ನ್ಯೂಸ್ಶಿವಮೊಗ್ಗ

ಸಣ್ಣ ಪುಟ್ಟ ವ್ಯಾಪಾರಿಗಳೆ ಎಚ್ಚರ‌‌..
ಸಾಲಕ್ಕೆ ಮಾಲ್ ಕೊಟ್ರೆ ಬಿಡ್ತಾರೆ ಕೈ……..

ಸಣ್ಣ ಪುಟ್ಟ ವ್ಯಾಪಾರಿಗಳೆ ಎಚ್ಚರ‌‌..ಸಾಲಕ್ಕೆ ಮಾಲ್ ಕೊಟ್ರೆ ಬಿಡ್ತಾರೆ ಕೈ……..

(SHIVAMOGA): ಸುಮಾರು 60ಕ್ಕೂಹೆಚ್ಚು ಸಣ್ಣ ಅಡಕೆ ವ್ಯಾಪಾರಿಗಳಿಗೆ ಅಂದಾಜು 4 ಕೋಟಿ ರೂಪಾಯಿ ವಂಚಿಸಿದ್ದ ನಗರದ ವ್ಯಪಾರಿಯನ್ನು ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.


2020ರ ಸುಮಾರಿಗೆ ಬೆಂಗಳೂರಿನಿಂದ ಸಾಗರಕ್ಕೆ ಬಂದು ಅಡಕೆ ವ್ಯಾಪಾರ ಪ್ರಾರಂಭಿಸಿದ್ದ. ಇಲ್ಲಿನ ಸಣ್ಣಪುಟ್ಟ ವ್ಯಾಪಾರಿಗಳಿಂದ ಉದ್ರಿ ಲೆಕ್ಕದಲ್ಲಿ ಮಾಲು ಖರೀದಿಸಿ, ಬೇರೆಯವರಿಗೆ ಮಾರಿ ಲಾಭ ಪಡೆಯುತ್ತಿದ್ದ. ಅಲ್ಲದೆ ಆನ್ ಲೈನ್ ಗ್ಯಂಬ್ಲಿಂಗ್ ಆಡುವ ಅಭ್ಯಾಸವಿದ್ದ ಈತ ಅಡಕೆ ವ್ಯಾಪಾರ ದಲ್ಲಿ  ಬಂದ ಸಂಪೂರ್ಣ ಹಣವನ್ನೂ ವೈಯಕ್ತಿಕ ಶೋಕಿಗೆ ಖರ್ಚು ಮಾಡುತ್ತಿದ್ದ. ಕಳೆದ 7-8 ತಿಂಗಳಿಂದ ಇದೆ ಪ್ರವೃತ್ತಿಯಲ್ಲಿ ನಿರಂತರವಾಗಿ ತೊಡಗಿ ಕೊಂಡಿದ್ದರಿಂದ ಸಾಲದ ಮೊತ್ತ ವೂ ಕೋಟಿಯ ಲೆಕ್ಕದಲ್ಲಿ ಬೆಳೆದಿತ್ತು. ಅಡಕೆ ಪಡೆದವರಿಗೆ ಹಣ ಹಿಂದಿರುಗಿಸಲು ಸಾಧ್ಯ ವಾಗದ ಪರಿಸ್ಥಿತಿಗೆ ಬಂದಿದ್ದು ಅಡಿಕೆ ಕೊಟ್ಟವರು ಮನೆಗೆ ಬರುತ್ತಿದ್ದಂತೆ ಈತ ಕೆಲ ದಿನ ತಲೆ ಮರೆಸಿಕೊಂಡು ಬೆಂಗಳೂರು, ಬಿಹಾರ ಓಡಾಡಿ ಸಾಗರಕ್ಕೆ ವಾಪಸಾಗಿದ್ದ. ಇದನ್ನೇ ಕಾದಿದ್ದ ಹಲವು ಅಡಕೆ ವ್ಯಾಪಾರ ಸ್ತರು ಪೊಲೀಸರಿಗೆ ದೂರು ನೀಡಿ, ಈತನ ಬಂಧನಕ್ಕೆ ವ್ಯವಸ್ಥೆ ಮಾಡಿದ್ದು.
ವಿಚಾರಣೆ ವೇಳೆ ತಾನು ಸಣ್ಣಪುಟ್ಟ ವ್ಯಾಪಾರಿಗಳಿಂದ ಖರೀದಿಸಿದ ಮಾಲನ್ನು ಕಡಿಮೆ ಮೊತ್ತಕ್ಕೆ ಮಾರಿ ದ್ದಲ್ಲದೆ, ಆನ್ ಲೈನ್ ಶೈಲಿಯನ್ನು ಮಾಡಿದ್ದರಿಂದ ಸಾಲದ ಪ್ರಮಾಣ 4 ಕೋಟಿಗೂ ಮೀರಿ ಹೋಗಿದೆ. ಇಲ್ಲಿನ ವ್ಯಾಪಾರಿಗಳಿಗೂ ದುಡ್ಡು ಕೊಡಲಾಗದ ಸ್ಥಿತಿಯಲ್ಲಿದ್ದೇವೆ ಎಂದು ಒಪ್ಪಿಕೊಂಡಿದ್ದಾನೆ.
ಹೀಗಾಗಿ ಈತನಿಗೆ ಮಾಲು ಕೊಟ್ಟಿರುವ 60ಕ್ಕೂಹೆಚ್ಚು ವ್ಯಾಪಾರಿಗಳು ಸದ್ಯ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದಾರೆ.

ಮೂಲತಃ ನೆಹರು ನಗರದ ಮದೀನಾ ಮಸೀದಿ ಪಕ್ಕದ ನಿವಾಸಿಯಾಗಿದ್ದ ಅಜೀಮ್ (34 ವರ್ಷ), ಬೆಂಗಳೂರಿನಲ್ಲಿ ಖಾಸಗಿ ಚಿಟ್ ಫಂಡ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಕೋರೋನ ಕಾಲದಲ್ಲಿ ಸಾಗರಕ್ಕೆ ಬಂದು ಸಣ್ಣದಾಗಿ ಅಡಕೆ ವ್ಯವಹಾರ ಪ್ರಾರಂಭಿಸಿ ಲಾಭ ಪಡೆಯುತ್ತಿದ್ದ. ಜತೆಯಲ್ಲಿ ಆನ್ ಲೈನ್ ಜೂಜಾಟವನ್ನು ಮಾಡುವ ಅಭ್ಯಾಸವಿತ್ತು ಎಂದು ತನಿಖೆ ವೇಳೆ ತಿಳಿದು ಬಂದಿದೆ.

ವರದಿ : ರಾಘವೇಂದ್ರ ತಾಳಗುಪ್ಪ

 

Leave a Reply

Your email address will not be published. Required fields are marked *

Scan the code