ವಲಯದ ಸ್ವ-ಸಹಾಯ ಪ್ರಗತಿಬಂಧು ಸಂಘದ ಆಯ್ದ ಸದಸ್ಯರಿಗೆ ಸ್ವ- ಉದ್ಯೋಗ ತರಬೇತಿ
(SHIVAMOGA): ಸೊರಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ (ರಿ) ಸೊರಬ ವತಿಯಿಂದ ಇಂದು ಬೆಳಿಗ್ಗೆ 11 ಗಂಟೆಗೆ ತಾಲೂಕಿನ ಉಳವಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ವಲಯದ ಸ್ವ-ಸಹಾಯ ಪ್ರಗತಿಬಂಧು ಸಂಘದ ಆಯ್ದ ಸದಸ್ಯರಿಗೆ ಸ್ವ-ಉದ್ಯೋಗ ತರಬೇತಿ ನೀಡಲಾಯಿತು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಹಾಗೂ ಸ್ವ-ಉದ್ಯೋಗ ತರಬೇತುದಾ ವಿವೇಕಾನಂದ ರಾಯ್ಕರ್ ಶಿರಸಿ , ತರಬೇತಿಯನ್ನು ಉದ್ಘಾಟಿಸಿ,ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಸ್ವಉದ್ಯೋಗದ ಪ್ರಾಮುಖ್ಯತೆ, ಪ್ರಸ್ತುತ ದಿನಗಳಲ್ಲಿ ಸ್ವಉದ್ಯೋಗದ ಅವಶ್ಯಕತೆ ಕುರಿತು ಹಾಗೂ ಮನೆಯಲ್ಲಿಯೇ ಸ್ವಉದ್ಯೋಗ ಮಾಡಿ ಆದಾಯ ಗಳಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಿ, ಬಟ್ಟೆಸೋಪ್, ಗ್ಲಿಸ್ರಿನ್ ಸೋಪ್, ಮೈ ಸೋಪ್, ಶಾಂಪೂ, ವ್ಯಾಸಲಿನ್ ಹಾಗೂ ಪಿನಾಯಿಲ್ ತಯಾರಿಕೆ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಕೃಷಿ ಮೇಲ್ವಿಚಾರಕ ಲೋಕೇಶ್ D. ವಲಯ ಮೇಲ್ವಿಚಾರಕಿ ನೇತ್ರಾವತಿ ಹಾಗೂ ವಲಯದ ಸೇವಾಪ್ರತಿನಿಧಿಗಳು ಸೇರಿದಂತೆ ಸ್ವಸಹಾಯ ಪ್ರಗತಿಬಂಧು ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ: ಸಂದೀಪ ಯು.ಎಲ್ ಸೊರಬ