ಚಿಕ್ಕಮಗಳೂರುನ್ಯೂಸ್ಮಲೆನಾಡು

ಅದ್ದೂರಿಯಾಗಿ ಆಚರಣೆ ಗೊಂಡ ಶೌರ್ಯ ಜಾಗರಣ ರಥಯಾತ್ರೆ ಬಾಳೆಹೊನ್ನೂರು.

ಅದ್ದೂರಿಯಾಗಿ ಆಚರಣೆ ಗೊಂಡ ಶೌರ್ಯ ಜಾಗರಣ ರಥಯಾತ್ರೆ ಬಾಳೆಹೊನ್ನೂರು.

(BALEHONNURU): ವಿಶ್ವ ಹಿಂದು ಪರಿಷತ್ತಿಗೆ 60 ವರ್ಷ ತುಂಬುತ್ತಿರುವ ಹಿನ್ನಲೆ ದೇಶದಾದ್ಯಂತ ಯುವಕರಲ್ಲಿ ರಾಷ್ಟ್ರಭಕ್ತಿ, ಹಿಂದು ಜಾಗೃತಿ ಹಾಗೂ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು. ಇಂದು ಬಾಳೆಹೊನ್ನೂರಿಗೆ ಬಂದ ಶೌರ್ಯ ಜಾಗರಣ ರಥಯಾತ್ರೆ ಅದ್ಧೂರಿಯಿಂದ ನೆರವೇರಿತು. ಬಾಳೆಹೊನ್ನೂರು, ಶೃಂಗೇರಿಯ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹಾಗೂ ಬಜಂಗದಳ ಕಾರ್ಯಕರ್ತರು ಸಹ ರಥಯಾತ್ರೆಯಲ್ಲಿ ಭಾಗವಹಿಸಿದ್ದರು.



ದಿನಾಂಕ 25-09-2023 ರಂದು ಕೋಟೆನಾಡು ಚಿತ್ರದುರ್ಗದಲ್ಲಿ ಪ್ರಾರಂಭ ಗೊಂಡ ಶೌರ್ಯ ಜಾಗರಣ ರಥಯಾತ್ರೆ 10-10-2023 ಮಂಗಳವಾರ ರಂದು ಉಡುಪಿಯಲ್ಲಿ ಸಮಾರೋಪ ಗೊಳ್ಳಲಿದೆ. ಅದರ ಭಾಗವಾಗಿ ಕರ್ನಾಟಕದಲ್ಲಿ ಶೌರ್ಯ ಜಾಗರಣ ರಥಯಾತ್ರೆ ನಡೆಯಲಿದೆ. ವಿಶ್ವ ಹಿಂದೂ ಪರಿಷತ್ ಯುವಪೀಳಿಗೆಯ ಶೌರ್ಯವನ್ನು ಸಮಾಜಕ್ಕೆ ಉಪಯೋಗಿಸುವಂತಾಗಲು ಬಜರಂಗದಳ ಹಾಗೂ ದುರ್ಗಾ ವಾಹಿನಿ ಪ್ರಾರಂಭಿಸಿದೆ.


