ನ್ಯೂಸ್ಶಿವಮೊಗ್ಗ

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಾಗರ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಾಗರ ದಸರಾ ಸಾಂಸ್ಕೃತಿಕ ವೈಭವ

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಾಗರ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಾಗರ ದಸರಾ ಸಾಂಸ್ಕೃತಿಕ ವೈಭವ

(SHIVAMOGA): ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಾಗರ
ಹಾಗೂ ವಿವಿಧ ಸಂಘಟನೆಗಳ ಒಕ್ಕೂಟಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಾಗರ ದಸರಾ ಸಾಂಸ್ಕೃತಿಕ ವೈಭವ ಕಾರ್ಯಕ್ರಮವು ಅಕ್ಟೋಬರ್ 21ರಂದು ಶನಿವಾರ ಸಂಜೆ ಗಾಂಧಿ ಮೈದಾನದಲ್ಲಿ ಸಡಗರ ಸಂಭ್ರಮದಿಂದ ನೆರವೇರಿತು .ಈ ಸಂದರ್ಭದಲ್ಲಿ ಹಿಂದುಸ್ತಾನಿ ಗಾಯಕ ರಾಘವೇಂದ್ರ ಭಟ್ ಹೆಗ್ಗೋಡು ಇವರ ಮನಸೂರೆಗೊಂಡ ಗಾಯನ ಮತ್ತೆ ಮತ್ತೆ ಕೇಳಬೇಕೆನಿಸಿತು.

ದೈವಜ್ಞ ಚಿನ್ನದ ಬಳಗ ಸಾಗರ ಇವರ ಚಂಡೆ ವೈವಿಧ್ಯ ವಿಶೇಷವಾಗಿತ್ತು, ಪರಿಣತಿ ಕಲಾ ತಂಡ ಸಾಗರವರ ಜಾನಪದ ನೃತ್ಯ ಆಕರ್ಷಕವಾಗಿತ್ತು, ಶಾರದಾಂಬ ಸಾಂಸ್ಕೃತಿಕ ಕಲಾ ಕೇಂದ್ರ ಇವರ ಭರತನಾಟ್ಯ, ಸ್ಟೈಲ್ ಡ್ಯಾನ್ಸ್ ಅಕಾಡೆಮಿ ಅವರ ಸ್ಟೈಲ್ ಡ್ಯಾನ್ಸ್, ಸಮೂಹ ನೃತ್ಯ ಹಾಗೂ ವಿಶೇಷವಾಗಿ ಶಿವ ನೃತ್ಯ ತಂಡದವರಿಂದ ಸಮೂಹ ನೃತ್ಯ ಕೊಡಚಾದ್ರಿ ವಸತಿ ಶಾಲೆ ವಿದ್ಯಾರ್ಥಿಗಳ ನೃತ್ಯ ಹಾಗೂ ವಿಸಂ ಪ್ರೌಢಶಾಲೆ ಕೇಡಲಸರ ವಿದ್ಯಾರ್ಥಿಗಳ ಜಾನಪದ ನೃತ್ಯ ವೈವಿಧ್ಯ ಹೀಗೆ ವಿಶೇಷವಾಗಿ ಸಾಂಸ್ಕೃತಿಕ ವೈಭವದ ಕಾರ್ಯಕ್ರಮ ಇದಾಗಿತ್ತು ಅಲ್ಲದೆ ಪುಟ್ಟ ಪುಟ್ಟ ಮಕ್ಕಳ ಜಾನಪದ ನೃತ್ಯ ಎಲ್ಲರ ಮನಸ್ಸಲ್ಲಿ ಉಳಿದುಹೋಗಿದೆ.

