ಸಂಡೂರು ಉಪಚುನಾವಣೆ | ಹಣದಿಂದ ಗೆಲ್ಲುವುದು ಅಸಾಧ್ಯ:ಎನ್ ವೈ ಗೋಪಾಲಕೃಷ್ಣ
(CHITRADURGA): ಸಂಡೂರು:ಇಂದು ಪಟ್ಟಣದ ಮೆಟ್ರಿಕಿ ಗ್ರಾಮಪಂಚಾಯತಿ ವ್ಯಾಪಿಯ ಮೆಟ್ರಿಕಿ, ಎಂ, ರಾಮಸಾಗರ, ಬಸಾಪುರ, ಎಂ, ಲಕ್ಷ್ಮಲಹಳ್ಳಿ, ಎಂ,ಗುಂಡ್ಲುಹಳ್ಳಿ, ಗ್ರಾಮಗಳಿಗೆ ಭೇಟಿ ನೀಡಿ ಅನ್ನಪೂರ್ಣ ತುಕಾರಾಂ ಪರವಾಗಿ ಅಬ್ಬರದ ಪ್ರಚಾರ ನಡೆಸಿದ ಶಾಸಕ ಎನ್ ವೈ ಗೋಪಾಲಕೃಷ್ಣ,
ಹೈಕಮಾಂಡ್ನ ಆದೇಶದ ಮೇರೆಗೆ ಮೆಟ್ರಿಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದು ಗ್ರಾಮಗಳಿಗೆ ಉಸ್ತುವಾರಿಯಾಗಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕ ಎನ್ ವೈ ಗೋಪಾಲಕೃಷ್ಣರವರು ಅನ್ನಪೂರ್ಣಾ ತುಕಾರಾಂ ಪರವಾಗಿ ಮತಯಾಚಿಸಿದರು. ನುಡಿದಂತೆ ನಡೆದ ಸರ್ಕಾರವೆಂದರೆ ಅದು ಕಾಂಗ್ರೆಸ್ ಸರ್ಕಾರ ಮಾತ್ರ, ಚುನಾವಣಾ ಸಂದರ್ಭದಲ್ಲಿ ನೀಡಿದ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದು ನುಡಿದಂತೆ ನಡೆದ ಸರ್ಕಾರ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದೆ,
ಈ ಉಪಚುನಾವಣೆಯಲ್ಲಿ ಸರ್ಕಾರದ ಹಣ ಬಲ, ತೋಳ್ಬಲ ನಡೆಯುವುದಿಲ್ಲ, ಪ್ರಜಾಪ್ರಭುತ್ವದಲ್ಲಿ ಜನ ಗೆಲ್ಲಬೇಕಾದರೆ ಕಾಂಗ್ರೆಸ್ ಸರ್ಕಾರ ಗೆಲ್ಲಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತುಮಟಿ ಲಕ್ಷ್ಮಣ ಮಾತನಾಡಿ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಕೆರೆಗಳಿದ್ದು ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಸಲುವಾಗಿ ತುಂಗಭದ್ರ ಹಿನ್ನಿರಿನ ವ್ಯವಸ್ಥೆ ಕೆರೆಗಳಿಗೆ ಮಾಡಿಕೊಟ್ಟರೆ ತುಂಬಾ ಅನುಕೂಲವಾಗುತ್ತದೆ ಎಂದು ಶಾಸಕರಲ್ಲಿ ಕೇಳಿಕೊಂಡರು.
