ಮನರಂಜನೆ

‘ನಾವುಗಳು ಗೆದ್ದಿರೋದಕ್ಕೆ ಸರ್ ನಮಗೆಲ್ಲ ಗೋಲ್‌ಗಪ್ಪ ಪಾರ್ಟಿ ಕೊಡಿಸ್ತಾ ಇದಾರೆ!?’

‘ನಾವುಗಳು ಗೆದ್ದಿರೋದಕ್ಕೆ ಸರ್ ನಮಗೆಲ್ಲ ಗೋಲ್‌ಗಪ್ಪ ಪಾರ್ಟಿ ಕೊಡಿಸ್ತಾ ಇದಾರೆ!?’

‘ನಾವುಗಳು ಗೆದ್ದಿರೋದಕ್ಕೆ ಸರ್ ನಮಗೆಲ್ಲ ಗೋಲ್‌ಗಪ್ಪ ಪಾರ್ಟಿ ಕೊಡಿಸ್ತಾ ಇದಾರೆ!?’
ಅಥವಾ
‘ಮುಂದಿನ ಹಂತದಲ್ಲೂ ಬಹುಮಾನ ಗೆದ್ದರೆ ಆಗ ಊಟವನ್ನೇ ಹಾಕಿಸೋಣ’
ಶಾಲೆಯ ಆರಂಭವಾಗುತ್ತಿದ್ದ ಹಾಗೇ ಪಾಠಗಳನ್ನು ಹೊರತು ಪಡಿಸಿ ಮತ್ತೇನಾದರೂ ಚಟುವಟಿಕೆಗಳು ಇವೆಯೇ? ಎಂಬುದರ ಬಗ್ಗೆ ಮಕ್ಕಳ ಕುತೂಹಲವಂತೂ ಇದ್ದೇ ಇರುತ್ತದೆ. ಆರಂಭದಲ್ಲಿ ಮಕ್ಕಳ ಪ್ರತಿಭೆಗೆ ಪೂರಕವಾದ ಸಾಂಸ್ಕöÈತಿಕ ಚಟುವಟಿಕೆಗಳಲ್ಲಿದ್ದಲ್ಲಿ ಭಾಗವಹಿಸುವ ಮಕ್ಕಳಿಗೆ ಕೊರತೆಯಿರುವುದಿಲ್ಲ. ಎಷ್ಟೋ ಬಾರಿ ಹಲವು ಕಾರ್ಯಕ್ರಮಗಳನ್ನು ಸಮಯದ ಅಭಾವದಿಂದಲೋ, ಇತರ ಕಾರಣಗಳಿಂದಲೋ ಮುಂದಿನ ದಿನಗಳಲ್ಲಿ ಮಾಡಲು ಅವಕಾಶ ನೀಡುತ್ತೇವೆ ಎಂದು ಹೇಳಬೇಕಾಗುತ್ತದೆ.
ಇಲಾಖೆಯ ವತಿಯಿಂದ ನಡೆಯುವ ಪ್ರತಿಭಾಕಾರಂಜಿ, ಕ್ರೀಡಾಕೂಟಗಳು, ರಾಷ್ಟಿçÃಯ ಹಬ್ಬಗಳಲ್ಲಿ ನಡೆಯುವ ಸಾಮೂಹಿಕ ಕವಾಯಿತು, ನೃತ್ಯ ಹೀಗೆ ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಜಾತಕಪಕ್ಷಿಯಂತೆ ಕಾಯುತ್ತಲೇ ಇರುತ್ತಾರೆ. ಕೆಲವು ವಿದ್ಯಾರ್ಥಿಗಳಿಗೆ ಎಲ್ಲಾ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳಬೇಕೆಂದಿದ್ದರೂ ಸಮಯವನ್ನು ಹೊಂದಿಸಿಕೊಳ್ಳಲಾಗದೆ ಅನಿವಾರ್ಯವಾಗಿ ಕೆಲವು ಚಟುವಟಿಕೆಗಳನ್ನು ಬಿಡಬೇಕಾಗುತ್ತದೆ. ಇತ್ತ ಪ್ರತಿಭಾಕಾರಂಜಿಗೆ ತಯಾರಿ ಇದ್ದರೆ ಅದೇ ಸಮಯದಲ್ಲಿ ಕ್ರೀಡೆಯ ಅಭ್ಯಾಸವೂ ಇದ್ದರೆ ಯಾವುದಕ್ಕೆ ಸೇರಿಕೊಳ್ಳಬೇಕು ಎಂಬ ಗೊಂದಲ ಸಹಜವಾಗಿ ಇದ್ದೇ ಇರುತ್ತದೆ. ಪಥಸಂಚಲದ ಅಭ್ಯಾಸದ ಸಮಯದಲ್ಲಿ ಕೆಲವರು ಅನಿವಾರ್ಯವಾಗಿ ಕ್ರೀಡಾಚಟುವಟಿಕೆಗಳಲ್ಲಿ ಭಾಗವಹಿಸುವ ಕಾರಣದಿಂದ ಪಥಸಂಚಲನದಿAದ ಹಿಂದುಳಿಯಬೇಕಾಯಿತು. ಎಲ್ಲಾ ಚಟುವಟಿಕೆಗಳು ಮುಗಿದು ಇನ್ನೇನು ಪರೀಕ್ಷೆಗಳು ಆರಂಭವಾಗಲಿದೆ ಅನ್ನುವ ಸಮಯಕ್ಕೆ ಕ್ರೀಡಾಚಟುವಟಿಕೆಗಳು ಆರಂಭಗೊಳ್ಳುತ್ತವೆ.
ಕ್ರೀಡೆಯಲ್ಲಿ ಇರುವ ವಿದ್ಯಾರ್ಥಿಗಳೋ ದಿನದ ಕಡೆಯ ಎರಡು ತರಗತಿಗಳಲ್ಲಿ ಅಭ್ಯಾಸಕ್ಕೆ ತೆರಳಬೇಕಿರುವುದರಿಂದ ಅನಿವಾರ್ಯವಾಗಿ ಕಳಿಸಿಕೊಟ್ಟು ಪಾಠ ಮಾಡುವುದೋ? ಬಿಡುವುದೋ? ಎಂಬ ಗೊಂದಲ ಕೆಲ ಶಿಕ್ಷಕರಿಗೆ, ‘ನೋಟ್ಸ್ ಬರೆದುಕೊಳ್ಳಿ, ಕ್ರೀಡೆಯಲ್ಲಿ ಭಾಗವಹಿಸುವ ಮಕ್ಕಳಿಗೆ ನಂತರ ಈ ನೋಟ್ಸ್ಅನ್ನು ಬರೆದುಕೊಳ್ಳಲು ತಿಳಿಸಿ’ ಎಂದು ತರಗತಿಯನ್ನು ಮುಂದುವರೆಸಲಾಗುತ್ತಿತ್ತು.
ಈ ಸಮಯದಲ್ಲಿ ತರಗತಿಯಲ್ಲಿ ಬಹುತೇಕ ಕಡಿಮೆ ವಿದ್ಯಾರ್ಥಿಗಳಾಗುತ್ತಿದ್ದರು. ಕೆಲವೊಮ್ಮೆ ಮಕ್ಕಳು ಪಾಠವನ್ನು ಮಾಡದೇ ಇತರೆ ಕಥೆ ಹೇಳಿ, ಇಲ್ಲಿಯೇ ಯಾವುದಾದರೂ ಆಟವಾಡಿಸಿ, ಸುಮ್ಮನೆ ಇರಲು ಬಿಡಿ… ಈ ರೀತಿಯ ಬೇಡಿಕೆಗಳು ಬರುತ್ತಲೇ ಇರುತ್ತಿದ್ದವು. ಕಿಟಕಿಯ ಪಕ್ಕದಲ್ಲಿದ್ದಂತ ಮಕ್ಕಳು ಅದರಿಂದ ಆಚೆಗೆ ಇಣುಕಿ ನೋಡಲು ಕಾತುರರಾಗಿರುತ್ತಿದ್ದ ಕಾರಣ, ‘ಮೊದಲು ಕಿಟಕಿ ಹಾಕಿ’ ಅಂದರೆ ಅದೆಷ್ಟೋ ಮಕ್ಕಳು ‘ಛೇ’ ಎಂದುಕೊಳ್ಳುತ್ತಿದ್ದರು. ಮನಸ್ಸಿಲ್ಲದ ಮನಸ್ಸಿನಿಂದ ಕಿಟಕಿಯನ್ನು ಹಾಕುತ್ತಿದ್ದರು. ದೈಹಿಕವಾಗಿ ಇಲ್ಲಿಯೇ ಕುಳಿತಿದ್ದರು, ಮಾನಸಿಕವಾಗಿ ಹೊರಗಡೆ ಆಟೋಟದ ಬಗ್ಗೆ ಯೋಚಿಸುತ್ತಿದ್ದರು. ಇವರುಗಳನ್ನು ಪಠ್ಯದೆಡೆಗೆ ಎಳೆದುಕೊಂಡು ಬರಲು ಶಿಕ್ಷಕರಿಗೆ ಸಾಕುಸಾಕಾಗುತ್ತಿತ್ತು.
