ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕ್ಕೆ, ಎಸ್ ಕೆ ಮಹೇಶ್ ಅಧ್ಯಕ್ಷರಾಗಿ ಆಯ್ಕೆ.
(VIJAYANAGARA): ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣ ಗ್ರಾಮದ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ, ಸಂಘದ ನಿರ್ದೇಶಕರಾಗಿದ್ದ ಎಸ್ ಕೆ ಮಹೇಶ್ ,ಆರ್ ಬಿ ಗಣೇಶ್ ರವರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧರಾಗೆ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ಅಧ್ಯಕ್ಷರಾದ ಎಸ್, ಕೆ, ಮಹೇಶ್ , ಉಪಾಧ್ಯಕ್ಷರಾದ ಆರ್ ಬಿ ಗಣೇಶ್ ಅವರಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಅಧಿಕಾರಿಗಳು ಮಲ್ಲಿಕಾರ್ಜುನ್, ಸಂಘದ ನಿರ್ದೇಶಕರಾದ ಗೆದ್ದಲಗಟ್ಟಿ ತಿಮ್ಮಣ್ಣ, ಕೋಲ್ಕಾರ್ ಹುಲಗಪ್ಪ, ಮುಂಡರಗಿ ಮಂಜುನಾಥ, ಎಸ್ ಮಲ್ಲಿಕಾರ್ಜುನ, ಹುಲಿಗೆಮ್ಮ, ಹನುಮಕ್ಕ ಬಾರಿಕರ್, ಯಮನೂರಪ್ಪ, ಹೆಮ್ಲ ನಾಯ್ಕ, ರುಪ್ಲ ನಾಯ್ಕ, ಅಂಜನಿ . ಸರ್ವ ನಿರ್ದೇಶಕರು ಅಭಿನಂದನೆ ತಿಳಿಸಿದ್ದಾರೆ, ಗ್ರಾಮದ ಹಿರಿಯರು ನಾಗರಿಕರು ಸಹ ಅಧ್ಯಕ್ಷರಿಗೆ ಉಪಾಧ್ಯಕ್ಷರಿಗೆ ಶುಭ ಹಾರೈಸಿದ್ದಾರೆ.
ಇದೊಂದು ಸುಡುಗಾಡು ಸಿದ್ದರ ಜನಾಂಗದ ಹೆಮ್ಮೆಯ ಸಂಗತಿಯಾಗಿದೆ, ತಾಲೂಕು ಸುಡುಗಾಡು ಸಿದ್ದರು ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಹಾಗೂ ಸದಸ್ಯರುಗಳು ಹಗರಿಬೊಮ್ಮನಹಳ್ಳಿ, ಆನೇಕಲ್, ಹೊಸಕೇರಿ, ಓಬಳಾಪುರ ಗ್ರಾಮದವರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾದ ಎಸ್ ಕೆ ಮಹೇಶ್ ಅವರನ್ನು ಅಭಿನಂದಿಸಿ, ಹರ್ಷೋತ್ತಾರವನ್ನು ವ್ಯಕ್ತಪಡಿಸಿದ್ದಾರೆ
ವರದಿ ಸುನೀಲ್ ಕುಮಾರ್ ಎಂ NSD