೆ ಒದಗಿಸಬೇಕೆಂದು ಆರ್ ಡಿ ಮಹೇಂದ್ರ ಆಗ್ರಹಿಸಿದ್ದಾರೆ.


ಇನ್ನು ಚುನಾವಣಾ ನೀತಿ ಸಂಹಿತೆ ಮುಗಿದ ಒಂದು ತಿಂಗಳ ಒಳಗೆ ಅರ್ಚರಕರ ಸಂಭಾವನೆ ಹಣ ನೀಡದಿದ್ದರೇ ಸರ್ಕಾರ ಮತ್ತು ಜಿಲ್ಲಾಡಳಿತ ಹಾಗೂ ವ್ಯವಸ್ಥಾಪನ ಸಮಿತಿಯ ವಿರುದ್ಧ ವಿಶ್ವಹಿಂದೂ ಪರಿಷತ್ ಬಜರಂಗದಳ ರಾಜ್ಯಪ್ಯಾಪಿ ಅರ್ಚಕರ ಸಂಭಾವನೆಗೆ “ಜೋಳಿಗೆ ಅಭಿಯಾನ” ವನ್ನು  ಆರಂಭಿಸಿ ಕಾರ್ಯಕರ್ತರು ಪ್ರತಿ ಹಿಂದೂ ಮನೆ ಮನೆಗೆ ತೆರಳಿ ಬಿಕ್ಷಾಟನೆ ಮಾಡಿ  ಅರ್ಚಕರಿಗೆ ಸಂಭಾವನೆ ನೀಡಲಾಗುದೆಂದು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

Scan the code