ಇತ್ತ ಕ್ರೀಡೆಯಲ್ಲಿ ಭಾಗವಹಿಸುವವರಿಗೆ ಅದೇನು ಆಸಕ್ತಿ? ಅಬ್ಬಬ್ಬಾ! ಎನಿಸುತ್ತಿತ್ತು. ಇದೇ ಆಸಕ್ತಿ ಸ್ವಲ್ಪ ಓದಿನಲ್ಲೂ ಇದ್ದೀದ್ದರೆ ಎಷ್ಟೊಂದು ಚೆನ್ನಾಗಿರೋದು ಎಂದು ಎಲ್ಲಾ ಶಿಕ್ಷಕರಿಗೂ ಅನಿಸುತ್ತಿತ್ತು. ಶಾಲಾ ಸಮಯವು ಮುಗಿದರೂ ಇನ್ನೋ ಹೆಚ್ಚಿನ ಸಮಯ ದೈಹಿಕಶಿಕ್ಷಕರೊಂದಿಗೆ ಅಭ್ಯಾಸದಲ್ಲಿರುತ್ತಿದ್ದರು.
ಕ್ರೀಡಾಚಟುವಟಿಕೆಗಳು ಮೂರುದಿನಗಳ ಕಾಲ ನಡೆಯುತ್ತಿದ್ದ ಕಾರಣ ಮೊದಲ ದಿನಕ್ಕೆ ಕ್ರೀಡೆಯಲ್ಲಿದ್ದ ಎಲ್ಲಾ ವಿದ್ಯಾರ್ಥಿಗಳು ಕ್ರೀಡಾಂಗಣಕ್ಕೆ ತೆರಳಬೇಕಿತ್ತು. ಕೆಲವರು ಮೊದಲದಿನವೇ ಪಂದ್ಯವನ್ನು ಮುಗಿಸಿ ಮರುದಿನ ಶಾಲೆಗೆ ಬರುತ್ತಿದ್ದರು. ಕೆಲವು ವಿದ್ಯಾರ್ಥಿಗಳಂತೂ ಬೆಳಗ್ಗೆ ಉದ್ಘಾಟನೆಯಲ್ಲಿ ಪಾಲ್ಗೊಂಡು ತಮ್ಮ ಕ್ರೀಡೆಗಳು ಮರುದಿನ ಇದ್ದ ಕಾರಣ ಶಾಲೆಗೆ ಬಂದು ತರಗತಿ ಮುಗಿಸಿ ಅಭ್ಯಾಸಕ್ಕೆ ಮುಂದಾಗುತ್ತಿದ್ದರು. ಇನ್ನೂ ಕೆಲವರು ಇಲ್ಲೇ ಅಭ್ಯಾಸ ಮಾಡಿದರಾಯಿತು, ಶಾಲೆಗೆ ಏಕೆ ಹೋಗುವುದು? ಎಂದು ಅಲ್ಲಿಯೇ ಇದ್ದ ಮಕ್ಕಳು ಇದ್ದಾರೆ. ಇತ್ತ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಬಹುತೇಕ ಕಡಿಮೆ ಎನಿಸುವಷ್ಟರ ಮಟ್ಟಿಗೆ ಇರುತ್ತಿತ್ತು. ಶಾಲೆಯಲ್ಲಿದ್ದರು ಕೆಲವು ಶಿಕ್ಷಕರಿಗೆ, ಕ್ರೀಡೆಯಲ್ಲಿ ಅನಿವಾರ್ಯವಾಗಿ ಪಾಲ್ಗೊಳ್ಳದ ಮಕ್ಕಳಿಗೆ ಕುತೂಹಲ. ‘ನಮ್ಮ ಶಾಲೆಗೆ ಯಾವುದಾದರೂ ಬಹುಮಾನ ಬಂತಾ ಸರ್?’ ಎಂದು ಕೇಳುತ್ತಿದ್ದರು, ಕೆಲವೊಮ್ಮೆ ಕಾಡಿಸಿ ಹೇಳಿದ್ದುಂಟು. ಒಂದೆರಡು ಪಂದ್ಯಗಳನ್ನು ಗೆದ್ದಿದ್ದಾರೆ ಎಂದು ತಿಳಿಸಿದರೆ ಮುಂದೆ ಯಾವ ತಂಡದ ವಿರುದ್ಧ ಆಡಬಹುದು? ಎಂದು ಇವರುಗಳೇ ಯೋಚಿಸುತ್ತಿದ್ದರು.
