ಸಾಗರ ತಾಲೂಕಿನ ಸಾಗರ ತಾಳಗುಪ್ಪ ಹ್ಯೆವೇ ರಸ್ತೆಯಲ್ಲಿ ಕಳೆದ ಒಂದು ವರ್ಷದಿಂದ ನಾಮಫಲಕ ಇಲ್ಲ.
(SHIVAMOGA): ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗರ ತಾಳಗುಪ್ಪ ಮಾರ್ಗದ ಮರತ್ತೂರು ಸರ್ಕಲ್ ನಲ್ಲಿ ನಾಮಫಲಕ ಮುರಿದು ಬಿದ್ದು ಒಂದು ವರ್ಷ ಕಳೆದರು ಇದನ್ನು ಸರಿ ಪಡಿಸಲು ಯಾವ ಅಧಿಕಾರಿಗಳು ಗಮನ ಹರಿಸುತ್ತಾಯಿಲ್ಲ. ರಸ್ತೆ ಪ್ರಾಧಿಕಾರದ ಅಧಿಕಾರಗಳು ಅವರ ಜವಾಬ್ದಾರಿಯನ್ನು ಮರೆತು ಹೋಗಿದ್ದಾರೆ. ಇತ್ತ ಕಡೆ ಸ್ಥಳೀಯ ಆಡಳಿತ ಕೂಡಾ ಇದನ್ನು ಸರಿ ಪಡಿಸಲು ಮರೆತಂತೆಕಾಣಯತ್ತಿದೆ. ಪ್ರತಿ ದಿನ ಸಾವಿರಾರು ಪ್ರವಾಸಿಗರು .ಇ ರಸ್ತೆಯಲ್ಲಿ ಸಂಚಾರ ಮಾಡ್ತಾ ಇದ್ದು ಇಲ್ಲಿ ನಾಮಫಲಕ ಅವಶ್ಯಕತೆ ಇದೆ ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ಬಂದಿಲ್ಲವೆ ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ. ಇನ್ನಾದರು ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ರಸ್ತೆಯಲ್ಲಿ ನಾಮಫಲಕ ಹಾಕಬೇಕು.
ವರದಿ: ರಾಘವೇಂದ್ರ ತಾಳಗುಪ್ಪ