14ನೇ ವರ್ಷದ ನವರಾತ್ರಿಯ ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಿದ್ದ ಶ್ರೀ ಬಿ ಗಿರಿಜಾ ಶಂಕರ ಜೋಶಿ.
(CHIKKAMAGALURU): ದುರ್ಗಾದೇವಿಯನ್ನು ಆರಾಧಿಸುವ ಹಬ್ಬವೇ 9 ದಿನಗಳ ಕಾಲ ಭಾರತದಾದ್ಯಂತ ನಡೆಯುವ ಹಬ್ಬ ಇದಾಗಿದ್ದು, ಕರ್ನಾಟಕದಲ್ಲಿ ನವರಾತ್ರಿಯನ್ನು ದಸರಾ ಮಹೋತ್ಸವ ಎಂದು ನವರಾತ್ರಿ ಎಂದರೆ 9 ದೇವಿಯ ಒಂಬತ್ತು ವಿವಿಧ ರೂಪಗಳನ್ನು ಒಂಬತ್ತು ದಿನಗಳಲ್ಲಿ ವಿಶೇಷವಾದ ಭಕ್ತಿ ಶ್ರದ್ಧೆಯಿಂದ 14ನೇ ವರ್ಷದ ನವರಾತ್ರಿ ಪೂಜಾ ಮಹೋತ್ಸವದ ದುರ್ಗಾದೇವಿ ಮೂರ್ತಿಯನ್ನು ಇಂದು ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರು ನಗರದಲ್ಲಿ ಶ್ರೀ ದುರ್ಗಾ ದೇವಿಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ಶ್ರೀ ಗಣಪತಿ ಹೋಮ ನಡೆಸಲಾಯಿತು. ಹಾಗೂ ಶ್ರೀ ಬಿ ಗಿರಿಜಾ ಶಂಕರ ಜೋಶಿ ಅವರು ಶ್ರೀ ಕ್ಷೇತ್ರ ಹೊರನಾಡು ಇವರಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆಯನ್ನು ನೀಡಲಾಯಿತು. 9 ದಿನಗಳು ಪೂಜಾ ಪುನಸ್ಕಾರ ದೊಂದಿಗೆ ದಿನ ನಿತ್ಯವೂ ಅನ್ನ ಸಂತರ್ಪಣೆ, ಹಾಗೂ ಒಂಬತ್ತೂ ದಿನಗಳು ಒಂಬತ್ತೂ ತರದ ಪಾಯಸವನ್ನು ಮಾಡುವುದು ಇಲ್ಲಿನ ವಿಶೇಷವಾಗಿದೆ. ದುರ್ಗಾ ದೇವಿಯ ವಿಗ್ರಹ ಪ್ರತಿಷ್ಠಾಪನೆಯಲ್ಲಿ ಶ್ರೀ ದುರ್ಗಾದೇವಿ ನವರಾತ್ರಿ ಉತ್ಸವದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು : ಶ್ರೀ ಹೆಚ್.ಡಿ. ನಾಗೇಶ್ಹೆಗ್ಡೆ, ಗೌರವಾಧ್ಯಕ್ಷರು : ಶ್ರೀ ಕೆ.ಎನ್. ರುದ್ರಪ್ಪಗೌಡ, ಶ್ರೀ ಎಂ.ಎಸ್. ಚೆನ್ನಕೇಶವಗೌಡ ಶ್ರೀ ಬಿ.ಎಂ. ನಾಗೇಶ್ ಕಲ್ಮಕ್ಕಿ ಕಾರ್ಯಾಧ್ಯಕ್ಷರು : ಶ್ರೀ ವೈ. ಮೋಹನ್ ಕುಮಾರ್ , ಉಪಾಧ್ಯಕ್ಷರು : ಶ್ರೀ ಕೆ.ಜಿ. ವೆಂಕಟೇಶ್ , ಶ್ರೀ ಕೆ.ಕೆ. ವೆಂಕಟೇಶ್ , ಶ್ರೀಮತಿ ಪ್ರಸನ್ಮಾ ಜಿ.ಭಟ್ , ಶ್ರೀ ಜಿ.ಚನ್ನಕೇಶವ, ಬರಗ ಶ್ರೀ ಶಿವರಾಮಶೆಟ್ಟಿ, ಕಡಬಗೆರೆ, ಪ್ರಧಾನ ಕಾರ್ಯದರ್ಶಿ :ಎಚ್ .ಆರ್ ಆನಂದ್, ಜಂಟಿ ಕಾರ್ಯದರ್ಶಿ ಶ್ರೀ ಪ್ರಭಾಕರ್ ಪ್ರಣಸ್ವಿ, ಕಾರ್ಯದರ್ಶಿ: ಶ್ರೀ ಆರ್ .ಡಿ ಮಹೇಂದ್ರ, ಶ್ರೀ ಎಚ್ ಡಿ ಸತೀಶ್ ಹಲಸೂರು, ಖಜಾಂಚಿ: ಶ್ರೀ ಭಾಸ್ಕರ್ ವೆನಿಲ್ಲಾ, ಸಹ ಖಜಾಂಚಿ: ಶ್ರೀ ಚೈತನ್ಯ ವೆಂಕಿ, ಟಿ ಆರ್ ನಾಗಪ್ಪಗೌಡ, ಶ್ರೀಮತಿ ಅನುಪಮಾ ಆಳ್ವ, ಡಿ.ಎನ್ ಸುಧಾಕರ್ ದಿಡಿಗೆಮನೆ, ಮಣಿಕಂಠನ್, ಉಪೇಂದ್ರಚಾರ್ಯ, ಎಸ್. ಪಿ ಶ್ರೀನಿವಾಸಮೂರ್ತಿ, ರಚನ್ ಜೆ ಹುಯಿಗೆರೆ, ದಯಾಕರ್ ನಾ ಸುವರ್ಣ, ಶ್ರೀಕಾಂತ್ ಹರಿದಾಸ್, ಬಿ.ಕೆ ನಾಗರಾಜ್ ಬರಗಲ್, ಸುವಿಕ್ರಮ, ಹೆಚ್.ಹೆಚ್ ಕೃಷ್ಣಮೂರ್ತಿ, ಹಾಗೂ ಎಲ್ಲಾ ಪದಾಧಿಕಾರಿಗಳು ಸಮಿತಿಯ ಸದಸ್ಯರು ಭಾಗವಹಿಸಿದ್ದರು. ದಿನ ನಿತ್ಯವೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 9 ದಿನಗಳ ಕಾಲ ವಿವಿಧ ಆಚರಣೆಗಳನ್ನು ಮಾಡಲಾಗುತ್ತದೆ.
ಇಂದು ರಾತ್ರಿ 8 ಗಂಟೆಯಿಂದ “ನಮ್ಮೂರ ಕಲೋತ್ಸವ” ಸ್ಥಳೀಯ ಕಲಾವಿದರು ಹಾಗೂ ವಿದ್ಯಾರ್ಥಿಗಳಿಂದ ವೈವಿಧ್ಯಮಯ “ನೃತ್ಯ ಸಂಗೀತ” ಸೇರಿದಂತೆ ವಿವಿಧ ಕಲೆಗಳ ಚಿತ್ತಾಕರ್ಷಕ ಪ್ರಸ್ತುತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿದೆ.