ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಮಹಿಳೆಯರಿಗೆ ಸ್ವ ಉದ್ಯೋಗ ಪ್ರೇರಣಾ ಶಿಬಿರ.
(SHIVAMOGA): ಸಾಗರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಬಿವೃದ್ಧಿ ಬಿ.ಸಿ.ಟ್ರಸ್ಟ್ ಸಾಗರ ಇವರ ವತಿಯಿಂದ ಸಾಗರದ ಕೇಂದ್ರ ಕಛೇರಿಯಲ್ಲಿ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದ ಮಹಿಳೆಯರಿಗೆ ಸ್ವ ಉದ್ಯೋಗ ಪ್ರೇರಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಸಂಘದ ಮಹಿಳೆಯರು ಪಾಲ್ಗೊಂಡು ಸ್ವ ಉದ್ಯೋಗದ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡರು.
ಶಾಂತಾ ನಾಯ್ಕ್ ಅವರು ಮಾತಾನಾಡಿ ನಮ್ಮ ಸಂಸ್ಥೆಯ ವತಿಯಿಂದ ಕಳೆದ 15 ವರ್ಷ ದಿಂದ ಈ ತರಹದ ಶಿಬಿರಗಳನ್ನು ನಡೆಸುತ್ತಾ ಬಂದಿದ್ದು, ಸಾಗರದಲ್ಲು ಕೊಡಾ ಪ್ರತಿವರ್ಷ ನಡೆಸುತ್ತ ಬಂದಿದ್ದು ಸಂಸ್ಥೆಯ ಮಹಿಳೆಯರು ಸ್ವಾವಲಂಬಿಗಳಾಗಿ ತಮ್ಮ ಮನೆಗಳಲ್ಲಿ ಸ್ವ ಉದ್ಯೋಗ ಮೂಲಕ ಆರ್ಥಿಕವಾಗಿ ಮುಂದೆ ಬರಲು ಸಾಹಾಯವಾಗಿದೆ ಹೀಗೆ ನಮ್ಮ ಸಂಘದಲ್ಲಿ ಕೇವಲ ಸಾಲವನ್ನು ಮಾತ್ರ ನೀಡದೆ, ಮಹಿಳೆಯರಿಗೆ ಪುರುಷರಿಗೆ ಹಾಗೂ ವಿದ್ಯಾರ್ಥಿಗಳಿಗೆ ಎಲ್ಲಾ ತರಹದ ತರಬೇತಿಯನ್ನು ನೀಡಿ ಅವರ ಆರ್ಥಿಕ ವ್ಯವಸ್ಥೆ ಹೆಚ್ವಿಸಲು ನಮ್ಮ ಸಂಸ್ಥೆ ಮುಂದಾಗಿದೆ. ಮಹಿಳೆಯರು ತಮ್ಮ ತಮ್ಮ ಮನೆಗಳಲ್ಲಿ ವಸ್ತುಗಳನ್ನು ತಯಾರಿಸಿ ಅದನ್ನ ಮಾರಾಟ ಮಾಡಬಹುದು ಇಲ್ಲ ಅವರೆ ಉಪಯೋಗಿಸಬಹುದಾಗಿದೆ ಎಂದರು.
ಪತ್ರಕರ್ತ ರಾಘವೇಂದ್ರ ತಾಳಗುಪ್ಪ ಮಾತನಾಡಿ
ಸಂಘದಿಂದ ಬರುವ ಅನೇಕ ಯೋಜನೆಯನ್ನು ಮಹಿಳೆಯರು ಸದ್ಬಳಕೆ ಮಾಡಿಕೊಂಡು ತಮ್ಮ ಮನೆ ಹಾಗೂ ಮನೆಯ ಆರ್ಥಿಕ ಸ್ಥಿತಿ ಹೆಚ್ಚಿಸುವ ಕಡೆ ಹೆಚ್ಚು ಗಮನ ಕೊಡುವಂತಾಗಬೇಕು. ತಾವು ದಿನನಿತ್ಯ ಬಳಸುವ ಅನೇಕ ವಸ್ತುಗಳ ತರಬೇತಿ ಪಡೆದು ತಾವು ಅದನ್ನ ಬಳಸಿಕೊಂಡು ನಂತರ ಮಾರಾಟ ಮಾಡಬಹುದು ಎಂದರು.
ಸ್ವಾಗತವನ್ನು.ಪುಷ್ಪಾ ಅವರು ಮಾಡಿದರು, ನಿರೂಪಣೆ ಗೌರಮ್ಮ, ಶಿಬಿರವನ್ನು ವಲಯ ಯೋಜನಾಧಿಕಾರಿ ಶ್ರೀಮತಿ ಶಾಂತಾನಾಯ್ಕು ರವರು ಉದ್ಘಾಟಿಸಿದ್ದು. ಅತಿಥಿಗಳಾಗಿ ವಿವೇಕ ರಾಯ್ಕರ್ ಶಿರಸಿ, ವಕೀಲರಾದ ಕವಿತಾ, ಪತ್ರಕರ್ತ ರಾಘವೇಂದ್ರ ತಾಳಗುಪ್ಪ, ಗೌರಮ್ಮ ಪಾಲ್ಗೊಂಡಿದ್ದರು.
ವರದಿ: ರಾಘವೇಂದ್ರ ತಾಳಗುಪ್ಪ