ಸಂಜೆ ಶಾಲೆ ಮುಗಿಸಿಕೊಂಡು ಹೊರಡುವ ವೇಳೆಗೆ ಹಲವು ವಿದ್ಯಾರ್ಥಿಗಳು, ‘ವಾಲಿಬಾಲ್, ಥ್ರೋಬಾಲ್, ಕೊಕ್ಕೋ ಮ್ಯಾಚ್ ಏನಾಯ್ತು?’ ಎಂದು ಕುತೂಹಲದಿಂದ ಕೇಳುತ್ತಿದ್ದರು. ಗೊತ್ತಿದ್ದರೆ ವಿಷಯ ತಿಳಿಸುತ್ತಿದ್ದೆ. ಮನೆಗೆ ಅದೇ ಮಾರ್ಗದಲ್ಲಿ ಹೋಗುವುದರಿಂದ ಕ್ರೀಡಾಂಗಣಕ್ಕೆ ಭೇಟಿ ಕೊಡಲು ಹೋದಾಗ ಅನೇಕ ಮಕ್ಕಳು ಅದಾಗಲೇ ಸುಸ್ತಾಗಿದ್ದರು. ಕೆಲವು ಕಡೆಗಳಲ್ಲಿ ಪಂದ್ಯಗಳು ಮುಗಿದಿದ್ದವು. ಹಲವರಿಗೆ ಅದಾಗಲೇ ಬಹುಮಾನವು ಬಂದಿದ್ದವು. ಬಾಲಕರ ವಿಭಾಗದಲ್ಲಿ ವೈಯಕ್ತಿಕ ಬಹುಮಾನಗಳು ಮಾತ್ರ ಕೆಲವು ಬಂದಿದ್ದವು. ಗುಂಪಿನ ಆಟೋಟಗಳಲ್ಲಿ ಅದಾಗಲೇ ಸೋತಾಗಿತ್ತು. ಬಾಲಕಿಯರ ವಿಭಾಗದಲ್ಲಿ ಬಾಲ್‌ಬ್ಯಾಡ್ಮಿಂಟನ್‌ನಲ್ಲಿ, ರಿಲೇ ಓಟದಲ್ಲಿ, ಥ್ರೋಬಾಲ್ ವಿಭಾಗದಲ್ಲಿ ಪ್ರಶಸ್ತಿಗಳು ಬಂದಿದ್ದವು. ಬಹುಮಾನ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆ ತಿಳಿಸಿ ದೈಹಿಕ ಶಿಕ್ಷಕರೊಂದಿಗೆ ಇತರ ಪಂದ್ಯಗಳ ಬಗ್ಗೆ, ಅಥವಾ ಮಕ್ಕಳ ಪ್ರದರ್ಶನದ ಬಗ್ಗೆ ಮಾತನಾಡುತ್ತಿದ್ದರೆ ಬಹುತೇಕ ವಿದ್ಯಾರ್ಥಿಗಳ ಪೋಷಕರು ಬಂದು ಕರೆದುಕೊಂಡು ಹೋದರು. ಕೆಲವರಿಗೆ ಸಮಯವಿದ್ದುದರಿಂದ ಕ್ರೀಡಾಂಗಣದ ಹೊರಭಾಗದಲ್ಲಿದ ತಿಂಡಿಅAಗಡಿಗಳಲ್ಲಿ ಮುಳುಗಿದ್ದರು. ಚೈತ್ರ ಮತ್ತು ನವ್ಯ ತಾವು ಬಹುಮಾನ ಪಡೆದಿದ್ದಕ್ಕೆ ನಾವೇ ನಿಮಗೆ ಏನಾದರೂ ಕೊಡಿಸುತ್ತೇವೆ ಬನ್ನಿ ಎಂದರು. ಹಾಗೇ ನೋಡಿದರೆ ನಾವೇ ಕೊಡಿಸಬೇಕಿದೆ ಎಂದು ಜೊತೆಗೆ ಸಾಗಿದೆವು. ಹರ್ಷವರ್ಧನ್ ಮಾತ್ರ ತನಗೆ ಏನೇನೂ ಬೇಡ ಎಂದು ಸುಮ್ಮನೆ ನಮ್ಮ ಜೊತೆಗೆ ಬಂದನು. ಅಲ್ಲಿದ್ದ ಗೋಲ್‌ಗಪ್ಪ ಗಾಡಿಗಳಿಗಂತೂ ಮಕ್ಕಳು ಮುಗಿಬಿದ್ದಿದ್ದರು. ಮಂಡಕ್ಕಿ ಅಂಗಡಿಯ ಬಳಿ ನಿಲ್ಲುವಷ್ಟು ಜಾಗವೂ ಇರಲಿಲ್ಲ, ಐಸ್‌ಕ್ರೀಮ್ ಈಗ ತಿನ್ನುವುದು ಸರಿಯಲ್ಲ ಎನಿಸಿತ್ತು. ಮತ್ತೊಂದು ಗೋಲ್‌ಗಪ್ಪ ಗಾಡಿಯ ಬಳಿಯಿದ್ದ ಜನರು ಕಡಿಮೆ ಆದ ಕಾರಣ ನಮ್ಮ ಶಾಲೆಯ ಬರೀ ವಿದ್ಯಾರ್ಥಿನಿಯರೇ ಅದರ ಸುತ್ತ ಸುತ್ತುವರೆದರು. ಹೆಚ್ಚೂಕಡಿಮೆ ಇಡೀಗಾಡಿಯೇ ನಮ್ಮವಶದಲ್ಲಿದೆ ಎಂಬ ಭಾವನೆ ಬಂದಿತ್ತು. ಎಲ್ಲಾ ಮಕ್ಕಳು ಒಂದೇ ರೀತಿಯ ಡ್ರಸ್‌ನಲ್ಲಿದ್ದದ್ದರಿಂದ ಇವರೆಲ್ಲ ಒಂದೇ ‘ಗ್ಯಾಂಗ್’ ನವರು ಎಂದುಕೊAಡು ಅಂಗಡಿಯವನು ಏನೂ ಮಾತನಾಡದೇ ಎಲ್ಲರಿಗೂ ಪ್ಲೇಟ್ ಕೊಟ್ಟನು. ನಮ್ಮ ಸೂರ್ಯವಂಶಿ ಶ್ರೇಯಾ ‘ಬೈಯ್ಯಾ…’ ಎನ್ನತೊಡಗಿದಳು. ‘ಇವನಿಗೆ ಕನ್ನಡದಲ್ಲಿ ಮಾತಾಡಿಸು, ನೀನೇ ಅವನ ಭಾಷೆಯಲ್ಲಿ ಮಾತಾಡಿಸಿದರೆ ಅವನು ಮಾತ್ರ ಯಾವುದೇ ಕಾರಣಕ್ಕೂ ಕನ್ನಡ ಕಲಿಯಲ್ಲ’ ಎಂದಾಕ್ಷಣ ಹೌದೌದು ಎಂದು ತಲೆಯಾಡಿಸಿ ಕನ್ನಡದಲ್ಲಿ ಮಾತನಾಡಿದಳು. ಬೀದಿಬದಿಯ ತಿಂಡಿಗಳನ್ನು ಕಡಿಮೆ ಮಾಡಿ ಎಂದು ಹೇಳುತ್ತಿದ್ದ ನಾನೂ ಇವರ ಜೊತೆಗೆ ಸೇರಿ ತಿನ್ನುವಂತಾಗಿತ್ತು. ದೂರದಲ್ಲಿ ನಮ್ಮನ್ನು ಗಮನಿಸಿದ ಚಂದನ ‘ಸರ್ ನನಗೆ’ ಎಂದಳು ಬಾ ಸೇರಿಕೋ ಎಂದೆನು. ಅರ್ಧದಷ್ಟು ತಿನ್ನುವ ಸಮಯಕ್ಕೆ ಸರಿಯಾಗಿ ಬಿಂದುಶ್ರಿ, ‘ನಾವುಗಳು ಗೆದ್ದಿರೋದಕ್ಕೆ ಸರ್ ನಮಗೆಲ್ಲ ಗೋಲ್‌ಗಪ್ಪ ಪಾರ್ಟಿ ಕೊಡಿಸ್ತಾ ಇದಾರೆ’ ಎಂದಳು. ತಿನ್ನುತ್ತಿದ್ದ ಗೋಲ್‌ಗಪ್ಪ ಬಾಯಿಯಲ್ಲೇ ಸಿಕ್ಕಿಹಾಕಿಕೊಂಡAತಾಯಿತು. ‘ಪುಣ್ಯ ಇಲ್ಲಿ ತಿನ್ನುತ್ತಿದ್ದಾರೆ, ಎಲ್ಲಾದರೂ ದೊಡ್ಡ ಹೋಟೆಲ್‌ಗೆ ನುಗ್ಗಿ ಎಲ್ಲಾ ತಿಂದುಮುಗಿಸಿ ‘ಬಿಲ್ ನಮ್ಮ ಸರ್ ಕೊಡ್ತಾರೆ’ ಎಂದಿದ್ದರೆ ಏನು ಮಾಡಬೇಕಿತ್ತೋ? ಸಧ್ಯ ಹಾಗಾಗಿಲ್ಲವಲ್ಲ ಎಂದುಕೊAಡು ಸುಮ್ಮನೆ ಎಲ್ಲರೊಂದಿಗೆ ತಿನ್ನತೊಡಗಿದೆ. ಅಲ್ಲದೇ ತರಗತಿಯಲ್ಲಿ ಮಾತನ್ನೇ ಆಡದ ಹುಡುಗಿ ಇಷ್ಟೊಂದು ಚುರುಕಾಗಿ ಇಲ್ಲಿ ಮಾತನಾಡುತ್ತಿದ್ದಾಳಲ್ಲ? ಎನಿಸಿತು. ‘ಮುಂದಿನ ಹಂತದಲ್ಲೂ ಬಹುಮಾನ ಗೆದ್ದರೆ ಆಗ ಊಟವನ್ನೇ ಹಾಕಿಸೋಣ’ ಎಂದೆ. ಎಷ್ಟೇ ಒತ್ತಾಯ ಮಾಡಿದರು ಹರ್ಷವರ್ಧನ ತನಗೆ ಇದುಬೇಡ ಎಂದು ದೂರದಲ್ಲಿಯೇ ಉಳಿದನು.
