ಬಯಲುಸೀಮೆ ರೀತಿಯಾದ ಮಲೆನಾಡ ಕೆಲ ಭಾಗಗಳು: ನೀರಿಗಾಗಿ ಪರದಾಟ
(CHIKKAMAGALURU): ಚಿಕ್ಕಮಗಳೂರು ಜಿಲ್ಲೆಯ ಕೆಲ ಭಾಗಗಳಲ್ಲಿ ನೀರಿಗಾಗಿ ಜನರು ಪರದಾಟ ಪಡುವಂತಾಗಿದೆ. ಬಯಲುಸೀಮೆಯ ರೀತಿಯಲ್ಲಿ ಮಲೆನಾಡ ಕೆಲ ಭಾಗಗಳು ನೀರಿಗಾಗಿ ಪರದಾಟ ಪಡುವಂತಾಗಿದೆ. ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಕೊಡವನ್ನು ಹಿಡಿದು ನೀರಿನ ತೊಟ್ಟಿಯ ಬಳಿ ಕಾದು ಕುಳಿತಿರುವ ಜನರು.
ಕಳೆದ 125 ವರ್ಷಗಳಲ್ಲೇ ಅತಿ ಕಡಿಮೆ ಮಳೆ ರಾಜ್ಯದಲ್ಲಿ ದಾಖಲಾಗಿದೆ. 2023ರ ವರ್ಷ ರಾಜ್ಯದಲ್ಲಿ ಸರಿಯಾದ ಮಳೆಯಾಗದ ಕಾರಣ ಸುಮಾರು 236 ತಾಲ್ಲೂಕುಗಳ ಪೈಕಿ 195 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಕಂಡುಬಂದಿದೆ, 161ತಾಲೂಕುಗಳನ್ನು ತೀವ್ರ ಬರ ಪೀಡಿತ ಪ್ರದೇಶ ಎಂದು 34 ತಾಲೂಕುಗಳನ್ನು ಸಾಧಾರಣ ಬರ ಪೀಡಿತ ಪ್ರದೇಶ ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಅದರೆ ಬೇಸಿಗೆ ಕಾಲ ಪ್ರವೇಶಿಸಲು ಸಮಯವಿದ್ದು ಜನವರಿ ತಿಂಗಳು ಹಾಗೂ ಫೆಪ್ರವರಿ ತಿಂಗಳಲ್ಲಿ ಬೇಸಿಗೆಯಂತೆ ಸುಡುತಿದ್ದೆ. ಹಳ್ಳಿ, ಗ್ರಾಮಗಳಲಿ ನೀರಿಗಾಗಿ ಪರದಾಟ ನಡೆಸುತ್ತಿರುವುದು ಕಂಡ ಗ್ರಾಮ ಪಂಚಾಯಿತಿ ಟ್ಯಾಂಕರ್ ಮೂಲಕ ನಗರದ ವಾರ್ಡ್ ಗಳಿಗೆ ನೀರನು ಸರಬುರಜು ಮಾಡುತ್ತಿದ್ದರೆ. ಮಳೆ ಕಾಲದಲ್ಲಿ ಉತ್ತಮ ಮಳೆಯಾದರೆ ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಶೃಷ್ಟಿ ಆಗುತಿರಲಿಲ್ಲ.
ಬೋರವೆಲ್ ನಲ್ಲಿ ನೀರಿನ ಮಟ್ಟ ಕುಸಿದಿದ್ದು ಗ್ರಾಮಗಳಿಗೆ ಸಾಕಷ್ಟು ನೀರು ಪೂರೈಸಲು ಆಗದ ಕಾರಣಕ್ಕೆ ವಾಟರ್ ಮನ್ ವಾಟರ್ ಟ್ಯಾಂಕ್ ಬಳಿ ಹೋಗುವಂತಾಗಿದೆ. ಮಲೆನಾಡು ಭಾಗದಲ್ಲಿ ಈ ಪರಿಸ್ಥಿತಿ ಇದ್ದರೆ ಉತ್ತರ ಕರ್ನಾಟಕ ಭಾಗಗಳಲ್ಲಿ ಪರಿಸ್ಥಿತಿ ಯಾವ ಮಟ್ಟಿಗೆ ತಲುಪುವುದೋ ಫೆಪ್ರವರಿ ತಿಂಗಳಿಗೆ ಈ ರೀತಿಯಾದರೆ ಮುಂದಿನ ಬೇಸಿಗೆ ಕಾಲದಲ್ಲಿ ಯಾವರೀತಿ ಇರುವುದೂ ಎಂದು ಸಾರ್ವಜನಿಕರಿಗೆ ಆತಂಕ ಸೃಷ್ಟಿಸಿದೆ.