ಸಾಂಕೇತಿಕವಾಗಿ 15 ನಿಮಿಷಗಳ ಕಾಲ ನಡೆದ ಉದ್ಘಾಟನಾ ಕಾರ್ಯಕ್ರಮ ಜನ ಮೆಚ್ಚಿಗೆ ಪಡೆಯಿತು ಉಳಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಸಾಗರದ ಸಾಂಸ್ಕೃತಿಕ ಮನಸ್ಸುಗಳ ಸಮಾಗಮವಾಗಿತ್ತು ಇಂತಹ ಅಪರೂಪ ಸಾಂಸ್ಕೃತಿಕ ವೈಭವ ಸಾಗರ ದಸರಾ ಪ್ರಥಮ ಬಾರಿಗೆ ನಡೆದ ಈ ಕಾರ್ಯಕ್ರಮಕ್ಕೆ ಜನ ಮೆಚ್ಚಿಗೆ ವ್ಯಕ್ತವಾಗಿತ್ತು. ಅನೇಕ ಸಂಘಟನೆಗಳು ಈ ಕಾರ್ಯಕ್ರಮಕ್ಕೆ ಸಹಕಾರವನ್ನು ನೀಡಲಾಗಿತ್ತು .ಎಲ್ಲಾ ಸಾಂಸ್ಕೃತಿಕ ತಂಡಗಳು ಉಚಿತವಾಗಿ ಕಾರ್ಯಕ್ರಮಗಳನ್ನು ನೀಡುವ ಮೂಲಕ ಸಾಂಸ್ಕೃತಿಕ ಲೋಕಕ್ಕೆ ಮುನ್ನುಡಿ ಬರೆಯಲಾಗಿತ್ತು .ಇಂತಹ ಮನಸ್ಸುಗಳಿಂದ ಸಾಂಸ್ಕೃತಿಕ ಸಾಗರಕ್ಕೆ ನೆರವು ನೀಡುವ ಸಾಗರ ದಸರಾ ಕಾರ್ಯಕ್ರಮ ಮೊದಲ ಬಾರಿಗೆ ಯಶಸ್ವಿ ಕಂಡಿದ್ದು ವಿಶೇಷವಾಗಿತ್ತು .ಮುಂದಿನ ಬಾರಿ ಮೂರು ದಿನಗಳ ಕಾಲ ಸಾಗರ ದಸರವನ್ನು ನಡೆಸಲು ನೆರದಿದ್ದ ಜನ ಸಮ್ಮತಿಯನ್ನು ಸೂಚಿಸಲಾಗಿತ್ತು. ಸಾಂಸ್ಕೃತಿಕ ಸಾಗರಕ್ಕೆ ಸಾಂಸ್ಕೃತಿಕ ಸಂಘಟನೆಗಳ ನಿರಂತರ ಕಾರ್ಯ ಚಟುವಟಿಕೆಗಳು ಕಾರಣವಾಗಿದೆ ಎಲ್ಲಾ ಸಮಾನ ಮನಸ್ಕರು ಮನಸ್ಸು ಮಾಡಿದರೆ ಇಂತಹ ಅನೇಕ ಕಾರ್ಯಕ್ರಮಗಳು ಸಾಗರದಲ್ಲಿ ನಡೆಸಬಹುದು ಎನ್ನುವುದಕ್ಕೆ ಸಾಗರ ದಸರಾ ಪ್ರಥಮ ಕಾರ್ಯಕ್ರಮ ಸಾಕ್ಷಿಯಾಗಿದೆ. ಸಹಕರಿಸಿದ ಸಾಗರದ ಸಮಸ್ತ ಜನತೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹೃತ್ಪೂರ್ವಕವಾದ ಅಭಿನಂದನೆಗಳನ್ನು ಸಲ್ಲಿಸಲಾಗಿದೆ.

ಕಾರ್ಯಕ್ರಮವನ್ನು ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಶ್ರೀಮತಿ ಪ್ರಫುಲ್ಲ ಮಧುಕರ್ ಉದ್ಘಾಟಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮನಸು ಮನಸುಗಳನ್ನು ಕಟ್ಟಲು ಸಾಧ್ಯ ಸಾಗರದಲ್ಲಿ ನಿರಂತರವಾಗಿ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿರಲಿ ಎಂದು ಹೇಳಿದರು. ಕಸಾಪ ಅಧ್ಯಕ್ಷರಾದ ವಿ.ಟಿ
ಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು ಈ ಸಂದರ್ಭದಲ್ಲಿ ಖ್ಯಾತ ಇತಿಹಾಸ ಸಂಶೋಧಕರಾದ ಡಾ.ಕೆಳದಿ ಗುಂಡಾ ಜೋಯಿಸ್, ನಾಗೇಶ್ ಜಿ, ನಾರಾಯಣ ಮೂರ್ತಿ, ಲೋಕೇಶ್ ಕುಮಾರ್,ಬಿ.ಡಿ.ರವಿಕುಮಾರ್, ಡಾ.ಪ್ರಸನ್ನ ಟಿ ಮೊದಲಾದವರು ಉಪಸ್ಥಿತರಿದ್ದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code