ಶಿವಮೊಗ್ಗ ಬಿ.ಜೆ.ಪಿ.ಕಾರ್ಯಕರ್ತರ ಮುಗಿಲು ಮುಟ್ಟಿದ ಸಂಭ್ರಮ.
(SHIVAMOGA): ಸಾಗರ ಹೋಟೆಲ್ ಸರ್ಕಲ್ ಬಳಿ ಬಿ.ಜೆ.ಪಿ.ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಬಿ.ವ್ಯೆ ರಾಘವೇಂದ್ರ ಅವರ ಗೆಲುವನ್ನು ಸಂಬ್ರಮಿಸಿದರು. ಸಾಗರ ನಗರ ಘಟಕದ ಅಧ್ಯಕ್ಷ ಗಣೇಶ್ ಪ್ರಸಾದ್ ಮಾತನಾಡಿ ಇದು ನಮ್ಮ ಗೆಲವುಲ್ಲ ಇದು ಸಾಮಾನ್ಯ ಜನರ ಗೆಲವು ಇದು ಪ್ರತಿಯೊಬ್ಬ ನಾಗರೀಕನ ಗೆಲವು ಇದು ದೇಶದ ಗೆಲವು ಎಂದರು. ಸಾರ್ವಜನಿಕರು ಯಾವುದೇ ಸುಳ್ಳು ಗ್ಯಾರಂಟಿ ನಂಬಿಲ್ಲ. ಎನ್ನುವುದಕ್ಕೆ ಈ ಚುನಾವಣೆ ಸಾಕ್ಷಿಯಾಗಿದೆ ಎಂದ ಅವರು ಈ ಗೆಲುವಿಗೆ ಕಾರಣರಾದ ಎಲ್ಲಾ ಕಾರ್ಯಕರ್ತರಿಗು ಮತದಾರ ಬಂದುಗಳಿಗು ಪಕ್ಷದ ಎಲ್ಲಾ ನಾಯಕರಿಗು ಕೃತಜ್ಞತೆಯನ್ನು ಸಲ್ಲಿಸಿದರು.
ಬಿ.ವೈ. ರಾಘವೇಂದ್ರ 7.13.629, ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ 5.01.402 ಹಾಗೂ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ 27,448 ಮತಗಳನ್ನು ಪಡೆದಿದ್ದಾರೆ.
ವರದಿ: ರಾಘವೇಂದ್ರ ತಾಳಗುಪ್ಪ