ಕಾಂಗ್ರೇಸ್ ನಾಯಕರ ಅಹಂಕಾರಕ್ಕೆ ಸ್ವಾಭಿಮಾನಿ ಮತದಾರರೇ ಉತ್ತರಿಸಿದ್ದಾರೆ: ಸಂಸದ ಬಿ.ವ್ಯೆರಾಘವೇಂದ್ರ .
(SHIVAMOGA): ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಮಾತನಾಡಿ, ನಿಮ್ಮ ಬದುಕಿನ ಅತ್ಯಮೂಲ್ಯವಾದ ಸಮಯ, ಶ್ರಮ ಕೊಟ್ಟು ಚುನಾವಣೆಯಲ್ಲಿ ಹೋರಾಟ ನಡೆಸಿ, ರಾಘವೇಂದ್ರರನ್ನು ಗೆಲ್ಲಿಸಿಕೊಂಡು ಬಂದಿದ್ದೀರಿ. ಇದಕ್ಕೆ ಬೆಲೆ ಕಟ್ಟಲು ಅಸಾಧ್ಯ. ಎಲ್ಲ ಕಾರ್ಯಕರ್ತರು ಮತದಾರರಿಗೆ ಧನ್ಯವಾದ. ಜನ ಪರ ಕಾಳಜಿ, ಹೋರಾಟಗಳು ರಾಘವೇಂದ್ರರನ್ನು ಇಲ್ಲಿವರೆಗೂ ತಂದಿದೆ. ಅವರಿಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ ಸಿಗಬೇಕೆನ್ನುವುದು ಆಸೆಯಾಗಿತ್ತು. ಆದಷ್ಟು ಬೇಗ ಪೂರೈಸಲಿ ಎಂಬುದು ನಮ್ಮೆಲ್ಲರ ಹಾರೈಕೆ. ದೇವೇಗೌಡರು, ಯಡಿಯೂರಪ್ಪ ಅವರ ರಾಜಕೀಯ ಹೋರಾಟದ ಬದುಕಿನಲ್ಲೂ ಮಂತ್ರಿಸ್ಥಾನದ ಫಲ ದೊರೆತಿದ್ದು, ಅವರ 60ರ ವಯಸ್ಸಿನಲ್ಲಿ. ಹೀಗಾಗಿ ನಾವು ಹೆದರಬೇಕಿಲ್ಲ. ಮುಂದೆ ಒಳ್ಳೆಯ ದಿನಗಳು ಬರುತ್ತವೆ ಎಂಬ ನಂಬಿಕೆಯಿದೆ. ಸಂಸದರು 2 ರೈಲ್ವೆ ಯೋಜನೆಯನ್ನು ಸಾಗರಕ್ಕೂ ವಿಸ್ತರಿಸಬೇಕು. ಮುಂದೆ ಹೊನ್ನಾವರಕ್ಕೂ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದ ಅವರು, ರಾಜಕೀಯದಲ್ಲಿ ನನ್ನ ತಲೆ ಕಾಯ್ದ ಯಡಿಯೂರಪ್ಪರನ್ನು ಇಂದು, ಮುಂದೆಯೂ ಬೆಂಬಲಿಸುತ್ತೇನೆ. ಎಂದು ಹೇಳಿದರು.
ರಾಜ್ಯ ಮತ್ತು ಶಿವಮೊಗ್ಗದಲ್ಲಿ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಯ ತಂತ್ರ, ಪ್ರತಿತಂತ್ರಕ್ಕೆ ಸ್ವಾಭಿಮಾನಿ ಮತದಾರರು ತಕ್ಕ ಉತ್ತರ ನೀಡಿದ್ದಾರೆ. ಜೊತೆಯಲ್ಲಿ ಅವರಿಗೆ ಈಗಲಾದರೂ ಮೋದಿಯವರ ಶಕ್ತಿ ಏನೆಂದು ಅರ್ಥ ಮಾಡಿಸಿದ್ದಕ್ಕೆ ದೇಶದ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಸಂಸದ ಬಿವೈ. ರಾಘವೇಂದ್ರ ಅಭಿಪ್ರಾಯ ಪಟ್ಟರು.