ಬಾಳೆಹೊನ್ನೂರಿನಲ್ಲಿ ದಿಕ್ಸೂಚಿ ಭಾಷಣ ಮಾಡಿರುವ ಮುರುಳಿಕೃಷ್ಣ ಹಸಂತ್ತಡ್ಕ
ಹಿಂದು ಸನಾತನ ಧರ್ಮ ಸಂಸ್ಕೃತಿಯನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ. ಕಾರ್ಗಿಲ್ ವಿಜಯ ದಿವಸ್ ಯುದ್ದದಲ್ಲಿ ಮಾಡಿದವರು ಮತ್ತು ಜಯ ಗಳಿಸಿದ ಸೈನ್ಯರನು ನೆನೆಯುತ. ಕೋಟೆ ನಾಡು ಚಿತ್ರದುರ್ಗದಲ್ಲಿ ಆರಂಭ ಗೊಂಡ ಶೌರ್ಯ ಜಾಗರಣ ರಥಯಾತ್ರೆ ಇಂದು ಬಾಳೆಹೊನ್ನರು ಬಂದು ತಲುಪಿದೆ. ಹಿಂದು ಸಮಾಜದ ಸೋಲುವ ಸಮಾಜವಲ್ಲ. ರಾಮಮಂದಿರ ನಿರ್ಮಾಣ ದಿನಾಂಕ ನಿಗದಿ ಅಗಿದೆ. ದತ್ತ ಪೀಠದಲ್ಲಿ ಅರ್ಚಕರ ನೇಮಕ ಮಾಡಲಾಗಿದೆ. ಇಂದಿಗೂ ಪೂಜೆ ಪುನಸ್ಕಾರಗಳು ನಡೆಯುತ್ತಲಿವೆ ಯಲ್ಲವು ವಿಶ್ವ ಹಿಂದೂ ಪರಿಷತ್ತಿನ ಮತ್ತು ಬಜರಂಗದಳ ಹೋರಾಟದ ಪರಿಶ್ರಮ. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರನ್ನು ಸ್ವಾಗತಿಸಿದ ಶ್ರೀ ಉಮೇಶ್, ಪ್ರಾಸ್ತಾವಿಕ ನುಡಿ ಶಶಾಂಕ್ ಹೇರೂರು, ದಿಕ್ಸೂಚಿ ಭಷಣ ಮುರುಳಿ ಕೃಷ್ಣ ಹಸಂತ್ತಡ್ಕ, ಅಧ್ಯಕ್ಷರ ಭಾಷಣ ಕೆ . ಪಿ ಸುರೇಶ್ ಕುಮಾರ್, ಶ್ರೀ ಆರ್.ಡಿ ಮಹೇಂದ್ರ ಹಾಸನ ವಿಭಾಗದ ಸಹ ಕಾರ್ಯದರ್ಶಿ VHP , ದಿವೀರ್ ಮಲ್ನಾಡ್, ಅಜಿತ್ ಕಳಸ , ಸ್ಫೂರ್ತಿ ಉಮೇಶ್. ರವರು ಉಪಸ್ಥಿತರಿದ್ದರು.

ಜಾಹೀರಾತು/Advertisement


ರಥಯಾತ್ರೆಯ ಸಂಕ್ಷಿಪ್ತ ಉದ್ದೇಶ

• ಹಿಂದೂ ಧರ್ಮದ ವೈಭವಯುತ ಚರಿತ್ರೆ, ಸಂಸ್ಕೃತಿ, ಸಂಪ್ರದಾಯ ಇಡೀ ಸಮಾಜಕ್ಕೆ ತಿಳಿಸುತ್ತಾ ಸಮಾಜಕ್ಕೆ ಅನ್ಯರಿಂದ ಆಗಿರುವ ಹಾನಿ ಹಾಗೂ ಪ್ರಸ್ತುತ ಆಗುತ್ತಿರುವ ಹಾನಿ ಅನ್ಯರ ತುಷ್ಟಿಕರಣ ಮಾಡಿ ರಾಜಕೀಯ ಮಾಡುತ್ತಿರುವ ಪರಿ ತಿಳಿಸಿ ಅದನ್ನು ತುಳಿದು ನಿಂತು ಗೌರವಯುತ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಪ್ರೇರಣೆ ಕೊಡುವುದು.

• ಹಿಂದೂ ಧರ್ಮದ ಅಡಿಪಾಯಗಳಾದ ಗೋವು, ದೇವಸ್ಥಾನಗಳು, ಶ್ರದ್ಧಾ ಕೇಂದ್ರಗಳನ್ನು ಉಳಿಸಿ ಬೆಳೆಸುವಲ್ಲಿ ಪ್ರೇರಣೆ ಕೊಡುವುದು. ಸಮಾಜದಲ್ಲಿ ಪರಸ್ಪರ ಸಾಮರಸ್ಯ ಕಾಪಾಡಿ ನಮ್ಮ ಹೆಮ್ಮೆಯ ಸನಾತನ ಹಿಂದೂಧರ್ಮ ಮತ್ತು

