ಜಿಲ್ಲೆನ್ಯೂಸ್

ಪಟ್ಟಣದ ಆದರ್ಶ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಪಕ ಎಸ್ಎನ್ ನಾರಾಯಣಸ್ವಾಮಿ

ಪಟ್ಟಣದ ಆದರ್ಶ ಶಾಲೆಯಲ್ಲಿ ಮಕ್ಕಳ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಪಕ ಎಸ್ಎನ್ ನಾರಾಯಣಸ್ವಾಮಿ


(KOLARA): ಬಂಗಾರಪೇಟೆ :ಮಕ್ಕಳೇ ಸ್ವಂತ ಖರ್ಚಿನಲ್ಲಿ ಬಂಡವಾಳ ಹಾಕಿ ಮಾರಾಟ ಮಾಡಿ ಲಾಭ ನಷ್ಟ ತೆಗೆಯುವ ಮೂಲಕ ಅವರಲ್ಲಿ ಬೌದ್ಧಿಕ, ಶೈಕ್ಷಣಿಕ, ವ್ಯವಹಾರಿಕ ಜ್ಞಾನ ಬೆಳೆಸುವ ಉದ್ದೇಶ ಈ ಮಕ್ಕಳ ಸಂತೆ ಆಗಿದೆ ಎಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಆದರ್ಶ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸಂತೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಆದರ್ಶ ಶಾಲೆಯ ಮಕ್ಕಳು ಪ್ರತಿ ದಿನ ಬಳಸುವಂತಹ ತರಕಾರಿ, ದಿನಸಿ, ತಿಂಡಿ,ತಿನಿಸುಗಳನ್ನು ಮಾರಾಟ ಮಾಡುತ್ತಿದ್ದಾರೆ. ಬಹಳ ವಿಶೇಷವಾಗಿದೆ ಹಾಗೂ ಮಕ್ಕಳ ಜೊತೆ ನಾನು ಸಹ ವ್ಯಾಪಾರ ವಹಿವಾಟುಗಳನ್ನು ಮಾಡಿದೆ,ಮಕ್ಕಳು ಹೆದರದೆ ಮತ್ತು ಅಂಜಿಕೆ ಇಲ್ಲದೆ ವ್ಯವಹಾರ ಜ್ಞಾನಕ್ಕೆ ಮುಂದಾಗಿರುವುದು ಸಂತೋಷ ತಂದಿದೆ ಎಂದರು.



ವ್ಯಾಪಾರ ವಹಿವಾಟಿನಿಂದ ಮಕ್ಕಳಲ್ಲಿ ನಿತ್ಯ ಜೀವನದ ಅನುಭವವಾಗುತ್ತದೆ, ತಂದೆ,ತಾಯಿ ಅಂಗಡಿಗೆ ಹೋಗಿ ತರಕಾರಿ ತರಲು ತಿಳಿಸಿದರೆ ಯಾವ ರೀತಿ ವ್ಯಾಪಾರ ಮಾಡಬೇಕೆಂಬ ಅರಿವು ಸಿಕ್ಕಂತಾಗಿದೆ,ಮಕ್ಕಳಲ್ಲಿ ವ್ಯವಹಾರ ಜ್ಞಾನ ಹೆಚ್ಚಲು ಸಹಕಾರಿಯಾಗಿದೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವ ಆತ್ಮಸ್ಥೈರ್ಯ ವೃದ್ದಿಗೆ ಈ ಮಕ್ಕಳ ಸಂತೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ,ಮುಖ್ಯಶಿಕ್ಷಕಿ ಶಶಿಕಲಾ, ಉಪ ಪ್ರಾಂಶುಪಾಲರಾದ ಶಂಕರಪ್ಪ,ಕಾಂಗ್ರೆಸ್ ಮುಖಂಡರಾದ ಮಲ್ಲೇಶ್ ಗೌಡ, ಮಂಜುನಾಥ್, ಮೊದಲಾದವರು ಇದ್ದರು.

ವರದಿ: ವಿಷ್ಣು ಕೋಲಾರ

Leave a Reply

Your email address will not be published. Required fields are marked *

Scan the code