ಅಷ್ಟರಲ್ಲಿ ಕೆಲವು ಮಕ್ಕಳ ಪೋಷಕರು ಅಲ್ಲಿಗೇ ಬಂದರು. ನಮ್ಮಗಳ ಅವಸ್ಥೆ ಕಂಡು ನಕ್ಕರು. ಅವರನ್ನೂ ಕರೆದೆವು. ಆದರೆ ಅವರಾರೂ ಬರಲಿಲ್ಲ. ಹಲವು ಮಕ್ಕಳು ಪೋಷಕರೊಂದಿಗೆ ಹೊರಟರು. ಮತ್ತೇ ಕೆಲವು ಮಕ್ಕಳು ಮಾತ್ರ ಉಳಿದೆವು. ೧೦ನೇ ತರಗತಿಯ ವಿದ್ಯಾರ್ಥಿನಿಯರಂತೂ ಅದುಇದೂ ಅಂತ ಚೆನ್ನಾಗಿ ‘ಬ್ಯಾಟಿಂಗ್’ ಮಾಡುತ್ತಲೇ ಇದ್ದರು. ಚೈತ್ರ ಮಂಡಕ್ಕಿ, ನಿಪ್ಪಟ್ಟು ತಂದಳು ಮತ್ತೆ ತಿನ್ನತೊಡಗಿದೆವು. ನವಚೇತನ್ ನಾನು ಒಂದೇ ಪೊಟ್ಟಣದಲ್ಲಿ ತಿನ್ನತೊಡಗಿದೆವು. ಅಷ್ಟರಲ್ಲಿ ಅವನ ಪೋಷಕರು ಬಂದರು. ಅವನನ್ನು ಕಳಿಸಿಕೊಟ್ಟೆ. ಎಲ್ಲರೂ ಹೊರಟರು. ಹರ್ಷನ ಮನೆ ನಾನು ಹೋಗುವ ಮಾರ್ಗ ಮಧ್ಯೆ ಬರುವುದರಿಂದ ನಾನೇ ಕರೆದುಕೊಂಡು ಹೊರಟೆ. ಅವನನ್ನು ಬಿಟ್ಟು ನಾನು ಮನೆಯ ದಾರಿ ಹಿಡಿದೆ.
ಅಂತೂ ಬಹುಮಾನ ಪಡೆದ ಮಕ್ಕಳು, ಆಟೋಟಗಳಲ್ಲಿ ಭಾಗವಹಿಸಿದ್ದ ಮಕ್ಕಳ ಜೊತೆಗೆ ಕ್ರೀಡಾಂಗಣದಲ್ಲಿ ತಿಂದ ನೆನಪು ಮಾತ್ರ ವಿಶೇಷ. ಶಾಲೆಯಲ್ಲಿ ಮಾತೇ ಬರುವುದಿಲ್ಲ ಎನ್ನುವಂತೆ ಕಾಣುವ ಮಕ್ಕಳು, ಅಲ್ಲಿ ಇತರ ನಮ್ಮ ಶಾಲೆಯ ಮಕ್ಕಳು ಆಡುವಾಗ ಕೂಗುವುದು, ಹುರಿದುಂಬಿಸುವುದನ್ನು ಕಂಡಾಗ, ‘ಇವರಾರೂ ನಾವು ಅಂದಕೊAಡ ಹಾಗಲ್ಲ’ ಎನಿಸಿದ್ದು ಸುಳ್ಳಲ್ಲ. ಸಾಮಾನ್ಯವಾಗಿ ಹೊರಗೆ ಈ ರೀತಿಯಲ್ಲಿ ಬಂದಾಗ ಎಲ್ಲಾ ಸೇರಿ ತಿನ್ನುವ ಸಣ್ಣ ಕಾರ್ಯಕ್ರಮ ಇದ್ದೇ ಇರುತ್ತದೆ. ಅದಕ್ಕೆಂದೇ ಕೆಲವು ಪೋಷಕರು ಸಣ್ಣಪ್ರಮಾಣದ ಹಣವನ್ನು ನೀಡಿರುತ್ತಾರೆ. ಎಂದು ತಿಳಿಯಿತು. ಇನ್ನೂ ಕೆಲವರು ‘ಜಾಗ್ರತೆ ಇರಲಿ’ ಎಂದು ಹೇಳಿಯೇ ಹಣವನ್ನು ಕೊಟ್ಟಿರುತ್ತಾರೆ ಅಂತೂ ಈ ರೀತಿಯ ತಿನ್ನುವ ಕಾರ್ಯಕ್ರಮದಲ್ಲಿ ನಾನೂ ಭಾಗಿಯಾಗಿದ್ದೆ. ಬಹಳ ದಿನಗಳ ನಂತರ ಈ ರೀತಿಯಲ್ಲಿ ತಿಂದದ್ದು, ಅದು ಮಕ್ಕಳ ಜೊತೆಗೆ ಆಗಿದ್ದ ಕಾರಣ ಬೀದಿಬದಿಯ ತಿಂಡಿಯೂ ‘ಚಲೇಗಾ’ ಎಂದದ್ದಾಗಿತ್ತು…

ಚೇತನ್ ರಾಯನಹಳ್ಳಿ

Leave a Reply

Your email address will not be published. Required fields are marked *

Scan the code