ಪಕ್ಷದ ಪರವಾಗಿ ಕೆಲಸ ಮಾಡಿದರೆ ಮಾತ್ರ ನಮ್ಮ ಅಭ್ಯರ್ಥಿ ಗೆಲ್ಲಲು ಸಾದ್ಯ ಬೆಳೂರು ಗೋಪಾಲಕೃಷ್ಣ.
(SHIVAMOGA): ಪಕ್ಷದ ಪರವಾಗಿ ಎಲ್ಲರೂ ಕೆಲಸ ಮಾಡೋಣ. ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಎಲ್ಲರಿಗೂ ಸ್ನೇಹಿತರಿದ್ದಾರೆ. ನಾವೆಲ್ಲರೂ ಒಂದಾಗಿ ಸರಕಾರದ ಸಾಧನೆಯನ್ನು ಪ್ರತಿ ಮನೆಗೂ ತಲುಪಿಸುವ ಮಾತನಾಡಿ, ಪಕ್ಷಕ್ಕೆ ಆಶೀರ್ವದಿಸುವ ಕಾರ್ಯ ಮಾಡೋಣ.
ನೀತಿ ಸಂಹಿತೆ ಇರುವುದರಿಂದ ಅಭಿವೃದ್ಧಿ ಕೆಲಸ ಮಾಡುವುದು ಅಸಾಧ್ಯ ಆದರೂ ಸರಕಾರ ಎಷ್ಟೇ ಅಭಿವೃದ್ಧಿ ಕೆಲಸ ಮಾಡಿದರು ಸರಕಾರ ಬೀಳಿಸುವ ಮಾತನಾಡಿ ಗೊಂದಲ ಸೃಷ್ಟಿಸುವ ಕಾರ್ಯದಲ್ಲಿ ವಿರೋಧಿಗಳು ತೊಡಗಿಕೊಂಡಿದ್ದಾರೆ.
ಯಾರೇ ತಪ್ಪು ಮಾಡಿದರೂ ಶಿಕ್ಷೆ ಆಗಬೇಕು.
ಪ್ರಜ್ವಲ್ ಪ್ರಕರಣದಲ್ಲಿ ವಿರೋಧಿಗಳು ಸಿಬಿಐ ಗೆ ಒಪ್ಪಿಸುವಂತೆ ಆಗ್ರಹಿಸುತ್ತಿದ್ದಾರೆ. ಹಾಲಪ್ಪ ಪ್ರಕರಣದಲ್ಲಿ ಬಿಜೆಪಿ ಏನು ಮಾಡಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ .
ಮೋದಿಯವರ ಹಿಂದುತ್ವವು ಬದಲಾಗುತ್ತಿದೆ. ಅವರಿಗೂ ಸೊಲಿನ ಪೆಟ್ಟಿನ ರುಚಿ ನೋಡಿದ್ದಾರೆ. ಯುವಕರಿಗೆ ಕೆಲಸ ಕೊಡಿಸುವ ಭರವಸೆ ಸುಳ್ಳಾಗಿದೆ. ಮುಸಲ್ಮಾನರಿಗೆ ಸಮಾನತೆ ಕೊಟ್ಟಿದ್ದೇನೆ ಎನ್ನುವ ಮಾತನಾಡುತ್ತಿದ್ದಾರೆ.
ಈಗಲಾದರೂ ಅವರಿಗೆ ನಮ್ಮ ಕಾಂಗ್ರೆಸ್ ನ ಸಮಾನತೆಯ ಅರ್ಥ ಆಗುತ್ತಿದೆ. ಹೀಗಾಗಿಯೇ ಎಲ್ಲರೂ ಒಂದೇ ಎನ್ನುತ್ತಿದ್ದಾರೆ.
ಇಂದಿನಿಂದ ಪಕ್ಷ ಸಂಘಟನೆ ಕಾರ್ಯದಲ್ಲಿ ಎಲ್ಲರೂ ಸಕ್ರಿಯ ವಾಗಬೇಕು. ಎಲ್ಲಾ ವಿಭಾಗದವರೂ ಎಲ್ಲ ವಿಂಗ್ ನವರಿಗೂ ಕಚೇರಿ ಕೊಟ್ಟು ಕಾರ್ಯ ವೈಖರಿ ಗಮನಿಸುತ್ತೇನೆ. ವರ್ಷಕ್ಕೊಮ್ಮೆ ಸಭೆ ನಡೆಸಿ ಅವರ ಸಾಧನೆ ಗಮನಿಸುತ್ತೇನೆ.
ಕಾರ್ಯಕರ್ತರು ಜನರ ಪರವಾಗಿ ಕೆಲಸ ಮಾಡಿದಾಗ ಮಾತ್ರ ನಮ್ಮೊಳಗಿನ ನಾಯಕತ್ವ ಹೊರಬರಲು ಸಾಧ್ಯ.
ಎಲ್ಲರೂ ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಪಕ್ಷ ಗಟ್ಟಿಯಾಗಲು ಸಾಧ್ಯ.
ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಜಯಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಉಷಾ, ಗಣಪತಿ ಮಂಡಗಳಲೇ, ಮಧು ಮಾಲತಿ, ಅಶೋಕ್ ಬೇಳೂರು, ಹೊಳೆಯಪ್ಪ, ವೀರೇಶ್ ಗೌಡರು, ಮಕ್ಬೂಲ್ ಅಹಮದ್, ರವಿ ಗೌಡ, ಕನ್ನಪ್ಪ, ದಿನೇಶ್, ಸುರೇಶ್ ಬಾಬು
ವರದಿ: ರಾಘವೇಂದ್ರ ತಾಳಗುಪ್ಪ