ಸಂಸ್ಕೃತಿ, ಸಂಪ್ರದಾಯಗಳನ್ನು ತಿಳಿಹೇಳಿ ಸಮರ್ಪಕವಾಗಿ ಆಚರಿಸುವಂತೆ ಪ್ರೇರಣೆ ನೀಡುವುದು. ಯುವಪೀಳಿಗೆಯನ್ನು ಪಾಶ್ಚಾತ್ಯ ಪ್ರಭಾವದಿಂದ ಹೊರ ತಂದು ಮಹಾ ಪಾತಕಗಳಿಂದ ಮುಕ್ತಗೊಳಿಸಿ ನಮ್ಮಹೆಮ್ಮೆಯ ಧರ್ಮ ಆಚರಣೆಗೆ ಸಿದ್ಧಪಡಿಸುವ ಯೋಜನೆ ಮತ್ತು ಪ್ರೇರೇಪಣೆ ಮಾಡುವುದು. ಹಿಂದೂ ಯುವಕರಲ್ಲಿ ನಮ್ಮ ಪೂರ್ವಜರ ಮತ್ತು ಹುತಾತ್ಮರ ಜೀವನದ ಬಗ್ಗೆ ಹೆಮ್ಮೆಯ ಭಾವವನ್ನು ಮೂಡಿಸುವುದು. ಅವರ ಪ್ರೇರಣೆಯಿಂದ ಸ್ಫೂರ್ತಿ ಪಡೆದು ಯುವಕರು ದೇಶಕ್ಕಾಗಿ ಬದುಕುವ
ಸಂಕಲ್ಪ ಮಾಡಿಸುವುದು. # ಹಿಂದೂ ಧರ್ಮ ಮತ್ತು ಸಂಸ್ಕೃತಿಯ ಮೇಲಿನ ಗೌರವವನ್ನು ಜಾಗೃತಗೊಳಿಸುವುದು

• ನಾವೆಲ್ಲಾ ಹಿಂದೂ ನಾವೆಲ್ಲ ಒಂದು ಎಂಬ ಘೋಷಣೆಯಿಂದ ಸಮಾಜದಲ್ಲಿ ಸಾಮಾಜಿಕ ಸಾಮರಸ್ಯಕ್ಕಾಗಿ ಸಂಕಲ್ಪಮಾಡಿಸುವುದು ಯುವಕರನ್ನು ವ್ಯಸನಗಳಿಂದ ಮುಕ್ತಿಗೊಳಿಸಿ, ಸಂಸ್ಕಾರವನ್ನು ನೀಡಿ ದೇಶಭಕ್ತರನ್ನಾಗಿಸುವುದು.
ಲವ್ ಜಿಹಾದ್, ಮತಾಂತರ, ಗೋಹತ್ಯೆ ಇವುಗಳನ್ನು ತಡೆದು ಹಿಂದೂ ಧರ್ಮದ ರಕ್ಷಣೆ ಈ ಮೂಲಕ ಇಡೀ ದೇಶದ ಯುವಕರನ್ನು ಸಂಘಟಿಸಿ, ದೇಶದ ಯುವಶಕ್ತಿಯನ್ನು ರಾಷ್ಟ್ರಶಕ್ತಿಯನ್ನಾಗಿಸುವ ಕಾರ್ಯವನ್ನು ಮಾಡುವುದು ನಮ್ಮಉದ್ದೇಶ. ರಾಷ್ಟ್ರನಿರ್ಮಾಣದ ಮಹಾ ಯಜ್ಞದಲ್ಲಿ ನಾವೆಲ್ಲರೂ ಭಾಗವಹಿಸೋಣ ಬನ್ನಿ ಭಾರತ ಮಾತೆಯ ರಕ್ಷಣೆಯ ಸಂಕಲ್ಪವನ್ನು ಸ್ವೀಕರಿಸಿ ವಿಶ್ವಹಿಂದೂ ಪರಿಷದ್ – ಬಜರಂಗದಳ ಆಯೋಜಿಸಿರುವ ಶೌರ್ಯ ಜಾಗೃತ ರಥ ಯಾತ್ರೆಯಲ್ಲಿ ತನು ಮನದಿಂದ ಭಾಗವಹಿಸಿ ಯಶಸ್ವಿಗೊಳಿಸೋಣ ಎಂದು ಈ ಮೂಲಕ ತಿಳಿಸಿದರು.

Leave a Reply

Your email address will not be published. Required fields are marked *

Scan the code