ಉಡುಪಿಚಿಕ್ಕಮಗಳೂರುಜಿಲ್ಲೆನ್ಯೂಸ್

“ಶೋಭಾ ಗೋ ಬ್ಯಾಕ್” ಬಿಜೆಪಿ ಕಾರ್ಯಕರ್ತರಿಂದ ಹೆಚ್ಚಾದ ಆಕ್ರೋಶ.

“ಶೋಭಾ ಗೋ ಬ್ಯಾಕ್” ಬಿಜೆಪಿ ಕಾರ್ಯಕರ್ತರಿಂದ ಹೆಚ್ಚಾದ ಆಕ್ರೋಶ.

(CHIKKAMAGALURU): ಚಿಕ್ಕಮಗಳೂರು ಉಡುಪಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಈ ಬಾರಿ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡದಂತೆ ಶೋಭಾ ಗೋ ಬ್ಯಾಕ್’ ಅಭಿಯಾನ ನಡೆಸಿದ್ದು ಸೋಶಿಯಲ್ ಮೀಡಿಯಾ, ಹಾಗೂ ಪತ್ರ ಅಭಿಯಾನದ ಮೂಲಕ ‘ಶೋಭಾ ಗೋ ಬ್ಯಾಕ್’ ಅಭಿಯಾನ ನಡೆಸಿದರು.

ಶಾಸಕ ಆರಗ ಜ್ಞಾನೇಂದ್ರ, ಮುಖಂಡ ಭಾನು ಪ್ರಕಾಶ್ ಸೇರಿ ಹಲವು ಮುಖಂಡರ ನೇತೃತ್ವದಲ್ಲಿ ಚುನಾವಣಾ ‌ನಿರ್ವಹಣಾ ಸಮಿತಿ ಸಭೆ ಭಾನುವಾರ ನಡೆಯುತ್ತಿತ್ತು.

ಈ ಸಮಯಕ್ಕೆ ಬಿಜೆಪಿ ಕಾರ್ಯಕರ್ತರು ಸಭೆಯ ಕಚೇರಿ ಮುಂದೆ ಆಗಮಿಸಿ ಚಿಕ್ಕಮಂಗಳೂರು ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಕೆಲಸ ಕಾರ್ಯಗಳಾಗಿಲ್ಲ ಬಿಜೆಪಿ ಮುಖಂಡರ ಮುಖ ಪರಿಚಯವೂ ಇಲ್ಲದ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡಬಾರದು, ಚಿಕ್ಕಮಗಳೂರು ಜಿಲ್ಲೆಯವರೆಗೆ ಟಿಕೆಟ್ ನೀಡುವಂತೆ, ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ನೀಡದಂತೆ ಆಗ್ರಹಿಸಿದರು.

ಆದರೆ ಬಿಜೆಪಿಯ ಕೆಲವು ಮುಖಂಡರು ಅಭ್ಯರ್ಥಿ ಯಾರೇ ಆಗಿರಲಿ ನಮ್ಮ ಮತ ಮೋದಿಗೆ ಎಂದು ಅಭಿಯಾನ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Scan the code