ಬೃಹತ್ ಗಾತ್ರದ ಕೊಳಕಮಂಡಲ ಹಾವು ಪ್ರತ್ಯಕ್ಷ ಸಂರಕ್ಷಣೆ ಮಾಡಿದ ಸ್ನೇಕ್ ಮದೀನ್
(KOLARA): ಬಂಗಾರಪೇಟೆ: ಪಟ್ಟಣದ ಕುಪ್ಪಸ್ವಾಮಿ ಲೇವಟ್ನ ಮನೆಯ ಬಳಿ ಬೃಹತ್ ಗಾತ್ರದ ಕೊಳಕಮಂಡಲ ಹಾವು ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ. ಕೊಳಕಮಂಡಲ ಕಪ್ಪೆಯನ್ನು ನುಂಗಿ ಬೇರೆ ಕಡೆ ಹೋಗಲಾರದೆ ಅಲ್ಲೇ ಉಳಿದುಕೊಂಡಿದೆ ಈ ವೇಳೆ ಮನೆಯವರು ನೋಡಿ ಭಯಭೀತರಾಗಿದ್ದಾರೆ.
ತಕ್ಷಣ ಸ್ನೇಕ್ ಮದೀನ್ ರವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಸ್ನೇಕ್ ಮದೀನ್ ಬಂದು ಕೊಳಕ ಮಂಡಲ ಹಾವನ್ನು ಸಂರಕ್ಷಣೆ ಮಾಡಿ ಪಟ್ಟಣದ ವರವಲಯದ ಕಾಡಿನಲ್ಲಿ ಬಿಟ್ಟು ಮಾತನಾಡುತ್ತಾ, ಹಾವುಗಳನ್ನು ಯಾರು ಸಾಯಿಸಬಾರದು ಹಾವುಗಳು ಹೆಚ್ಚು ಬಿಸಿಲಿದ್ದಾಗ ನೆರಳನ್ನು ಹುಡುಕಿಕೊಂಡು ಬರುವುದು ಸಹಜ, ಹಾವುಗಳನ್ನು ಕಂಡಾಗ ನಮಗೆ ಕರೆ ಮಾಡಿ ತಕ್ಷಣ ಸ್ಥಳಕ್ಕೆ ಬಂದು ಸಂರಕ್ಷಣೆ ಮಾಡುತ್ತೇವೆ ಎಂದು ತಿಳಿಸಿದರು.
ವರದಿ: ವಿಷ್ಣು ಕೋಲಾರ