ಆನವಟ್ಟಿಯಲ್ಲಿ ನಡೆದ ಶಿವಮೊಗ್ಗ ಜಿಲ್ಲಾ ಮಟ್ಟದ 5ನೇ ಜಾನಪದ ಸಮ್ಮೇಳನ
(SHIVAMOGA): ಸೊರಬ: ಮನುಷ್ಯ ಸೃಷ್ಟಿಯಾದಾಗಿನಿಂದಲೂ ಜನಪದ ಕಲೆ ಹುಟ್ಟಿ ಬೆಳೆಯುತ್ತಾ ಬಂದಿದೆ. ಜಾನಪದ ಕಲಾವಿದರು ನಮ್ಮ ಸಂಸ್ಕೃತಿಯ ರಾಯಭಾರಿಗಳಾಗಿದ್ದು, ಅವರು ನಮ್ಮ ಮನೆ ಮುಂದೆ ಬಂದು ಕಲೆಗಳನ್ನು ಪ್ರದರ್ಶಿಸುವ ಸಂದರ್ಭದಲ್ಲಿ ತಾತ್ಸರ ತೊರದೆ ಅವರನ್ನು ಪ್ರೋತ್ಸಾಹಿಸಿದರೆ ಈ ಕಲೆ ಮುಂದಿನ ತಲೆಮಾರಿನವರೆಗೂ ಬೆಳೆದುಕೊಂಡು ಹೋಗುತ್ತದೆ ಎಂದು ಶಿವಮೊಗ್ಗ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ ಹೇಳಿದರು.
ತಾಲೂಕಿನ ಆನವಟ್ಟಿ-ಕೋಟಿಪುರದಲ್ಲಿ ಕರ್ನಾಟಕ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಸಮಿತಿ ಶಿವಮೊಗ್ಗ, ತಾಲೂಕು ಸಮಿತಿ ಸೊರಬ, ಆನವಟ್ಟಿ ಹೋಬಳಿ ಸಮಿತಿ, ಎವರಾನ್ ಇಂಟರ್ನ್ಯಾಷನಲ್ ವಸತಿ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಶಿವಮೊಗ್ಗ ಜಿಲ್ಲಾ ಮಟ್ಟದ 5ನೇ ಜಾನಪದ ಸಮ್ಮೇಳನ’ ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದ ಕಲೆಗಳು ನಶಿಸಿದಂತೆ ಮುಂದಿನ ತಲೆಮಾರಿನವರಿಗು ಕಲಿಸುವ ಜವಾಬ್ದಾರಿಯನ್ನು ನಾಗರೀಕ ಸಮಾಜದ ಎಲ್ಲ ಸಂಘ ಸಂಸ್ಥೆಗಳು ಬೆಳೆಸಿಕೊಂಡು ಹೋಗಬೇಕಾಗಿದೆ. ಜಾನಪದ ಸಮ್ಮೇಳನ ಎಲ್ಲಿ ನಡೆದರೂ ಆ ಸಮ್ಮೇಳನಗಳಿಗೆ ತನು-ಮನಧನ ನೀಡಿ, ಪ್ರೋತ್ಸಾಹಿಸಬೇಕು. ಕರ್ಪಾಳ ವಿದ್ಯ, ಹೂವಿನ ಕೋಲು ಮುಂತಾದ ಜಾನಪದ ಕಲೆಗಳು ನಶಿಸುವ ಹಂತದಲ್ಲಿದ್ದಾಗ ಜಿಲ್ಲಾ ಜಾನಪದ ಪರಿಷತ್ತು ಈ ಕಲೆಗಳನ್ನು ಬೆಳೆಸಲು ಕಲಾವಿದರಿಗೆ ಮನವಿ ಮಾಡಿಕೊಂಡ ಮೇರೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತಿದೆ ಎಂದರು
