ವಿದ್ಯಾರ್ಥಿಗಳಿಗೆ ಪ್ರಾಧ್ಯಾಪಕರಿಂದ ವಿಶೇಷ ತರಗತಿ.
(SHIVAMOGA): ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗಳ ಹಿಂದೆ ಬೀಳುವ ವಿದ್ಯಾರ್ಥಿಗಳು ಸೋಮಾರಿಗಳಾಗುತ್ತಿದ್ದು ಇದನ್ನು ತಪ್ಪಿಸುವ ಉದ್ದೇಶದಿಂದ ಸಾಗರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜು ಅಧ್ಯಾಪಕರು ವಿನೂತನ ಪ್ರಯೋಗಗಳಿಗೆ ಮುಂದಾಗಿದ್ದರು. ಮೊಬೈಲ್ ಹಿಡಿದರೆ ಜಗತ್ತೇ ಮರೆಯುವ ವಿದ್ಯಾರ್ಥಿಗಳ ನಿರ್ಲಕ್ಷ್ಯತನ ಹೋಗಲಾಡಿಸಲು, ಶಿಕ್ಷಣದ ಜತೆಯಲ್ಲಿ ಇತರ ಚಟುವಟಿಕೆಗಳಲ್ಲಿ ಆಸಕ್ತಿ ಮೂಡಿಸುವ ಭಾಗವಾಗಿ ಶನಿವಾರ ಕಾಲೇಜಿನಲ್ಲಿ ಸ್ವಚ್ಛತಾ ಅಭಿಯಾನದ ಜತೆ ಪರಿಸರ ಸಂರಕ್ಷಣೆಯ ಪಾಠ ಮಾಡಲಾಯಿತು.
ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ವಿದ್ಯಾರ್ಥಿಗಳ ಬಿಡುವಿನ ಅವಧಿಯಲ್ಲಿ ಆವರಣ ಸ್ವಚ್ಛ ಮಾಡುವುದು, ಸುತ್ತಮುತ್ತಲಿನ ಪರಿಸರ ಸಂರಕ್ಷಿಸುವುದು, ಗಿಡ ನೆಡುವುದು, ಮೊದಲಾದ ಕಾರ್ಯಗಳನ್ನು ಮಾಡಿಸಲಾಯಿತು. ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಸುರೇಶ್ ಜಂಬಾನಿ, ಮಮತಾ ಹೆಗಡೆ ಮತ್ತು ದೈಹಿಕ ಶಿಕ್ಷಕ ಕೊಟ್ರೇಶ್ರ ನೇತೃತ್ವದಲ್ಲಿ ಕಾಲೇಜಿನ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರು ಓಡಾಡಲು ಹಾಗೂ ವಾಹನಗಳು ಹತ್ತಲು ಸ್ವಲ್ಪ ಅಡಚಣೆಯಾಗಿದ್ದು, ಅದನ್ನು ಸರಿಪಡಿಸಲಾಯಿತು. ಇದೆ ಸಮಯದಲ್ಲಿ ಸಾಗರದ ಸರಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು ಸ್ವಚ್ಛತಾ ಕರ್ಯ ನಡೆಸಿದರು.
ವರದಿ ರಾಘವೇಂದ್ರ ತಾಳಗುಪ್ಪ