News & Updatesಚಿಕ್ಕಮಗಳೂರುನ್ಯೂಸ್

ಬಾಳೆಹೊನ್ನೂರು ದುರ್ಗಾದೇವಿ ದಸರಾ ಉತ್ಸವದ ಅದ್ದೂರಿಯ ಸಮಾರೋಪ ಸಮಾರಂಭ. ಬಾಳೆಹೊನ್ನೂರು ಹೆಸರಿನ ಅರ್ಥ ಅನ್ನದಾನ ಮಾಡುವ ಊರು

ಬಾಳೆಹೊನ್ನೂರು ದುರ್ಗಾದೇವಿ ದಸರಾ ಉತ್ಸವದ ಅದ್ದೂರಿಯ ಸಮಾರೋಪ ಸಮಾರಂಭ. ಬಾಳೆಹೊನ್ನೂರು ಹೆಸರಿನ ಅರ್ಥ ಅನ್ನದಾನ ಮಾಡುವ ಊರು


(CHIKKAMAGALURU): ಬಾಳೆಹೊನ್ನೂರು: ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು ಪಟ್ಟಣದಲ್ಲಿ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಆಯೋಜಿಸಿರುವ ಹದಿನಾಲ್ಕನೇ ವರ್ಷದ ದುರ್ಗಾ ಪೂಜಾ ಮಹೋತ್ಸವದ ಅಂಗವಾಗಿ ದಸರಾ ಧಾರ್ಮಿಕೋತ್ಸವ ಮತ್ತು ಜನ ಜಾಗೃತಿ ಧರ್ಮ ಸಭೆ, ದಿನಾಂಕ : 23/ 10/ 23 ರಂದು ಸೋಮವಾರ ಸಂಜೆ 8 ಗಂಟೆಗೆ ಸಮಯಕ್ಕೆ ಬಾಳೆಹೊನ್ನೂರು ಶ್ರೀ ದುರ್ಗಾದೇವಿ ಮಹೋತ್ಸವದ ಮಂಟಪದಲ್ಲಿ ಜರುಗಿತು.
ಶ್ರೀ ದುರ್ಗಾದೇವಿ ಸಮಿತಿ ಅವರಿಂದ ಎಲ್ಲಾ ಧರ್ಮ ಕ್ಷೇತ್ರಗಳಿಗೆ ಕಳಿಸಿದಂತಹ ಪತ್ರಗಳಿಗೆ ಶುಭ ಆಶೀರ್ವಾದ ಸಂದೇಶಗಳನ್ನು ಈ ಸಂದರ್ಭದಲ್ಲಿ ಪಠಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಕ್ಷೇತ್ರ ಹೊರನಾಡು, ಮಂದಾರ್ತಿ ದುರ್ಗಾಪರಮೇಶ್ವರಿ ದೇವಸ್ಥಾನ, ಆನೆಗುಡ್ಡೆ ಶ್ರೀ ದೇವರು ಸನ್ನಿಧಿ, ಇವರುಗಳು ಕಳಿಸಿದಂತಹ ಶ್ರೀ ದುರ್ಗಾದೇವಿ ಸಮಿತಿ ಅವರಿಗೆ ಶುಭ ಆಶೀರ್ವಾದ ಸಂದೇಶಗಳನ್ನು ಪಠಿಸಿದರು. ಹಾಗೂ ಈ ಸಂದರ್ಭದಲ್ಲಿ ದುರ್ಗಾ ದೇವಿ ಸಮಿತಿಯಿಂದ ವಾರ್ಷಿಕ ವರದಿ ಅನ್ನು ಆರ್ .ಡಿ ಮಹೇಂದ್ರರವರು ತಿಳಿಸಿದರು.


ಶ್ರೀ ದುರ್ಗಾದೇವಿ ಸಮಿತಿ ಅವರಿಂದ  2022ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿಶೇಷವಾಗಿ  ಸನ್ಮಾನಿಸಲಾಯಿತು.  10ನೇ ತರಗತಿಯಲ್ಲಿ ಕು. ಸಮೃದ್ಧಿ ಮಂಜುನಾಥ್, ಪಿಯುಸಿ ಕಲಾವಿಭಾಗ : ಕು. ಪ್ರಕೃತಿ, ಬಿ.ಆರ್ ಪೂಜಾ, ಗೌತಮ್, ಸ್ನೇಹ, ಪ್ರಕೃತಿ. ಇವರಿಗೆ ಮಂಜಮ್ಮ ಜೋಗತಿ ಹಾಗೂ ಪೂಜ್ಯ ಶ್ರೀ ಸಿದ್ದಲಿಂಗ ದೇವರುಗಳಿಂದ ವಿಶೇಷವಾಗಿ ಸನ್ಮಾನಿಸಲಾಯಿತು.



