ಜಿಲ್ಲೆನ್ಯೂಸ್

ನಮ್ಮ ತನು-ಮನ ಆರೋಗ್ಯವಾಗಿರಬೇಕಾದರೆ ಉತ್ತಮ ಹವ್ಯಾಸವನ್ನು ರೂಡಿಸಿಕೊಳ್ಳಬೇಕು.

ನಮ್ಮ ತನು-ಮನ ಆರೋಗ್ಯವಾಗಿರಬೇಕಾದರೆ ಉತ್ತಮ ಹವ್ಯಾಸವನ್ನು ರೂಡಿಸಿಕೊಳ್ಳಬೇಕು.

(SHIVAMOGA): ಸೊರಬ: ನಮ್ಮ ತನು-ಮನ ಆರೋಗ್ಯವಾಗಿರಬೇಕಾದರೆ ಉತ್ತಮ ಹವ್ಯಾಸವನ್ನು ರೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರೀಡೆಯನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವುದರಿಂದ ಜೀವನದಲ್ಲಿ ಯಶಸ್ಸನ್ನ ಕಾಣಲು ಸಾಧ್ಯ ಎಂದು ಉದ್ರಿ ಆಯುರ್ವೇದ ಚಿಕಿತ್ಸಾಲಯದ ಹಿರಿಯ ವೈದ್ಯ ಡಾ. ಎಂ.ಕೆ ಮಹೇಶ್ ಅಭಿಪ್ರಾಯಪಟ್ಟರು.

ತಾಲೂಕಿನ ಉದ್ರಿ ಗ್ರಾಮದಲ್ಲಿ ಐಪಿಎಲ್ ಮಾದರಿಯ ಯುಜಿಪಿಎಲ್ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಉದ್ರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳು ಸೇರಿ ಈ ಮಾದರಿಯ ಕ್ರಿಕೆಟ್ ಪಂದ್ಯವನ್ನ ನಡೆಸುತ್ತಿರುವುದು ಗ್ರಾಮಸ್ಥರಲ್ಲಿ, ಯುವಕರಲ್ಲಿ ಸಾಮರಸ್ಯವನ್ನು ಉಂಟುಮಾಡುತ್ತದೆ, ಮನರಂಜನೆಯ ಜೊತೆಗೆ ನಮ್ಮ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬಹುದು ಎಂದರು.
ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷ ಸುರೇಶ್ ಮಾತನಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ್, ಉದ್ಯಮಿ ದತ್ತಣ್ಣ, ಹನುಮಂತಪ್ಪ, ಶಿವಕುಮಾರ್ ಗೌಡ, ರವಿ ಕೇಸರಿ ಹಾಗೂ ಪಂದ್ಯಾವಳಿಯ ಆಯೋಜಕರಾದ ಪರಶುರಾಮ್, ಪ್ರದೀಪ್, ಸಂತೋಷ್ ಮತ್ತಿತರರಿದ್ದರು.

ವರದಿ: ಸಂದೀಪ ಯು.ಎಲ್, ವೆಸ್ಟರ್ನ್ ಘಾಟ್ ನ್ಯೂಸ್ ಸೊರಬ

Leave a Reply

Your email address will not be published. Required fields are marked *

Scan the code