ಜಿಲ್ಲೆನ್ಯೂಸ್

ಸೊರಬ ತಾಲ್ಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ 8ನೇ ವರ್ಷದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ

ಸೊರಬ ತಾಲ್ಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ 8ನೇ ವರ್ಷದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮ

(SHIVAMOGGA): ತಾಯಂದಿರು ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸುವಲ್ಲಿ ಸಫಲರಾದರೆ ಸದೃಢ ಕುಟುಂಬ ನಿರ್ಮಿಸಲು ಸಾಧ್ಯ-ನಿಶ್ಚಲಾನಂದನಾಥ ಸ್ವಾಮೀಜಿ

ಸೊರಬ: ಜನಸಮುದಾಯದ ಉತ್ತಮ ಜೀವನ ಶೈಲಿ ಪ್ರಗತಿಯತ್ತ ಮುನ್ನಡೆಸಬಲ್ಲದು. ಸಮುದಾಯದ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಜೀವನದ ಒಟ್ಟೊಟ್ಟಿಗೆ ಸಮಾಜದ ಸೇವೆ ಮಾಡಿದಾಗ ಮಾತ್ರ ಸಮುದಾಯ ಸಂಘಟನೆ ಸಾಧ್ಯ ಎಂದು ಮಿರ್ಜಾನ ಆದಿಚುಂಚನಗಿರಿ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.

ಪಟ್ಟಣದ ನಾಮದೇವ ಕಲ್ಯಾಣ ಮಂಟಪದಲ್ಲಿ ಸೊರಬ ತಾಲ್ಲೂಕು ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ 8ನೇ ವರ್ಷದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಕುಟುಂಬದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಪ್ರಮುಖವಾದದ್ದು. ಮಕ್ಕಳ ವ್ಯಕ್ತಿತ್ವ ರೂಪಿಸುವಲ್ಲಿ ಕುಟುಂಬದ ಪಾತ್ರ ಪ್ರಧಾನವಾದುದು. ತಾಯಂದಿರು ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸುವಲ್ಲಿ ಸಫಲರಾದರೆ ಸದೃಢ ಕುಟುಂಬ ನಿರ್ಮಿಸಲು ಸಾಧ್ಯ. ಮಹಿಳೆಯರು ಸ್ವಸಹಾಯ ಸಂಘಗಳನ್ನು ಸ್ಥಾಪಿಸಿಕೊಂಡು ಸ್ವಾವಲಂಬಿಗಳಾಗಬೇಕು. ಈ ನಿಟ್ಟಿನಲ್ಲಿ ಆದಿಚುಂಚನಗಿರಿ ಶ್ರೀಮಠ ಸಕಲರ ಶ್ರೇಯೋಭಿವೃದ್ಧಿಗೆ ಸದಾ ಶ್ರಮಿಸುತ್ತಿದೆ ಎಂದರು.

ಸಮುದಾಯ ಸಂಘಟನೆಯಲ್ಲಿ ಸಮಾಜ ಬಾಂಧವರ ಪಾಲ್ಗೊಳ್ಳುವಿಕೆ ಕುರಿತು ನಿವೃತ್ತ ಮುಖ್ಯೋಪಾಧ್ಯಾಯ ಎಂ.ಟಿ ಗೌಡ ಕುಮಟಾ ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಅಧ್ಯಕ್ಷ ಉಮಾಕಾಂತ್ ಗೌಡ ನೆಲ್ಲೂರು ಮಾತನಾಡಿ ಸಮಾಜ ಬಾಂಧವರು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಅಧ್ಯಕ್ಷ ಸ್ಥಾನ ಒಂದು ಅಧಿಕಾರ ಎನ್ನುವುದಕ್ಕಿಂತ ಅದು ಒಂದು ಜವಾಬ್ದಾರಿ ಅದನ್ನು ಸಮರ್ಥವಾಗಿ ನಿಭಾಯಿಸುತ್ತಿರುವ ಸಂತೃಪ್ತಿ ಇದೆ ಎಂದರು.

ಡಾ. ಉಮೇಶ್ ಭದ್ರಾಪುರ, ಮಂಜಪ್ಪ ಬನದಕೊಪ್ಪ, ಭಾರತಿ ರಾಮಕೃಷ್ಣ, ಕಾರ್ಯದರ್ಶಿ ಡಾ. ನೇತ್ರಾವತಿ ರಾಧಾ ಉಮೇಶ್, ಅರುಣ್ ಗೌಡ ಮಳಲಿ ಸುಬ್ರಾಯ ಗೌಡ, ನಾಗೇಶ್ ಕಮರೂರು, ಭೈರಪ್ಪ ನಿಸರಾಣಿ, ಕೃಷ್ಣಪ್ಪ ಕಾರೆಹೊಂಡ, ಅಶೋಕ್ ಕುಮಾರ ಹಿರೇಚೌಟಿ, ರಂಗನಾಥ ಹೊಸಕೊಪ್ಪ, ಕಾಳಪ್ಪ ವಕ್ಕಲಕೊಪ್ಪ, ರಾಮಕೃಷ್ಣ ಹೊಸಕೊಪ್ಪ, ಅಮ್ಮು ಗೌಡ, ಶ್ರೀದರ ಗೌಡ, ಶಶಿಕುಮಾರ್ ನೆಲ್ಲೂರು, ರವಿಚಂದ್ರ ಕಡೆಜೋಳದಗುಡ್ಡೆ, ಪ್ರಭಾಕರ ಹಿರೇಚೌಟಿ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಯಲ್ಲಿ ಅತಿಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಸಮುದಾಯದ ಪ್ರಗತಿಪರ ರೈತರು ಮತ್ತು ಹೊಸದಾಗಿ ಸರ್ಕಾರಿ ಸೇವೆಗೆ ಸೇರಿದ ನೌಕರರನ್ನು ಸನ್ಮಾನಿಸಲಾಯಿತು.

ವರದಿ- ಸಂದೀಪ ಯು.ಎಲ್ , ಸೊರಬ

Leave a Reply

Your email address will not be published. Required fields are marked *

Scan the code