ಬಾಬಾಸಾಹೇಬ ಅಂಬೇಡ್ಕರರಿಗೆ ಅವಮಾನ..! ದಲಿತ ವಿದ್ಯಾರ್ಥಿ ಪರಿಷತ್ ನ ಸಂಚಾಲಕ ಜವಬ್ದಾರಿಯನ್ನು ತ್ಯಾಜಿಸಿದ ಅಜಿತ್ ಕುಮಾರ್ ಓಬಯ್ಯ..!
(TUMAKURU): ತುಮಕೂರು: ಅಜಿತ್ ಕುಮಾರ್ ಬೆಳ್ಳಿಬಟ್ಲು ಓಬಯ್ಯ ದಲಿತ ವಿದ್ಯಾರ್ಥಿ ಪರಿಷತ್ ನಲ್ಲಿ ಸಂಚಾಲಕ ಜವಾಬ್ದಾರಿಯನ್ನು ಹಿಂದಿರುಗಿಸಿ ಅ ಜವಾಬ್ದಾರಿಯ ಕಾರ್ಯಗಳಿಂದ ಹಿಂಜರಿಯಲು ಇಚ್ಚಿಸಿರುತ್ತಾರೆ. ಹಾಗೂ ಅದಕ್ಕೆ ಕಾರಣವನ್ನು ಸಹ ವ್ಯಕ್ತಪಡಿಸಿದ್ದಾರೆ. ರಾಜ್ಯಾದ್ಯಕ್ಷರು ದಲಿತ ವಿದ್ಯಾರ್ಥಿ ಪರಿಷತ್ ರಾಜ್ಯಘಟಕದಿಂದ ಅವಮಾನವಾಗಿದೆ ಯೆಂಬುದಾಗಿ ತಿಳಿಸಿದ್ದರು.
2020 ರಿಂದ ಈವರೆಗೆ ಅಂದರೆ ಸುಮಾರು 4 ವರ್ಷದ ಕಾಲ ಸಂಘಟನೆಯಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದ ಇವರಿಗೇ ಪ್ರಸ್ತುತತದ ವರೆಗೂ ಆರ್ಥಿಕ ಸಬಲತೆಯ ಬಗ್ಗೆ ಸಂಘಟನೆಯಿಂದ ಬರೀ ಭರವಸೆಗಳು ಮೂಡಿಬಂದಿವೆ ಹೊರತು ಯಾವು ಕಾರ್ಯಗತವಾಗಿಲ್ಲ ಹೀಗಿದ್ದು ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಲಾಗದೆ ಪರಿಷತ್ ( ಸಂಘಟನೆಯಲ್ಲಿ ) ಆರ್ಥಿಕವಾಗಿ ಸಾಕಷ್ಟು ಕಳೆದು ಕೊಂಡಿದ್ದರು ಯಾವುದು ಕೂಡ ಹಿಂದಿರುಗಿಲ್ಲ.
ಹಾಗು ಪರಿಷತ್ ನಾ ಕಾರ್ಯಕ್ರಮಗಳಿಗೆ ಸರ್ಕಾರಿ ನೌಕರಿಂದಾಗಲಿ ಅಥವಾ ಸಮುದಾಯದ ಶ್ರೀಮಂತ ವ್ಯಕ್ತಿಗಳಿಂದ ಚಂದ ವಸೂಲಿ ಮಾಡಲು ಒತ್ತೈಸಿರುವುದು ಹಾಗು ಇ ಪದ್ಧತಿ ಬೇಡ ಯೆಂದು ಪ್ರಸ್ತಾಪ ಮಾಡಿದರು ” ಅಂಬೇಡ್ಕರ್ ಕೂಡ ಕೆಲವು ಕಡೆ ಚಂದ ಪಡೆದಿದ್ದಾರೆ “ ಯೆಂಬ ಮಾತು ಬಂದಿದೆ.
ಅಂಬೇಡ್ಕರ್ ಸ್ಪರ್ಧಾತ್ಮಕ ಪರೀಕ್ಷೆ ಜಾಹೀರಾತು ಪತ್ರಿಕೆಗಳಲ್ಲಿ ಉಚಿತ ತರಬೇತಿ ನೀಡುವ ವಿಚಾರವಾಗಿ 4 ವರ್ಷಗಳಿಂದ ನಮ್ಮ ಜಿಲ್ಲೆಯ ಯಾವ ವಿಧ್ಯಾರ್ಥಿಗಳು ಅದರ ಫಲಾನುಭವಿಗಳು ಆಗದೇ ಇರುವುದರಿಂದ ಅನೇಕ ವಿಧ್ಯಾರ್ಥಿಗಳ ಈ ಪ್ರಶ್ನೆಗೆ ನಾವು ಉತ್ತರ ಸಿಗುತಿಲ್ಲ.
ನಾವು ಬಾಬಾ ಸಾಹೇಬ್ ಅಂಬೇಡ್ಕರ್ ರವರ ಸಿದ್ಧಾಂತದ ಸ್ವಾಭಿಮಾನದ ಬದುಕನ್ನು ಎದೆಗೆ ಅಪ್ಪಿಕೊಂಡು ಬದುಕುತ್ತಿದ್ದೇವೆ ಆ ಸ್ವಾಭಿಮಾನಕ್ಕೆ ದಕ್ಕೆ ತರುವಂತ ಕೆಲವು ವ್ಯಕ್ತಿಗಳ ನಡವಳಿಕೆ ನಮಗೆ ಸಹಿಸಲಾಗಲಿಲ್ಲ ಯೆಂದು ಅಜಿತ್ ಕುಮಾರ್ ರವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಹಾಗೂ ಈ ವರೆಗೂ ನಾವು ನಿಮ್ಮಗಳಿಂದ ಯಾವುದನ್ನು ಋಣಾತ್ಮಕವಾಗಿ ಲಾಭಗಳನ್ನು ಪಡೆದಿಲ್ಲ ಯೆಂದು ಸ್ಪಷ್ಟತೆ ಯನ್ನು ಕೊಟ್ಟಿದ್ದಾರೆ. ಈ ಅವಮಾನಗಳಿಂದ ಮನನೊಂದು ಸಂಚಾಲಕ ಜವಬ್ದಾರಿಯನ್ನು ತ್ಯಜಿಸಿದ್ದಾರೆ.