ಪಟ್ಟಣದ ರಾಘವೇಶ್ವರ ಸಭಾ ಭವನದಲ್ಲಿ ಬುಧವಾರ ನಡೆದ ಮತದಾರರು, ಕಾರ್ಯಕರ್ತರಿಗೆ ಧನ್ಯವಾದ ಸಮರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಅಧಿಕಾರದ ಮದ, ಅಹಂಕಾರದ ಮಾತುಗಳನ್ನು ಆಡಿದವರಿಗೆ ಜನರೇ ತಕ್ಕ ಪಾಠ ಕಲಿಸಿದ್ದಾರೆ. ಇದು ಸ್ವಾಭಿಮಾನಿ ಮತದಾರರ ಉತ್ತರವಾಗಿದ್ದು, ನಾವೂ ಅದನ್ನು ಶಿರಸಾವಹಿಸಿ ಪಾಲಿಸಬೇಕು. ಗೆಲುವಿಗೆ ಹಿಗ್ಗದೆ, ಮುಂದೆಯೂ ಕಾರ್ಯಕರ್ತರು ತಲೆ ತಗ್ಗಿಸಲು ಅವಕಾಶ ನೀಡದೆ, ನೀವು ಜನರಿಗೆ ಕೊಟ್ಟ ಆಶ್ವಾಸನೆಗಳನ್ನು ಮುಖಂಡರ ಮೂಲಕ ನನ್ನ ಗಮನಕ್ಕೆ ತಂದು ಪೂರೈಸುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡೋಣ. ಕಾರ್ಯಕರ್ತರ ಪರಿಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪಕ್ಷದ ಸಿದ್ಧಾಂತ, ಹೋರಾಟದಲ್ಲಿ ನಂಬಿಕೆ ಇಟ್ಟು ದುಡಿದಿರುವ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು
ಅಭಿವೃದ್ಧಿ ಪಥದಲ್ಲಿ ನಡೆಯುವ ನಮ್ಮೆಲ್ಲರ ಭಾವಕ್ಕೆ ತಕ್ಕಂತೆ ಕೇಂದ್ರ ಸರಕಾರದಿಂದ ಸಹಕಾರ ದೊರೆತಿದ್ದು, ರಾಜ್ಯದ ರಾಷ್ಟೀಯ ಹೆದ್ದಾರಿ ಯೋಜನೆಗಳಿಗೆ 5756 ಕೋಟಿ ರೂ. ಅನುದಾನ ದೊರೆತಿದ್ದರೆ, ಶಿವಮೊಗ್ಗ ವಿಭಾಗದ ಪಾಲು 2500 ಕೋಟಿಯಷ್ಟಿದ್ದು, ಅದರಲ್ಲಿ ಶೇ. 70 ರಷ್ಟು ಸಾಗರಕ್ಕೆ ಲಭಿಸಿದೆ. ಆನಂತಪುರದಿಂದ ಚೂರಿಕಟ್ಟೆವರೆಗಿನ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ 400 ಕೋಟಿ ಸಿಕ್ಕಿದೆ. ಸಿಗಂದೂರು-ಮರಕುಟಿಗ ರಸ್ತೆಗೆ 634 ಕೋಟಿ, ಜತೆಯಲ್ಲಿ ಶರಾವತಿ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಕ್ರಮಕ್ಕೆ ಮುಂದಾಗುತ್ತೇವೆ. ಮುಖ್ಯವಾಗಿ ರೈಲ್ವೆ ಯೋಜನೆಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ ಎಂದು ಭರವಸೆ ನೀಡಿದರು.
ಪ್ರಮುಖರಾದ ಭಾನು ಪ್ರಕಾಶ್, ಗಣೇಶ್ ಪ್ರಸಾದ್, ದೇವೇಂದ್ರಪ್ಪ ಯಲಕುಂದ್ಲಿ, ಪ್ರಸನ್ನ ಕೆರೆಕ್ಕೆ, ಡಾ. ರಾಜನಂದಿನಿ ಕಾಗೋಡು, ಪ್ರಶಾಂತ್ ಶಿವಪ್ಪ, ಜ್ಯೋತಿ ಪ್ರಭು, ಶ್ರೀನಿವಾಸ್ ಮೇಸ್ತ್ರಿ, ಮಧುರಾ ಶಿವಾನಂದ, ಮಹೇಶ್, ಭರಮಪ್ಪ, ಮಲ್ಲಿಕಾರ್ಜುನ ಹಕ್ರೆ, ಮೊದಲಾದವರಿದ್ದರು.
ನೂತನ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ,ಮಾತಾನಾಡಿ ಅಹಂಕಾರದಿಂದ ವರ್ತಿಸಿದವರಿಗೆ, ಸೊಕ್ಕಿನಿಂದ ಉರಿದವರಿಗೆ ಏನಾಗುತ್ತದೆ ಎನ್ನುವುದನ್ನು ಎರಡೂ ಚುನಾವಣೆ ತೋರಿಸಿಕೊಟ್ಟಿದೆ. ಎದುರಾಳಿಗಿಂತ ನಾವು ನಮ್ಮ ಕೆಲಸದಲ್ಲಿ ಗಮಹರಿಸಬೇಕು. ಜತೆಯಲ್ಲಿ ಮತ ನೀಡಿ ಗೆಲ್ಲಿಸಿ, ಎಲ್ಲರ ಪರವಾಗಿ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಮತದಾರರು, ಕಾರ್ಯಕರ್ತರು, ಮುಖಂಡರಿಗೆ ಅಭಿನಂದನೆಗಳನ್ನು ಸಲ್ಲಿಸಿದರು..
ವರದಿ: ರಾಘವೇಂದ್ರ ತಾಳಗುಪ್ಪ