ಸರ್ವಾಧ್ಯಕ್ಷ ಬೇಗೂರು ಶಿವಪ್ಪ ಲಾವಣಿಗಳನ್ನು ಹಾಡಿ ಮಾತನಾಡಿ, ಸರ್ಕಾರ ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ, ಜಾನಪದ ಕಲೆಗಳ ಬಗ್ಗೆ ಮಕ್ಕಳಿಗೆ ಕಲಿಸುವಂತೆ ಪಠ್ಯಗಳನ್ನು ನೀಡಬೇಕು, ಶಿಕ್ಷಕರು ಜಾನಪದ ವಿಷಯವನ್ನು ಮಕ್ಕಳಿಗೆ ಕಲಿಸಿ, ಜನಪದ ಕಲೆ ಸಾಹಿತ್ಯ ಎಂದೆ0ದಿಗೂ ಚಿರಸ್ತಾಯಿಯಾಗಿ ಉಳಿಯುವಂತೆ ಮಾಡಬೇಕು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಆನವಟ್ಟಿ ಘಟಕದ ಅಧ್ಯಕ್ಷ ಎಂ.ಎಸ್. ಕಾರ್ತಿಕ ಸಾಹುಕಾರ್ ಆಶಯ ನುಡಿಗಳನ್ನಾಡಿ, ಮುಂದಿನ ದಿನಗಳಲ್ಲಿ ಆನವಟ್ಟಿಯಲ್ಲಿ ರಾಜ್ಯಮಟ್ಟದ ಜಾನಪದ ಸಮ್ಮೇಳನವನ್ನು ನಡೆಸಲು ತಾವು ಉತ್ಸುಹಕರಾಗಿದ್ದು, ಜಿಲ್ಲಾ ಅಧ್ಯಕ್ಷರು ಇದಕ್ಕೆ ಒತ್ತು ನೀಡಿ ರಾಜ್ಯ ಸಮ್ಮೇಳನವನ್ಮು ಆನವಟ್ಟಿಯಲ್ಲಿ ನಡೆಸಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು.
ಜಾನಪದ ನಡಿಗೆಗೆ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಸೊರಬ ಘಟಕದ ಅಧ್ಯಕ್ಷ ಡಿ.ಎಸ್ ಶಂಕರ್ ಶೇಟ್ ಚಾಲನೆ ನೀಡಿದರು.
ಕರ್ನಾಟಕ ಜಾನಪದ ಪರಿಷತ್ ತಾಲ್ಲೂಕು ಅಧ್ಯಕ್ಷ ಖಲಂದರ್ ಸಾಬ್ ಆನವಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಚಿತ್ರನಟ ನಾಗೇಶ್ ವಿಜಾಪುರ, ಸ್ನೇಹಪ್ರಭಾ ಎಂ.ಸಾಹುಕಾರ್, ಬೇಗೂರು ಶಿವಪ್ಪ, ಬಸವನಗೌಡ್ರು ಮಲ್ಲಾಪುರ, ಸತೋಷಕುಮಾರ ಹೆಚ್.ಸಿ. ಚಂದ್ರಶೇಖರ್, ಮಾಲತೇಶ ಹೆಗಡೆಕಟ್ಟಿ, ಸತೀಶ್ ಹೆಬ್ಬಾರ್, ಚರಿತಾ ಕಾರ್ತಿಕ್, ಮಹೇಂದ್ರಕುಮಾರ ಜೈನ್, ಅಜೀತ್ ಕುಮಾರ್, ಎಸ್ಆರ್ ಕುಮಾರ ಸ್ವಾಮಿ, ಶಿವಾನಂದ ಪಾಣಿ, ಸತ್ಯನಾರಾಯಣ ಸಿರಿವಂತೆ, ಉಮೇಶ ಬಿಚ್ಚುಗತ್ತಿ, ಮಂಜುನಾಥ ವೈಕುಂಠಕಾಮತ್. ಅಭಿಲಾಷ್ ಹುರುಳಿಕೊಪ್ಪ, ದೇವರಾಜ, ಡಾ.ಕೆಜಿ ವೆಂಕಟೇಶ್,ಶಿವಲಿಂಗೆಗೌಡ್ರು, ಮೃತ್ಯುಂಜಯಗೌಡ್ರು, ಯಲ್ಲಪ್ಪ ಮತ್ತಿತರರಿದ್ದರು.
