ಕೋಲಾರನ್ಯೂಸ್

ವಿವಿಧೋದ್ದೇಶ ಕೃಷಿ ಗ್ರಾಮೀಣ ಸಹಕಾರಿ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ.

ವಿವಿಧೋದ್ದೇಶ ಕೃಷಿ ಗ್ರಾಮೀಣ ಸಹಕಾರಿ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ.

(KOLARA): ಬಂಗಾರಪೇಟೆ: ತಾಲೂಕಿನ ಚಿಕ್ಕ ಅಂಕಾಂಡಹಳ್ಳಿ ವಿವಿಧೋದ್ದೇಶ ಕೃಷಿ ಗ್ರಾಮೀಣ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಸಿ.ಆರ್. ಅರವಿಂದ್ ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಚನ್ನಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣೆ ಅಧಿಕಾರಿ ಬಾಲಕೃಷ್ಣ ಘೋಷಣೆ ಮಾಡಿದರು.

ಭಾರತ ದೇಶ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ದೇಶದ ಶೇಕಡ 60ರಷ್ಟು ಆದಾಯ ಕೃಷಿಕರಿಂದ ಲಭ್ಯವಾಗುತ್ತಿರುವುದು ದೇಶದ ಕೃಷಿಕರ ಶ್ರಮಕ್ಕೆ ಹಿಡಿದ ಕೈಗನ್ನಡಿಯಾಗಿದೆ, ನಿರಂತರವಾಗಿ ಹಗಲಿರುಲೆನ್ನದೇ ದುಡಿಯುವ ರೈತರಿಗೆ ಬೆಂಬಲವಾಗಿ ನಿಲ್ಲಲು ವಿ‌.ಎಸ್.ಎಸ್.ಎನ್ ಬದ್ಧನಾಗಿದೆ ಎಂದು ವಿವಿದೋದ್ದೇಶ ಪ್ರಥಮ ಕೃಷಿ ಗ್ರಾಮೀಣ ಸಹಕಾರಿ ಸಂಘದ ನೂತನ ಅಧ್ಯಕ್ಷ‌ ಸಿ.ಆರ್. ಅರವಿಂದ್ ಕುಮಾರ್ ತಿಳಿಸಿದರು.

ತಾಲೂಕಿನ ಚಿಕ್ಕ ಅಂಕಾಂಡಹಳ್ಳಿ ವಿವಿಧೋದ್ದೇಶ ಕೃಷಿ ಗ್ರಾಮೀಣ ಸಹಕಾರಿ ಸಂಘದ ಚುನಾವಣೆಯಲ್ಲಿ ಗೆದ್ದು ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ,ಇಂದು ಎಲ್ಲಾ ನಿರ್ದೇಶಕರ ಸಹಕಾರ ದಿಂದಾಗಿ ಅಧ್ಯಕ್ಷನಾಗಿ ನಾನು ಮತ್ತು ಉಪಾಧ್ಯಕ್ಷನಾಗಿ ಚನ್ನಪ್ಪ ಅವಿರೋಧವಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು.

ಶಾಸಕರ ಮಾರ್ಗದರ್ಶನದೊಂದಿಗೆ ಅಭಿವೃದ್ಧಿಗೆ ಮುನ್ನುಡಿ :
2-10-75 ರಲ್ಲಿ ಆಗಿನ ಶಾಸಕರಾದ ನಾರಾಯಣಗೌಡರು ರೈತರ ಮುದುಕಿಗೆ ಸಹಕಾರಿಯಾಗಲು ಚಿಕ್ಕ ಅಂಕಾಂಡಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ‌ ಸಹಕಾರಿ ಸಂಘ ಸ್ಥಾಪಿಸಿದರು. ಇದರ ವ್ಯಾಪ್ತಿಗೆ 32 ಗ್ರಾಮಗಳನ್ನು ಒಳಗೊಂಡಿದೆ.ತದನಂತರ ಎಸ್.ಎನ್ ನಾರಾಯಣಸ್ವಾಮಿ ರವರು ಶಾಸಕರಾದ ನಂತರ ಡಿಸಿಸಿ ಬ್ಯಾಂಕ್ ನ ಅಧ್ಯಕ್ಷರಾದ ಗೋವಿಂದಗೌಡರ ಸಹಕಾರದೊಂದಿಗೆ ತಾಲೂಕಿನಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ಕೋಟ್ಯಾಂತರ ರೂಪಾಯಿ ಸಾಲ ನೀಡುವುದರ ಮೂಲಕ ಅಭಿವೃದ್ಧಿ ಪಡಿಸಿ ತಾಲೂಕಿಗೆ ಮೊದಲ ಸ್ಥಾನವನ್ನು ತಂದುಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಶಾಸಕರ ಮಾರ್ಗದರ್ಶನ ಹಾಗೂ ಹೊಸೂರು ಕೃಷ್ಣಪ್ಪ ನವರ ಸಹಕಾರದೊಂದಿಗೆ ಉತ್ತಮ ಕಾರ್ಯ ನಿರ್ವಹಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ನಿರ್ದೇಶಕರಾದ ಮುನಿರೆಡ್ಡಿ ,ಸಿ.ಎಸ್, ನಾಗರಾಜು,ವಿ.ಬಿ.ಪ್ರಸಾದ್, ಶ್ರೀನಿವಾಸ್ ವಿ, ಎಸ್ ಎನ್ ಮಂಜುನಾಥ್ ,ಮಮತ ,ಮಂಜುಳಾ, ಕೃಷ್ಣಪ್ಪ, ಮುನಿರೆಡ್ಡಿ ,ಶ್ರೀನಿವಾಸ್ ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code