ಚಿಕ್ಕಮಗಳೂರುನ್ಯೂಸ್

ಕಾಫಿ ನಾಡಲ್ಲಿ ಕಾಡಾನೆ ದಾಳಿಗೆ ಸಿಬ್ಬಂದಿ ಬಲಿ.

ಕಾಫಿ ನಾಡಲ್ಲಿ ಕಾಡಾನೆ ದಾಳಿಗೆ ಸಿಬ್ಬಂದಿ ಬಲಿ.

(CHIKKAMAGALURU): ಕಾಡಾನೆಯನ್ನು ಕಾಡಿಗಟ್ಟುವಲ್ಲಿ ನಿರತರಾಗಿದ್ದಾಗಲೇ ಸಿಬ್ಬಂದಿ ಮೇಲೆ ಕಾಡಾನೆ ಎರಗಿದ್ದು ಕಾಡಾನೆ ದಾಳಿಯಿಂದ ಕಾಡಾನೆ ನಿಗ್ರಹ ಕಾರ್ಯ ಪಡೆ ಸಿಬ್ಬಂದಿ ಬಲಿಯಾಗಿದ್ದಾರೆ.

ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಊರುಬಗೆ ಸಮೀಪ ಕಾಡಾನೆಯನ್ನು ಕಾಡಿಗೆ ಓಡಿಸುವ ಸಂದರ್ಭದಲ್ಲಿ ಸಿಬ್ಬಂದಿ ಮೇಲೆ ಕಾಡಾನೆ ದಾಳಿ ನಡೆಸಿದ್ದು ಸಿಬ್ಬಂದಿ ಕಾರ್ತಿಕ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಾರ್ತಿಕ್ ಗೌಡ ಮೂಡಿಗೆರೆ ತಾಲೂಕಿನ ಗೌಡಹಳ್ಳಿ ಗ್ರಾಮದವರಾಗಿದ್ದು ಕಳೆದ ಒಂದು ವರ್ಷದಿಂದ ಆನೆ ಕಾರ್ಯಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇಂದು ಕಾಡಾನೆಯನ್ನು ಕಾಡಿಗೆ ಅಟ್ಟುವ ಸಂದರ್ಭದಲ್ಲಿ ದಾಳಿಗೆ ಒಳಪಟ್ಟು ಮೃತಪಟ್ಟರು ಇನ್ನು ಇಬ್ಬರು ಸಿಬ್ಬಂದಿಗಳ ಮೇಲೆ ಕಾಡಾನೆ ಎರಗಿದ್ದು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಬಿರಿಯಾನಿ ಸೇವಿಸಿ ಆಸ್ಪತ್ರೆ ಸೇರಿಕೊಂಡ 17 ಮಂದಿ

Leave a Reply

Your email address will not be published. Required fields are marked *

Scan the code