ಈ ಸಂಧರ್ಭದಲ್ಲಿ 15 ಜನ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಆಹ್ವಾನಿತ ಜಾನಪದ ಕಲಾತಂಡಗಳಿ0ದ ದೇವಿ ಕುಣಿತ-ಯಲ್ಲಪ್ಪ ಭಾಗವತ್ ತೀರ್ಥಹಳ್ಳಿ, ಸುಗ್ಗಿ ಕುಣಿತ ತಿಮ್ಮಪ್ಪ ಚನ್ನಮಾಜಿ ಹೊಸೂರು ಸಾಗರ, ಲಾವಣಿ ಬೇಗೂರು ಶಿವಪ್ಪ ಶಿಕಾರಿಪುರ, ತತ್ವಪದ ಆಂಜನೇಯ ಜೋಗಿ ಬಟ್ಟೆಮಲ್ಲಪ್ಪ ಹೊಸನಗರ, ಜೋಗಿಪದ ಗುಡ್ಡಪ್ಪ ಜೋಗಿ ಹೊಸೂರು ಸಾಗರ, ಗೀಗಿಪದ ಶಿವರುದ್ರಪ್ಪ ಜೋಗಿ ಗೆಂಡ್ಲ-ಹೊಸೂರು, ಚೌಡಿಕೆಪದ ಲಕ್ಷ್ಮಣರಾವ್ ಭದ್ರಾವತಿ, ಸೋಬಾನೆಪದ ಕಲಾನಾಥೇಶ್ವರ ಮಹಿಳಾ ಮಂಡಳಿ ನಾಗರಕೊಡುಗೆ, ಜನಪದ ಹಾಡು ರೇವಣಪ್ಪ ಭದ್ರಾವತಿ, ಜೋಗಿತಿ ನೃತ್ಯ ಜಯಪ್ಪ ನಾಗರಾಜ ಚಿನ್ನಮಾಜಿ ಹೊಸೂರು ಸಾಗರ, ಕೋಲಾಟ-ಡಾ.ಬಿ.ಆರ್ ಅಂಬೇಡ್ಕರ್ ಬಂದಗದ್ದೆ ಕೆಳದಿ-ಸಾಗರ, ಕರ್ಪಾಳಮೇಳ-ಪಭಯ್ಯ ಜಕ್ಕಲಿಮಠ ಹೊಳೆಹೊನ್ನೂರು, ಭದ್ರಾವತಿ, ಜೋಗುಳಪದ-ಗಾಯಿತ್ರಿ ಎಸ್ಕೆ ಶಿವಮೊಗ್ಗ, ಚಂಡೆ-ವಿಶ್ವಕರ್ಮ ಬಳಗ ಅರಳಪುರ, ಹೊದ್ಲ, ತಿರ್ಥಹಳ್ಳಿ. ಅಂಟಿಗೆ ಪಂಟಿಗೆ ತೀರ್ಥಹಳ್ಳಿ, ಲಂಬಾಣಿ ನೃತ್ಯ-ವೀರಮಾರುತಿ ಮಹಿಳಾತಂಡ ಮತ್ತು ಜನಪದ ಹಾಡನ್ನು ನವೋದಯ ಸಂಘ ತುಮರಿಯವರಿಂದ ನಡೆಯಿತು.
ಆನವಟ್ಟಿ ಪಬ್ಲಿಕ್ ಸ್ಕೂಲ್ ಆವರಣದಿಂದ ಶ್ರೀ ವಿಠ್ಠಲರುಖುಮಾಯಿ ದೇವಸ್ಥಾನದವರೆಗೂ ಜಾನಪದ ನಡಿಗೆ ನಡೆಯಿತು.
ವರದಿ: ಸಂದೀಪ ಯು .ಎಲ್, ವೆಸ್ಟರ್ನ್ ಘಾಟ್ ನ್ಯೂಸ್, ಸೊರಬ