ಪೈಪ್ ಕಳ್ಳತನ ಮಾಡಿದ ಖದೀಮನನ್ನು ಬಂಧಿಸಿದ ಸಾಗರ ಗ್ರಾಮಾಂತರ ಪೋಲಿಸ್ ಇಲಾಖೆ.
(SHIVAMOGA): ಸಾಗರ: ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಗ್ಗೋಡು ಗ್ರಾಮದ ಕೇಡಲಸರ ಸಂಸ್ಕೃತ ಶಾಲಾ ಆವರಣದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅಳವಡಿಸಲು ಸಂಗ್ರಹಿಸಿಟ್ಟಿದ್ದ ಪೈಪ್ಗಳನ್ನು ಯಾರೋ ಕಳ್ಳರು ದಿನಾಂಕ:-22-10-2023 ರಿಂದ 25-10-2023 ರ ಮಧ್ಯದ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದು
ಈ ಬಗ್ಗೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 214/2023 ಕಲಂ 379 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ.
ಸದರಿ ಪ್ರಕರಣದ ಮಾಲು ಮತ್ತು ಆರೋಪಿಗಳ ಪತ್ತೆಗಾಗಿ ಮಿಥುನ್ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮತ್ತು ಅನಿಲ್ ಕುಮಾರ್ ಭೂಮಾರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ ಮಾರ್ಗದರ್ಶದಲ್ಲಿ ಸಾಗರ ಡಿ ವೈ ಎಸ್ ಪಿ. ಗೋಪಾಲಕೃಷ್ಣ ನಾಯ್ಕ ಟಿ. ಪೊಲೀಸ್ ಉಪಾಧೀಕ್ಷಕರು ಉಪವಿಭಾಗರವರ ಮಾರ್ಗದರ್ಶನ ದಲ್ಲಿ ಒಂದು ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದರು
ಹಿಂದೆ ಸಾಗರ ನಗರದಲ್ಲಿ ಖಡಕ್ ಅಧಿಕಾರಿಯಾಗಿ ಕೆಲಸ ಮಾಡಿದ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ಮಹಾಬಲೇಶ್ವರ ನಾಯ್ಕ್ , ಪಿಎಸ್ಐ ನಾರಾಯಣ ಮಧುಗಿರಿ, ಹಾಗೂ ಪೊಲೀಸ್ ಸಿಬ್ಬಂಧಿಗಳಾದ ಸಿಹೆಚ್ ಸಿ, 66 ಸನಾವುಲ್ಲಾ, ಸಿಹೆಚ್ ಸಿ 299 ಷೇಖ್ ಫೈರೋಜ್ ಅಹಮದ್ ಸಿಪಿಸಿ 1361 ರವಿಕುಮಾರ್
ಈ ಪ್ರಕರಣದ ಆರೋಪಿ ವೇಗರಾಜ್ ರಾಜ್ ತಂದೆ ಗಿರಿಯಪ್ಪ, 40 ವರ್ಷ, ಈಡಿಗರ ಜಾತಿ, ಡ್ರೈವರ್ ಕೆಲಸ ವಾಸ ಹೊಸೂರು, ಹೊಸೂರು ಅಂಚೆ ಸಾಗರ ತಾಲ್ಲೂಕ್ ಈತನನ್ನು ದಿನಾಂಕ:-06-11-2023 ರಂದು ವಶಕ್ಕೆ ಪಡೆದಿದ್ದು ಈತನು ಇತರೆ 3 ಜನ ಆರೋಪಿಗಳೊಂದಿಗೆ ಸೇರಿ ಕೃತ್ಯವೆಸಗಿದ್ದು, ಸದರಿ ಆರೋಪಿಗಳು ಕಳ್ಳತನ ಮಾಡಿದ 1.15,000/- ರೂ ಬೆಲೆಯ 1000 ಮೀಟರ್ ಉದ್ದದ 5 ಪೈಪ್ ಬಂಡಲ್ಗಳನ್ನು ಮತ್ತು ಕೃತ್ಯಕ್ಕೆ ಬಳಸಿದ 1.50.000./- ರೂ ಬೆಲೆಯ ಒಂದು ಕೆಎ-19-ಎಬಿ-4287 ನೇ ಟಾಟಾ ಸುಪರ್ ಎಸ್ ಮಿಂಟ್ ವಾಹನವನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಈ ಬಗ್ಗೆ ಆರೋಪಿ ಮತ್ತು ಮಾಲು ಪತ್ತೆ ಕಾರ್ಯದಲ್ಲಿ ಪಾಲ್ಗೊಂಡ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಪೊಲೀಸ್ ಅಧೀಕ್ಷಕರು ಅಭಿನಂದನೆ ಸಲ್ಲಿಸಿರುತ್ತಾರೆ
ಉಮೇಶ್ ಮೊಗವೀರ ಸುದ್ದಿ ಸಾಗರ.