2023ನೇ ನವರಾತ್ರಿ ಉತ್ಸವ ಬಾಳೆಹೊನ್ನೂರು.
ಮೈಸೂರು ದಸರಾ ವೈಭವವನ್ನೆ ಮೀರಿಸುವ 14ನೇ ವರ್ಷದ ಬಾಳೆಹೊನ್ನೂರು ಶ್ರೀ ದುರ್ಗಾದೇವಿ ಪೂಜಾ ಮಹೋತ್ಸವ
(BALEHONNURU): ಚಿಕ್ಕಮಗಳೂರು ಮಲೆನಾಡು ಭಾಗಗಳಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುವ ಮತ್ತೊಂದು ಉತ್ಸವವೇ ಶ್ರೀ ದುರ್ಗಾದೇವಿ ನವರಾತ್ರಿ ಮಹೋತ್ಸವ, ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಯವರು ಇಂದು ಪತ್ರಿಕಾ ಘೋಷ್ಠಿ ಕರೆದಿದ್ದು ಮುಂಬರುವ ನವರಾತ್ರಿ ಉತ್ಸವಕ್ಕೆ ಎಲ್ಲಾ ತಯಾರಿಗಳನ್ನು ಸಿದ್ಧ ಗೊಳಿಸುತ್ತಿರುವುದಾಗಿ ತಿಳಿಸಿದರು ಹಾಗೂ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿದ್ದು ಈ ಆಹ್ವಾನ ಪತ್ರಿಕೆಯು ಅನೇಕ ವಿಶೇಷತೆ ಗಳನ್ನು ಒಳಗೊಂಡಿದೆ.ದಿನಾಂಕ 15 -10- 23 ರಿಂದ 24 -10 -23ರ ವರೆಗೆ ನಡೆಯುವ ಶ್ರೀ ದುರ್ಗಾದೇವಿ ಪೂಜಾ ಮಹೋತ್ಸವ ಹಾಗೂ ಶ್ರೀ ದುರ್ಗಾದೇವಿ ಸನ್ನಿಧಿಯಲ್ಲಿ ನೆರವೇರುವ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶೇಷವಾಗಿ ಉತ್ಸವಗಳ ರೂಪದಲ್ಲಿ ಹೆಸರಿಡಲಾಗಿದೆ.
ದಿನಾಂಕ 15/10/23 ಭಾನುವಾರದಂದು ಬೆಳಿಗ್ಗೆ 8 ಗಂಟೆ 29 ನಿಮಿಷಕ್ಕೆ ತುಲಾಲಗ್ನದಲ್ಲಿ ಶ್ರೀ ದುರ್ಗಾ ದೇವಿಯ ವಿಗ್ರಹ ಪ್ರತಿಷ್ಠಾಪನೆ ಹಾಗೂ ಶ್ರೀ ಗಣಪತಿ ಹೋಮ ಮತ್ತು ಮಾರ್ಕಂಡೇಶ್ವರ,ನಾಗದೇವರು, ಮತ್ಸ್ಯಾಂಬಿಕಾ ಅಮ್ಮ ಮತ್ತು ಮಾರಿಯಮ್ಮನಿಗೆ ಪೂಜೆಯೊಂದಿಗೆ ಶ್ರೀ ಬಿ.ಗಿರಿಜಾ ಶಂಕರ ಜೋಶಿ ಅವರು ಶ್ರೀ ಕ್ಷೇತ್ರ ಹೊರನಾಡು ಇವರಿಂದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುವುದು.
