ವಿಜೃಂಭಣೆಯಿಂದ ಆಚರಿಸಲಾದ ಈದ್ ಮಿಲಾದ್ ಮೆರವಣಿಗೆ.
(SHIVAMOGA): ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಈದಮೀಲಾದ್ ಆಚರಣೆಯನ್ನು ಅತೀ ವಿಜೃಂಭಣೆಯಿಂದ ಆಚರಿಸಲಾಯಿತು..
ಸಂದರ್ಭದಲ್ಲಿ ಮೆರವಣಿಗೆಯನ್ನು ನಡೆಸಿ ಯುವಕರು ಹಾಗೂ ಮುಸ್ಲಿಂ ಬಾಂಧವರು ಕುಣಿದು ಕುಪ್ಪಳಿಸಿದರು.ಮೇರವಣಿಗೆಯಲ್ಲಿ ಪುಟಾಣಿ ಮಕ್ಕಳ ಹರ್ಷೋದ್ಗಾರ ಎದ್ದು ಕಾಣುವಂತೆ ಇತ್ತು ಇದಕ್ಕೆ ಖಾಕಿ ಸರ್ಪ ಕಾವಲು ಮಾಡಿದ್ದು ಯಾವುದೇ ರೀತಿಯ ಅನಾಹುತಗಳಿಗೆ ಅವಕಾಶನೀಡದ ರೀತಿಯಲ್ಲಿ ಬಂದೋಬಸ್ತ ಮಾಡಿದ್ದಾರೆ.
ಮೇರವಣಿಗೆಯು ಸಾಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾಗರದ ಜನತ್ ನಗರದಲ್ಲಿ ಮುಕ್ತಾಯವಾಗಲಿದೆ.
ನಿನ್ನೆ ರಾತ್ರಿ ಶಿವಮೊಗ್ಗ ಶಾಂತಿನಗರದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ಮತ್ತು ಬ್ಯಾನರ್ ವಿಚಾರಕ್ಕೆ ಸಂಬಂಧಿಸಿದಂತೆ ಕೋಮುಗಲಭೆ ಉಂಟಾಗಿದ್ದು. ಜಿಲ್ಲೆಯಲ್ಲಿ ಬೇರೆ ಕಾಡೆ ಯಾವುದೆ ಅನಾಹುತಗಳು ನಡೆಯದಂತೆ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
ವರದಿ: ರಾಘವೇಂದ್ರ ತಾಳಗುಪ್ಪ