ಅದ್ದೂರಿಯಾಗಿ ನಡೆದ ಶ್ರೀ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ
(KOLARA): ಬಂಗಾರಪೇಟೆ : ಪಟ್ಟಣದ ಶ್ರೀ ಕೊದಂಡ ರಾಮಸ್ವಾಮಿಯ ಬ್ರಹ್ಮರಥೋತ್ಸವವು ಶ್ರದ್ಧಾ ಭಕ್ತಿಗಳಿಂದ ಅದ್ಧೂರಿಯಾಗಿ ನೇರವೇರಿತು.
ಸುಮಾರು 1200ಕ್ಕೂ ಹೆಚ್ಚು ವರ್ಷಗಳ ಇತಿಹಾಸದ ಪುರಾಣ ಪ್ರಸಿದ್ದ ಹೊಂದಿರುವ ಪಟ್ಟಣದ ಹೃದಯ ಭಾಗದಲ್ಲಿ ನೆಲೆಸಿರುವ ಶ್ರೀಕೋದಂಡರಾಮಸ್ವಾಮಿ ದೇವಾಲಯದ ಪ್ರತಿ ವರ್ಷದಂತೆ ಈ ವರ್ಷವೂ ಒಟ್ಟು 13 ದಿನಗಳ ಕಾಲ ನಿತ್ಯ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಭಕ್ತಾಧಿಗಳ ಗಮನಸೆಳೆಯುತ್ತದೆ. 7ನೇ ದಿನವಾದ ಗುರುವಾರ ಮುಜರಾಯಿ ಇಲಾಖೆಯಿಂದ ಅದ್ದೂರಿಯಾಗಿ ಭ್ರಹ್ಮ ರಥೋತ್ಸವ ನಡೆಯಿತು.
ರಥೋತ್ಸವಕ್ಕೆ ತಾಲೂಕಿನ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ದೇವರ ಕೃಪೆಗೆ ಪಾತ್ರರಾದರು. 1 ಗಂಟೆಗೆ ರಥವನ್ನು ಎಳೆಯುತ್ತಿದ್ದಂತೆ ವಿಶ್ವ ಹಿಂದೂ ಪರಿಷತ್ ಸದಸ್ಯರು ಹಾಗೂ ಶ್ರೀರಾಮ ಭಕ್ತರು ಜೈಶ್ರೀರಾಮ್ ಎಂದು ಘೋಷಣೆಗಳನ್ನು.
ನೆರೆದಿದ್ದ ಭಕ್ತಾಧಿಗಳು ದೇವರ ಮೇಲೆ ಹೂವು ಬಾಳೆ ಹಣ್ಣುಗಳನ್ನು ಎಸೆದರು. ರಥ ಬಜಾರ್ ರಸ್ತೆಯಲ್ಲಿ ಸಾಗಿ ಒಂದು ಸುತ್ತು ಹಾಕಿಕೊಂಡು ಮತ್ತೆ ದೇವಾಲಯದ ಆವರಣ ತಲುಪಿದೆ. ಒಂದು ಕಡೆ ಬಿಸಿಲಿನ ತಾಪ ಸುಡುತ್ತಿದ್ದರೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ರಥವನ್ನು ನೋಡಿ ಕಣ್ಣುಂಬಿಕೊಳ್ಳಲು ಆಗಮಿಸಿ ಪುಳಿಕಿತರಾದರು.
ರಥೋತ್ಸವಕ್ಕೆ ಆಗಮಿಸಿದ್ದ ಜನರಿಗೆ ಭಜರಂಗದಳ ಕಾರ್ಯಕರ್ತರು ಮಜ್ಜಿಗೆ ವ್ಯವಸ್ಥೆ ಮಾಡಿದ್ದರು. ರಥೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ದೇವಾಲರು ಅಭಿವೃದ್ಧಿಯಾಗದೆ ಕಡೆಗಣಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ದೇವಾಲಯ ಅಭಿವೃದ್ಧಿಗಾಗಿ ವಿಶೇಷ ಒತ್ತು ನೀಡಿದೆ.
ದೇವಾಲಯ ಸುತ್ತಲು ಇರುವ ದೇವಾಲಯದ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರು ಅದನ್ನು ತೆರವುಗೊಳಿಸಿ 200ಕೋಟಿ ಆಸ್ತಿಯನ್ನು ಉಳಿಸಲಾಗಿದೆ.ಮುಂದೆ ಸುತ್ತಲೂ ದೇವಾಲಯಕ್ಕೆ ಶಾಸ್ವತ ಆದಾಯ ಬರುವಂತೆ ವಾಣಿಜ್ಯ ಸಂಕಿರಣ, ಕಲ್ಯಾಣ ಮಂಟಪ ಇತ್ಯಾದಿಗಳನ್ನು ನಿರ್ಮಾಣ ಮಾಡಲು ಸರ್ಕಾರ ಅನುದಾನ ಮಂಜೂರು ಮಾಡಿದೆ ಎಂದು ತಿಳಿಸಿದರಲ್ಲದೆ ಇನ್ನು ಒಂದು ತಿಂಗಳಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.
ಈ ವೇಳೆ ತಹಸೀಲ್ದಾರ್ ಯು.ರಶ್ಮಿ, ಮಾಜಿ ಪುರಸಭೆ ಸದಸ್ಯ ಕೆ.ಚಂದ್ರಾರೆಡ್ಡಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಿ.ವಿ.ಮಹೇಶ್ ಕೋಚಿಮಲ್ ನಿರ್ದೇಶಕ ಡಿ.ವಿ.ಹರೀಶ್ ಮತ್ತಿತರರು ಇದ್ದರು.
ವರದಿ: ವಿಷ್ಣು ಕೋಲಾರ