ಈ ಬಾರಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶೇಷವಾಗಿ ಹೆಸರಿಡಲಾಗಿದ್ದು,
“ನಮ್ಮೂರ ಕಲೋತ್ಸವ “- ನೃತ್ಯ ಸಂಗೀತ, “ಪೌರಾಣಿಕ ಯಕ್ಷೋತ್ಸವ”- ಯಕ್ಷಗಾನ, “ಸುಗಮ ಸಂಗೀತೋತ್ಸವ” – ಸುಗಮ ಸಂಗೀತ, “ಕರಾವಳಿ ರಂಗೋತ್ಸವ”- ಶಾಂಭವಿ (ತುಳು ಹಾಸ್ಯಮಯ ನಾಟಕ),” ಸನಾತನ ನಾಟ್ಯೋತ್ಸವ”- ನೃತ್ಯ ನೈವೈದಂ, “ಕರುನಾಡ ನಾಟಕೋತ್ಸವ”- “ಕೃಷ್ಣೆಗೌಡರ ಆನೆ” ಕನ್ನಡ ನಾಟಕ, “ಜಾನಪದ ಜಾತ್ರೋತ್ಸವ”- ಕಲಾಮಯಂ, ಉಡುಪಿ ಇವರಿಂದ ಜಾನಪದ ಕಲೆಗಳ ಅನಾವರಣ,”ಮಲೆನಾಡ ರೂಪಕೋತ್ಸವ “ನಾಗರಹಾವು” ವಿನೂತನ ಶೈಲಿಯ ಕನ್ನಡ ನಾಟಕ.
ದಿನಾಂಕ : 23-10-2023ನೇ ಸೋಮವಾರ ಆಶ್ವಯುಜ ಶುದ್ಧ ನವಮಿ ಬೆಳಿಗ್ಗೆ 8.30ರಿಂದ 11.30ರ ವರೆಗೆ ಹಾಗೂ ಸಂಜೆ 6 ರಿಂದ 7-45ರ ವರೆಗೆ ಸಿಂಹವಾಹಿನಿ, ಶ್ರೀ ರಾಜರಾಜೇಶ್ವರಿ ಪೂಜಾ ಪಾರಾಯಣ” ಮಹಾನವಮಿ ಆಯುಧ ಪೂಜೆ” ಹಾಗೂ ವಿವಿಧ ಪೂಜಾ ಸೇವೆ, ಮಹಾಮಂಗಳಾರತಿ.
ಸಂಜೆ 7.00 ಗಂಟೆಗೆ ” ದಸರಾ ಧಾರ್ಮಿಕೋತ್ಸವ “
ನವರಾತ್ರಿ ಜನಜಾಗೃತಿ ಧರ್ಮಸಭೆ ಮತ್ತು ಸಮಾರೋಪ ಸಮಾರಂಭ ದಿವ್ಯ ಸಾನ್ನಿಧ್ಯ ಮತ್ತು ಆರ್ಶಿವಚನ: ಪೂಜ್ಯ ಶ್ರೀ ಸಿದ್ದಲಿಂಗದೇವರು ಖಾಸ್ಗತೇಶ್ವರ ಮಠ, ತಾಳಿಕೋಟೆ, ವಿಜಯಪುರ,
14ನೇ ವರ್ಷದ ಶ್ರೀ ದುರ್ಗಾದೇವಿಯ ಗೌರವ ಶ್ರೀರಕ್ಷೆ ಪುರಸ್ಕೃತರು ಕರ್ನಾಟಕ ಜಾನಪದ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಾತೆ ಡಾ. ಜಿ. ಮಂಜಮ್ಮ ಜೋಗತಿಯವರು ಹೊಸಪೇಟೆ, ಹಂಪಿ.
ಅಧ್ಯಕ್ಷತೆ : ಶ್ರೀ ಎಚ್ ಡಿ ನಾಗೇಶ್ ಹೆಗ್ಡೆ
ಅಧ್ಯಕ್ಷರು, ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ
ಮುಖ್ಯ ಅತಿಥಿಗಳು: ಶ್ರೀ ಟಿಡಿ ರಾಜೇಗೌಡ
ಮಾನ್ಯ ಶಾಸಕರು, ಶೃಂಗೇರಿ ವಿಧಾನಸಭಾ ಕ್ಷೇತ್ರ.