14ನೇ ವರ್ಷದ ದುರ್ಗಾದೇವಿಯ ಗೌರವ ಶ್ರೀರಕ್ಷೆ



ಪ್ರತಿವರ್ಷದಂತೆಯೂ ಈ ವರ್ಷವೂ ನಾಲ್ಕನೇ ವರ್ಷದ ಶ್ರೀ ದುರ್ಗಾದೇವಿಯ ಗೌರವ ಶ್ರೀರಕ್ಷೆ ಪುರಸ್ಕೃತರು ಕರ್ನಾಟಕ ಜನಪದ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಾತೆ ಡಾ. ಬಿ ಮಂಜಮ್ಮ ಜೋಗತಿಯವರು ಹೊಸಪೇಟೆ,  ಹಂಪಿ. ಇವರಿಗೆ ದುರ್ಗಾದೇವಿ ಸಮಿತಿ ಇವರಿಂದ ಸನ್ಮಾನಿಸಲಾಯಿತು. 
ಧರ್ಮ ಜಾತಿ ಲಿಂಗ ಭೇದವಿಲ್ಲದೆ ನನ್ನನ್ನು ಕರೆಸಿ ಶ್ರೀ ದುರ್ಗಾದೇವಿಯ ಗೌರವ ಶ್ರೀ ರಕ್ಷೇಯನ್ನು ನೀಡಿದ್ದು ನನಗೆ ತುಂಬಾ ಸಂತೋಷವಾಗಿದೆ. ನಾವು ಎಲ್ಲರೂ ಸಮಾನರು ಎಂಬ ಭಾವನೆ ದೇವರು ದೇವಸ್ಥಾನದಲ್ಲಿ ಇಲ್ಲ ನಾವು ಮಾಡುವ ಕೆಲಸದಲ್ಲಿ ಇದ್ದಾನೆ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ದೇವರನ್ನು ಕಾಣಬಹುದು ಯಾರು ಮತ್ತೊಬ್ಬರಿಗೆ ನೋಯಿಸುವುದಿಲ್ಲವೋ  ಯಾರು ಮತ್ತೊಬ್ಬರಿಗೆ ಕೆಡುಕು ಬಯಸುವರೋ ಅವರಿಗೆ ಎಂದಿಗೂ ಒಳಿತಾಗುವುದಿಲ್ಲ. ತಮ್ಮ ಕೈಯಲ್ಲಿ ಆದರೆ ಒಳ್ಳೆಯದನ್ನು ಮಾಡಿ ಒಳ್ಳೆಯದನ್ನು ಮಾಡುವುದಕ್ಕಾಗಿಲ್ಲವೆಂದರೆ ತೆಪ್ಪಗೆ ಮನೇಲಿ ಕೂತುಬಿಡಿ. ಹಾರಿ ಹೋಗುವ ಕಾಗೆಗೂ ಸಹ ಅದರ ಕಟ್ಟುತ್ತಾರೆ ನಮ್ಮ ಜೊತೆ ಇರುವ ಮನುಷ್ಯರು, ಹೆಣ್ಣು ಹೆಣ್ಣಿಗೆ ಶತ್ರು ಮನೆಹಾಳು ಮಾಡುವಂತಹ ಧಾರವಾಹಿಗಳನ್ನು ದಯವಿಟ್ಟು ನೋಡಬ್ಯಾಡ್ರಿ, ಮಕ್ಕಳಿಗೆ ಮೊಬೈಲ್ ಬದಲು ಪುಸ್ತಕವನ್ನು ನೀಡಿ ಪುಸ್ತಕವನ್ನು ಓದಿದರೆ ಸಂಸ್ಕೃತಿ ಆಚಾರ ವಿಚಾರ ನಮ್ಮ ನಾಡಿನ ಸಂಸ್ಕಾರವು ಉಳಿಯುವುದು, ವೇದಿಕೆ ಮೇಲೆ ಮಾತನಾಡುವಾಗ ಮಂಜಮ್ಮ ಜೋಗತಿಯವರು ಭಾವುಕರಾಗಿ ತನ್ನಂತ ಮಗು ಜನಿಸಿದರೆ ದಯವಿಟ್ಟು ಮನೆಯಿಂದ ಹೊರಗೆ ತಳ್ಳಬೇಡಿ ಅವರಿಗೆ ಆಸ್ತಿಯನ್ನು ಮಾಡಬೇಡಿ, ಹೆಚ್ಚು ಹೆಚ್ಚು ಸಂಪಾದನೆಯನ್ನು ಮಾಡಬೇಡಿ, ಅವರಿಗೆ ವಿದ್ಯಾಭ್ಯಾಸ ಮಾತ್ರ ಕೊಡಿಸಿ ಎಂದು ತಂದೆ ತಾಯಂದಿರ ಬಳಿ ಭಾವುಕರಾಗಿ ಬೇಡಿಕೊಂಡರು.