ಇನ್ನು ಕೂಡ್ಲಿಗಿ ಕ್ಷೇತ್ರದಲ್ಲಿ ಶಾಸಕರಾದ ಸಂದರ್ಭದಲ್ಲಿ ಸುಮಾರು 76 ಕೆರೆಗಳಿಗೆ ತುಂಗಭದ್ರಾ ಇನ್ನೀರಿನ ವ್ಯವಸ್ಥೆ ಮಾಡಿದ ಹೆಗ್ಗಳಿಕೆ ಇವರದ್ದು, ಹಾಗಾಗಿ ಇವರನ್ನು ಅಭಿವೃದ್ಧಿಯ ಹರಿಕಾರರಂದೆ ಕರೆಯುತ್ತಾರೆ ಎಂದು ತಿಳಿಸಿದರು. ಈ ಭಾಗದಲ್ಲಿ ಅತಿ ಹೆಚ್ಚು ಹಿಂದುಳಿದ ವರ್ಗದ ಜನರು ಇರುವುದರಿಂದ ಕಾಂಗ್ರೆಸ್ ಅನ್ನು ಅತಿ ಹೆಚ್ಚು ಮತಗಳಿಂದ ಜಯಗೊಳಿಸಿದರೆ ನಿಮ್ಮ ಜೀವನವು ರೂಪುಗೊಳ್ಳುತ್ತದೆ, ಬಡವರ ಪಕ್ಷ ಎಂದರೆ ಕಾಂಗ್ರೆಸ್, ಶ್ರೀಮಂತರ ಪಕ್ಷ ಎಂದರೆ ಬಿಜೆಪಿ. ಬೇರೆ ಯಾವುದೇ ಊಹಾಪೋಹಗಳಿಗೆ ತಲೆಕೂಡದೆ ಸದಾ ಅಭಿವೃದ್ಧಿಯನ್ನು ಮತ್ತು ಬಡ ಜನರ ಪರವಾಗಿ ಕೆಲಸ ಮಾಡುವಂತಹ ಪಕ್ಷವನ್ನು ಹರಿಸಬೇಕು ಎಂದು ತಿಳಿಸಿದರು, ಅದರಲ್ಲಿಯೂ ನನ್ನನ್ನು ಈ ಭಾಗಕ್ಕೆ ಉಸ್ತುವಾರಿಯಾಗಿ ವಹಿಸಿರುವುದು ಉದ್ದೇಶ ಯಾವುದೇ ವ್ಯಾಪಾರ ವಹಿವಾಟಿಗೆ ರಾಂಪುರಕ್ಕೆ ಬರುವಂತಹ ಈ ಭಾಗದ ಜನರಿಗೆ ಅವರ ಸಮಸ್ಯೆಗಳು ಯಾವುದಾದರೂ ಇದ್ದಲ್ಲಿ ಕೈಗೆಟಕುವ ಶಾಸಕ ಎಂದು ಈ ಭಾಗಕ್ಕೆ ನೇಮಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಕುಮತಿ ಲಕ್ಷ್ಮಣ್, ತಳುಕು ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನಾಗೇಶ್ ರೆಡ್ಡಿ, ಪಟ್ಟಣ ಪಂಚಾಯತಿ ಸದಸ್ಯರಾದ ಅಬ್ದುಲ್ಲಾ, ಗುತ್ತಿಗೆದಾರ ಸಂಘದ ಅಧ್ಯಕ್ಷರಾದ ಎಸ್ ಖಾದರ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಎನ್ಬಿ ನರಸಮ್ಮ ಗೋವಿಂದಪ್ಪ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಬಡೋ ಬಯ್ಯ, ಪರಮೇಶ್ವರಪ್ಪ, ಮಂಜುನಾಥ್, ವಿಜಯ್ ಕುಮಾರ್, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶೇಖರಪ್ಪ, ಕರುನಾಡಜಿಯಾವುಲ್ಲ, ಎಂಎ ತಿಪ್ಪೇಸ್ವಾಮಿ, ಹಾಗೂ ಸ್ಥಳೀಯ ಮುಖಂಡರು ಚುನಾಯಿತ ಜನಪ್ರತಿನಿಧಿಗಳು ಅಪಾರ ಸಂಖ್ಯೆಯ ಕಾರ್ಯಕರ್ತರು ಅಭಿಮಾನಿಗಳು ಮೊದಲಾದವರು ಉಪಸ್ಥಿತರಿದ್ದರು.