:ಶ್ರೀ ಡಿ ಎನ್ ಜೀವರಾಜ್
ಮಾಜಿ ಸಚಿವರು,ಕರ್ನಾಟಕ ಸರ್ಕಾರ
ಉಪಸ್ಥಿತಿ: ಶ್ರೀ ಸುಧಾಕರ್ ಎಸ್ ಶೆಟ್ಟಿ
ಸಂಸ್ಥಾಪಕರು, ಅಮ್ಮ ಫೌಂಡೇಶನ್, ಸುಮುಖಾನ
: ಶ್ರೀ ವೈ. ಮೋಹನ್ ಕುಮಾರ್
ಕಾರ್ಯಾಧ್ಯಕ್ಷರು, ಶ್ರೀ ದುರ್ಗಾದೇವಿ ನವರಾತ್ರಿ ಪೂಜಾ ಸಮಿತಿ ಹಾಗೂ ಪ್ರತಿಭಾ ಪುರಸ್ಕಾರ: 2022-23ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಹಾಗೂ ಐಟಿಐ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ.
ದಿನಾಂಕ 24/10/2023ನೇ ಮಂಗಳವಾರ,”ಶೋಭಾ ಯಾತ್ರಾ ಸಂಭ್ರಮೋತ್ಸವ”. ಬೆಳಿಗ್ಗೆ 7 ರಿಂದ ಗಜವಾಹಿನಿ ಶ್ರೀ ಗಜಲಕ್ಷ್ಮಿ ಪೂಜಾ ಪಾರಾಯಣ. ಬೆಳಿಗ್ಗೆ ಎಂಟರಿಂದ ” ಶ್ರೀ ದುರ್ಗಾ ಹೋಮ ” ಬೆಳಿಗ್ಗೆ 9.30 ಗಂಟೆಗೆ ತುಳುನಾಡ ಗಾನಗಂಧರ್ವ ಬಿರುದಾಂಕಿತ ಕಲರ್ಸ್ ಕನ್ನಡ ಖ್ಯಾತಿಯ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ “ಸಂಗೀತ ಗಾನ ಸಂಭ್ರಮ”. ಮಧ್ಯಾಹ್ನ 12 ಗಂಟೆಗೆ ಹೊರನಾಡಿನ ತಾಯಿ ಅನ್ನಪೂರ್ಣೇಶ್ವರಿ ಅಮ್ಮನವರ ಆಶೀರ್ವಾದದೊಂದಿಗೆ ಸಾರ್ವಜನಿಕ “ಅನ್ನ ಸಂತರ್ಪಣೆ”. ಮಧ್ಯಾಹ್ನ 1:30 ಗಂಟೆಗೆ “ಲಾಟರಿ ಡ್ರಾ” ಹಾಗೂ ಮಧ್ಯಾಹ್ನ 2.11ಕ್ಕೆ “ಶ್ರೀ ದುರ್ಗಾದೇವಿಯ” ವಿಸರ್ಜನೆಯ ಪೂಜೆ. ನಂತರ ಭಜನೆ ಹಾಗೂ ವಿಶೇಷ ಆಕರ್ಷಣೀಯ ವಾದ್ಯಮೇಳಗಳ ವೈಭವಯುತ ಮೆರವಣಿಗೆಯೊಂದಿಗೆ ರಾಜಬೀದಿಯಲ್ಲಿ ತೆರಳಿ ನಂತರ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬಾಳೆಹೊನ್ನೂರಿನ ರೋಟರಿ ಸರ್ಕಲ್ ಹತ್ತಿರ ಹಾಗೂ ಭದ್ರಾ ನದಿಯ ತೀರದಲ್ಲಿ ಆಕರ್ಷಕವಾದ ಸಿಡಿಮದ್ದಿನ ಪ್ರದರ್ಶನದೊಂದಿಗೆ ಭದ್ರಾ ನದಿಯಲ್ಲಿ ಶ್ರೀ ದುರ್ಗಾದೇವಿಯ ವಿಗ್ರಹವನ್ನು ಜಲ ಸ್ತಂಭನಗೊಳಿಸಲಾಗುವುದು.