ನ್ಯೂಸ್ಶಿವಮೊಗ್ಗ

ಶಾಲೆ ಎಂದರೆ ಕೇವಲ ನೋಟ್ಸ್, ಹೋಂ ವರ್ಕ್ ಅಂಕಗಳಿಕೆಯಲ್ಲ: ಗ್ರಾಮೀಣ ಮಕ್ಕಳಿಗೆ ಬೇಸಿಗೆ ಶಿಬಿರ

ಶಾಲೆ ಎಂದರೆ ಕೇವಲ ನೋಟ್ಸ್, ಹೋಂ ವರ್ಕ್ ಅಂಕಗಳಿಕೆಯಲ್ಲ: ಗ್ರಾಮೀಣ ಮಕ್ಕಳಿಗೆ ಬೇಸಿಗೆ ಶಿಬಿರ

(SHIVAMOGA): ತಾಳಗುಪ್ಪ ಸಮೀಪದ ಗ್ರಾಮೀಣ ಶಾಲಾ ಮಕ್ಕಳಿಗಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಸುಳ್ಳೂರು ಆವರಣದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ಹಸೆ ಚಿತ್ತಾರ ಪರಿಷತ್ತಿನ ಸಹಯೋಗದೊಂದಿಗೆ ಬೇಸಿಗೆ ಸಂಭ್ರಮ ಕಲಿಕಾ ಶಿಬಿರವನ್ನು ಏಳು ದಿನಗಳ ಕಾಲ ಸ.ಹಿ.ಪ್ರಾ ಶಾಲೆ ಸೂಳ್ಳೂರು ಇಲ್ಲಿ ಆಯೋಜಿಸಲಾಗಿದ್ದು ಶ್ರೀ ಸಿದ್ದವೀರ ಮಹಾಸ್ವಾಮಿಗಳು ಉದ್ಘಾಟಿಸಿ ವ್ಯಕ್ತಿತ್ವ ವಿಕಸನ ಕುರಿತು ಮಾಹಿತಿ ಹಂಚಿಕೊಂಡರು.


ಶಾಲೆ ಎಂದರೆ ಕೇವಲ ನೋಟ್ಸ್, ಹೋಮವರ್ಕ್ ಅಂಕಗಳಿಕೆಯಲ್ಲ. ಮಕ್ಕಳು ತಮ್ಮ ರಚನಾತ್ಮಕವಾಗಿ ತೊಡಗಿಕೊಳ್ಳಬೇಕು. ಮಕ್ಕಳನ್ನು ಸೃಜನಶೀಲತೆ ಮತ್ತು ಅನ್ವೇಷಣಾ ಮನೋಭಾವದತ್ತ ಬೆಳೆಸಲು ವಿಶೇಷ ಕಲಿಕ ಶಿಬಿರಗಳು ಅವಶ್ಯಕವಾಗಿವೆ ಎಂದು ಶಿಬಿರ ನಿರ್ದೇಶಕರು ಮುಖ್ಯ ಗುರುಗಳಾದ ರವಿಚಂದ್ರರವರು ಮಾತನಾಡಿದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ ರಘು ಬಿ, ಉಪಾಧ್ಯಕ್ಷರಾದ ಜಾನಕಿ ಗಣಪತಿ, ಅಂಗನವಾಡಿ ಶಿಕ್ಷಕಿ ಜಯಲಕ್ಷ್ಮಿ, ಮಂಜುನಾಥ್ ಮಂಡಗಳಲೆ, ಶಿಕ್ಷಕಿ ಕಲ್ಪನಾ ಮತ್ತು ದಿವ್ಯ, ಹಾಗೂ ಗ್ರಾಮಸ್ಥರು  ಹಾಜರಿದ್ದರು. ವಿವಿಧ ಶಾಲಾ ಮಕ್ಕಳು ಹಾಜರಿದ್ದು ವಿವಿಧ ಸೃಜನಶೀಲ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರು.
ಶಾಲಾ ಮಕ್ಕಳ ಉದ್ಯಾನವನಕ್ಕೆ ಡಾ. ಬಿ ಆರ್ ಅಂಬೇಡ್ಕರ್ ಸ್ವಾಭಿಮಾನಿ ಉದ್ಯಾನವನ ಎಂದು ನಾಮಕರಣ ಮಾಡಲಾಯಿತು. ಶಾಲಾ ಉದ್ಯಾನವನ ನಿರ್ವಹಣೆಯನ್ನು ಮಕ್ಕಳಿಗೆ ಮತ್ತು ಗ್ರಾಮಸ್ಥರಿಗೆ ಜವಾಬ್ದಾರಿ ನೀಡಿ ಉದ್ಯಾನವನ ದ ಸಂಪೂರ್ಣ ಅಭಿವೃದ್ಧಿ ನಿಮ್ಮ ಮೇಲಿದೆ ಎಂದರು.

ವರದಿ: ರಾಘವೇಂದ್ರ ತಾಳಗುಪ್ಪ

Leave a Reply

Your email address will not be published. Required fields are marked *

Scan the code