ಸಾಗರ ತಾಲ್ಲೂಕಿನ ಆರಕ್ಷಕ ಸಿಬ್ಬಂದಿಗಳಿಂದ ಮುಖ್ಯ ರಸ್ತೆಗಳಲ್ಲಿ ಪತ ಸಂಚಲನ!
(ಶಿವಮೊಗ್ಗ):ಸಾಗರದಲ್ಲಿ ಗಣೇಶ ಹಬ್ಬಕ್ಕೆ ಯಾವುದೆ ಅಹಿತಕರ ಘಟನೆಗಳು ನಡೆಯದಂತೆ ಆರಕ್ಷಕ ಇಲಾಖೆಯಿಂದ ಪೂರ್ಣ ಸಿದ್ದತೆ ನಡೆಸಿದ್ದು.
ಸಾಗರ ತಾಲೂಕಿನಲ್ಲಿ ಸರಿ ಸುಮಾರು 60 ರಿಂದ 70 ಗಣಪತಿಗಳು ಪ್ರತಿಷ್ಟಾಪನೆಗೊಂಡಿದ್ದು, ಗಣೇಶ ಹಬ್ಬಕ್ಕೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಆರಕ್ಷಕ ಇಲಾಖೆಯಿಂದ ಪೂರ್ಣ ಸಿದ್ದತೆ ನಡೆಸಲಾಗಿದೆ. ಇದಕ್ಕೆ ಆಯಾ ಕಮಿಟಿಯ ಸದಸ್ಯರು ಹಾಗೂ ಪೊಲೀಸ್ ಸಿಬ್ಬಂದಿಗಳು ಅಲ್ಲಿ ಹಾಜರಿದ್ದು ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ಹಾನಿ ಆಗದಂತೆ ಕ್ರಮ ಜರುಗಿಸಲಾಗಿದೆ ಎಂದು ಸಾಗರ ಉಪ ರಕ್ಷಣಧಿಕಾರಿಗಳಾದ ಶ್ರೀ ಗೋಪಾಲ ಕೃಷ್ಣ ರವರು ಈ ಮೂಲಕ ತಿಳಿಸಿದ್ದಾರೆ. ಹಾಗೂ ಸಾಗರ ನಗರದ ಪ್ರಮುಖ ರಸ್ತೆಗಳಲ್ಲಿ ಪತ ಸಂಚಲನ ಮಾಡಿದರು.
ವರದಿ ರಾಘವೇಂದ್ರ ತಾಳಗುಪ್ಪ