ಸಾಂಸ್ಕೃತಿಕ ಮನಸ್ಸುಗಳಿಂದ ಸಾಮಾಜಿಕ ಸುಧಾರಣೆ ಸಾಧ್ಯ … ಯಡೇಹಳ್ಳಿ ಗ್ರಾ.ಪಂ.ಅಧ್ಯಕ್ಷೆ ವೀಣಾರಾಜೇಶ್
(SHIVAMOGA): ಆನಂದಪುರ- ಸಾಂಸ್ಕೃತಿಕ ಸಮಸ್ಯೆಗಳಿಂದ ಸಾಮಾಜಿಕ ಸುಧಾರಣೆ ಸಾಧ್ಯ ಎಂದು ಯಡೇಹಳ್ಳಿ ಗ್ರಾ.ಪಂ ಅಧ್ಯಕ್ಷೆ ವೀಣಾ ರಾಜೇಶ್ ಹೇಳಿದರು ಅವರು ಇಲ್ಲಿನ ಮಲಂದೂರು ಸಮೀಪದ ಚಂಪಕ ಸರಸು ಮಹಂತಿನ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಹಾಗೂ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದಸರಾ ಸಾಮಾನ್ಯರ ಉತ್ಸವ ವಾಗಬೇಕು ನಿರಂತರ ಸಾಹಿತ್ಯ ಸಾಂಸ್ಕೃತಿಕ ಪರಿಸರ ವನ್ನು ಬೆಳೆಸಿಕೊಳ್ಳಬೇಕು ಐತಿಹಾಸಿಕ ಸ್ಥಳಗಳು ಸಾಂಸ್ಕೃತಿಕ ಕೇಂದ್ರಗಳಾಗಿ ಬೇಕು ಎಂದರು.
ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ ಮಾತನಾಡಿ ಆಡಳಿತಗಳು ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶೇಷ ಗಮನ ಹರಿಸಬೇಕಾಗಿದೆ.ರಾಜ ಪರಂಪರೆ ಉಳಿದಿರುವುದೆ ಸಾಹಿತ್ಯದಿಂದ ಹಾಗಾಗಿ ಸ್ಥಳೀಯ ಆಡಳಿತಗಳು ಮುಂದಾಗಬೇಕು ಕವಿಗಳು ತಮ್ಮ ಕಾವ್ಯಗಳಲ್ಲಿ ಸಾಮಾಜಿಕ ಮಹತ್ವವನ್ನು ಸಾರುವ ಅಂಶಗಳನ್ನು ಪ್ರತಿಬಿಂಬಿಸುವ ಕೆಲಸ ಆಗಬೇಕಾಗಿದೆ ಈ ನಿಟ್ಟಿನಲ್ಲಿ ಸಂಘಟನೆಗಳ ಜವಾಬ್ದಾರಿ ಸಾಕಷ್ಟಿದೆ ಎಂದರು.
ಆನಂದಪುರ ಕಸಾಪ ಅಧ್ಯಕ್ಷ ಬಿ.ಡಿ.ರವಿಕುಮಾರ್ ಮಾತನಾಡಿ ಚಂಪಕ ಸರಸ್ಸುಗೆ ಐತಿಹಾಸಿಕ ಹಿನ್ನೆಲೆ ಇದೆ.ಕೆಳದಿ ಅರಸರು ಚಂಪಕಳ ಹೆಸರಿನಲ್ಲಿ ನಿರ್ಮಿಸಿದ ಈ ಸ್ಥಳ ಇಂದು ಸಾಕಷ್ಟು ಪ್ರಸಿದ್ಧಿ ಪಡೆದಿದೆ ಎಂದರೆ ಅದರ ಹಿಂದಿನ ಪರಿಶ್ರಮ ಎಂದರು.
ಹೆಚ್.ಕೆ.ನಾಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ವೇದಿಕೆಯಲ್ಲಿ ಡಾ.ಕೆಳದಿ ವೆಂಕಟೇಶ್ ಜೋಯಿಸ್, ಆಚಾಪುರ ಗ್ರಾಪಂ ಅಧ್ಯಕ್ಷ ಜಿಯಾವುಲ್ಲಾ, ಸಾಮಾಜಿಕ ಕಾರ್ಯಕರ್ತ ಡಿ.ಎನ್.ರವಿಕುಮಾರ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಶಾಂತಾನಾಯ್ಕ್, ಮೂರ್ತಿ ಸಿ, ಶಿವಮೊಗ್ಗ, ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಗಣಪತಿ ಯಡೇಹಳ್ಳಿ, ಇತಿಹಾಸ ಪರಂಪರೆ ಉಳಿಸಿ ಅಭಿಯಾನ ಟ್ರಸ್ಟ್ ಅಧ್ಯಕ್ಷ ಮಹಮದ್ ಜಿಯಾವುಲ್ಲಾ, ಅಕ್ಷಯ್,ಯುವ ಕವಿತ್ರಿ ಇಂಪನ ಆರ್, ಪ್ರತೀಕ್ಷ ಜೋಯಿಸ್ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಡೆದ ಕವಿಗೋಷ್ಠಿಯಲ್ಲಿ ಸಹನಾ ಹೊಸನಗರ, ರಮೇಶ್ ಶಂಕರ್ ಘಟ್ಟ, ರೇವಣ್ಣಪ್ಪ ಭದ್ರಾವತಿ, ಹರ್ಷಿತಾ,ಸಮನ್ವಿ ಸಾಗರ, ಶ್ರೀವಿದ್ಯಾ ಶೆಡ್ತಿಕೆರೆ, ಸೌಜನ್ಯ, ಚೂಡಾಮಣಿ ಹಾಸನ, ಸೀಮಾ ಸೆರಾವ್, ಡಾ.ವ.ಮ.ಗಂಗಾಧರ್ ಮೊದಲಾದವರು ಕವನ ವಾಚಿಸಿದರು, ದಿವ್ಯ ಚೇತನ ಭರತ ನಾಟ್ಯ ಪ್ರದರ್ಶಿಸಿದರು, ಜಾನಪದ ಪರಿಷತ್ತು ಕಲಾಬಳಗದವರು ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು,
ಈ ಸಂದರ್ಭದಲ್ಲಿ ಕ್ಲೇಮಂಟ್ ರೆಬೆಲ್ಲೋ ಹಾಗೂ ಎಸ್.ಎಚ್.ಮುನೀರ್ ಯಡೇಹಳ್ಳಿ ಇವರಿಗೆ ಚಂಪಕ ದಸರಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆರಂಭದಲ್ಲಿ ರಚನಾ ಪ್ರಾರ್ಥಿಸಿ ಅಮಿತ್ ಆರ್ ಸ್ವಾಗತಿಸಿ ಜ್ಯೋತಿ ವಂದಿಸಿದರು.
ವರದಿ: ರಾಘವೇಂದ್ರ ತಾಳಗುಪ್ಪ