ದಿವ್ಯ ಸನ್ನಿಧಿ ಮತ್ತು ಆಶೀರ್ವಾದ

ಮನುಷ್ಯ ತನ್ನ 8 ನೇ ವಯಸ್ಸಿನಲ್ಲಿ ಇದ್ದ ಹುರುಪು ಉತ್ಸಾಹವು 80ನೇ ವಯಸ್ಸಿಗೆ ಇರುವುದಿಲ್ಲ , ಜೀವನದಲ್ಲಿ ಉತ್ಸಾಹದಿಂದ ಬದುಕಿ ನಿರತ್ಸಾಹದಿಂದ ಬದುಕ ಬದುಕಬೇಡಿ, ನಾನೇ ದೊಡ್ಡವನು ಎಂದು ಮೆರೆದವರು ಕೂಡ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದಾರೆ, ಹೇಗಿದ್ದರೂ ಕೂಡ ಒಂದಲ್ಲ ಒಂದು ದಿನ ಉಪ್ಪಾಗಿ ಮಣ್ಣಲ್ಲಿ ಮಣ್ಣಾಗುವವರಿದ್ದಾರೆ. ಇಲ್ಲಿ ಬಂಗಾರ ಕಿರೀಟ ಕೊಟ್ಟವನಿಗೂ ಸನ್ಮಾನವಿದೆ ಆ ಬಂಗಾರದ ಕಿರೀಟದ ಕೆಳಗೆ ಬೀಳುವ ಕಸ ಗೂಡಿಸುವವರಿಗೂ ಸನ್ಮಾನವಿದೆ ಎಂದು ಶ್ರೀ ದುರ್ಗಾದೇವಿ ಸಮಿತಿ ಅವರಿಗೆ ಆಶಿಸಿದರು. ಬಾಳೆಹೊನ್ನೂರು ಎಂದರೆ ಅನ್ನದಾನಕ್ಕೆ ಶ್ರೇಷ್ಠವಾದ ಊರು ಸಮಿತಿಯಿಂದ ಪ್ರತಿ ವರ್ಷವೂ ಅನ್ನದಾನ ಮಾಡುತ್ತಿದ್ದು ಸಾವಿರಾರು ಭಕ್ತರ ಗಳಿಗೆ ದಿನನಿತ್ಯ ಅನ್ನದಾನ ಸಂತರ್ಪಣೆ ನಡೆಯುತ್ತಿದೆ ಬಹಳ ಖುಷಿಯ ವಿಚಾರವಾಗಿತ್ತು ದುರ್ಗಾದೇವಿ ಸಮಿತಿ ಅವರಿಗೆ 15ನೇ ವರ್ಷದ ಕಾರ್ಯಕ್ರಮ ಹೆಚ್ಚು ಹೆಚ್ಚಾಗಿ ಶಕ್ತಿ ಕೊಟ್ಟು ಮುಂದಿನ ವರ್ಷವೂ ಹೆಚ್ಚು ಜನ ಸೇರುವಂತೆ ಪೂಜ್ಯ ಶ್ರೀ ಸಿದ್ದಲಿಂಗ ದೇವರು ಖಾಸ್ಗತೇಶ್ವರ ಮಠ ತಾಳಿಕೋಟೆ, ವಿಜಯಪುರ ಇವರು ಮನವಿ ಮಾಡಿಕೊಂಡರು.


ಈ ಸಂದರ್ಭದಲ್ಲಿ ಅಧ್ಯಕ್ಷರು : ಶ್ರೀ ಹೆಚ್.ಡಿ. ನಾಗೇಶ್‌ಹೆಗ್ಡೆ,  ಕಾರ್ಯಾಧ್ಯಕ್ಷರು : ಶ್ರೀ ವೈ. ಮೋಹನ್ ಕುಮಾರ್ , ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ: ಶ್ರೀ ಆರ್ .ಡಿ ಮಹೇಂದ್ರ, ಖಜಾಂಚಿ: ಶ್ರೀ ಭಾಸ್ಕರ್ ವೆನಿಲ್ಲಾ, ಸಹ ಖಜಾಂಚಿ: ಶ್ರೀ ಚೈತನ್ಯ ವೆಂಕಿ,  ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

Scan the code