ಎಕ್ಸ್ಪೋರ್ಟ್ ಗಾರ್ಮೆಂಟ್ಸ್ನಲ್ಲಿ ನಡೆದ ಕಳವು ಮಾಡಿದ್ದ ಮಾಲು ವಶಕ್ಕೆ.
(KOLARA): ಬಂಗಾರಪೇಟೆ: ತಾಲ್ಲೂಕಿನ ನೇರಳೆಕೆರೆ ಗ್ರಾಮದ ಸಾಯಿಬಾಬ ದೇವಸ್ಥಾನದ ಬಳಿ ಇರುವ ಅರಿಹಂತ್ ಎಕ್ಸ್ಪೋರ್ಟ್ ಗಾರ್ಮೆಂಟ್ಸ್ನಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿಯನ್ನು ಬಂಗಾರಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಬಳಿಯಿದ್ದ ಕಳವು ಮಾಡಿದ್ದ ಮಾಲನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ನೇರಳೆಕೆರೆ ಬಳಿ ಇರುವ ಅರಿಹಂತ್ ಎಕ್ಸ್ಪೋರ್ಟ್ ಗಾರ್ಮೆಂಟ್ಸ್ನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ತಾಮ್ರದ ಬಟನ್ ಪ್ಯಾಕೆಟ್ಗಳು ಕಳವಾಗಿದ್ದವು. ಈ ಸಂಬಂಧ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿಎಸ್ಪಿ ಪಾಂಡುರಂಗ ಮತ್ತು ಕಾಮಸಮುದ್ರ ವೃತ್ತದ ಸಿಪಿಐ ನಾರಾಯಣಸ್ವಾಮಿ ಜಿ.ಸಿ ನೇತೃತ್ವದ ವಿಶೇಷ ಅಪರಾಧ ತಂಡವು ಈ ಪ್ರಕರಣದ ಆರೋಪಿ ಕೆ.ಜಿ.ಎಫ್ ನಿವಾಸಿ ವಿಜಯ್ಕುಮಾರ್. ಜೆ (47) ಎಂಬಾತನನ್ನು ಬಂಧಿಸಿದೆ. ಆತನ ಬಳಿಯಿದ್ದ ಸುಮಾರು ₹1.87 ಲಕ್ಷ ಮೌಲ್ಯದ 110 ಪ್ಯಾಕೆಟ್ ತಾಮ್ರದ ಬಟನ್ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.
ಈ ಕಾರ್ಯಾಚರಣೆಯಲ್ಲಿ ಕಾಮಸಮುದ್ರ ಸಿಪಿಐ ನಾರಾಯಣಸ್ವಾಮಿ ಜಿ.ಸಿ, ಪಿಎಸ್ಐ ಕಿರಣ್ಕುಮಾರ್ ಬಿ.ವಿ, ಸಿಬ್ಬಂದಿ ರಾಮಕೃಷ್ಣಾ- ರೆಡ್ಡಿ, ಅನೀಲ್ಕುಮಾರ್, ಮಂಜುನಾಥರೆಡ್ಡಿ, ಮುನಾವರ್ ಪಾಷ, ರಾಮರಾವ್, ಮಂಜುನಾಥ, ಮಾರ್ಕೊಂಡ, ಲಕ್ಷ್ಮಣತೇಲಿ, ಗುರುಮೂರ್ತಿ ಇದ್ದರು.
ವರದಿ: ವಿಷ್ಣು ಕೋಲಾರ