ತುಮಕೂರುನ್ಯೂಸ್

ಹಂದನಕೆರೆ ಯಲ್ಲಿ ಕೊಬ್ಬರಿ ನೋಂದಣಿ ಕೇಂದ್ರ ಆರಂಭಿಸಿ: ಕೆ ಆರ್ ಎಸ್ ಪಕ್ಷದ ಶ್ರೀನಿವಾಸ್.

ಹಂದನಕೆರೆ ಯಲ್ಲಿ ಕೊಬ್ಬರಿ ನೋಂದಣಿ ಕೇಂದ್ರ ಆರಂಭಿಸಿ: ಕೆ ಆರ್ ಎಸ್ ಪಕ್ಷದ ಶ್ರೀನಿವಾಸ್.

(TUMAKURU): ಹಂದನಕೆರೆ ಯಲ್ಲಿ ಕೊಬ್ಬರಿ ನೋಂದಣಿ ಕೇಂದ್ರ ಆರಂಭಿಸಿ ಎಂದು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂದಾಯ ಅದಾಲತ್ ಕಾರ್ಯಕ್ರಮದಲ್ಲಿ ಕೆ ಆರ್ ಎಸ್ ಪಕ್ಷದ ಜೊತೆ ಹಂದನಕೆರೆಯ ನಿವೃತ್ತ ಕಾರ್ಯಪಾಲಕ ಎಂಜಿನಿಯರ್ ಸೀತಾರಾಂ ಶೆಟ್ಟರು, ತಿಮ್ಲಾಪೂರದ ಸ್ವಾಮಿ ರವರು ತಹಶೀಲ್ದಾರ ರವರಿಗೆ ಮನವಿ ಸಲ್ಲಿಸಿದರು.


ಇದೇ ವೇಳೆ ಮಾತನಾಡಿದ ಶ್ರೀನಿವಾಸ್ ಹಂದನಕೆರೆ ಹೋಬಳಿ ಮಟ್ಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಇದ್ದು ಇಲ್ಲಿಗೆ ಯಾವುದೇ ರೈತರಿಗೆ ಅನುಕೂಲ ವಾಗುವ ಯೋಜನೆಗಳು ಜಾರಿಯಾಗಿಲ್ಲದಿರುವುದು ವಿಪರ್ಯಾಸ ಈ ವಿಚಾರವಾಗಿ ತಹಶೀಲ್ದಾರ್ ರವರು ಶೀಗ್ರವಾಗಿ ಗಮನ ಹರಿಸಿ ಹಂದನಕೆರೆ ಯಲ್ಲಿ ನೋಂದಣಿ ಕೇಂದ್ರ ತೆರೆಯಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.


ಇದೇ ತಿಪಟೂರಿನಲ್ಲಿ 7 ಕೇಂದ್ರಗಳನ್ನು ತೆರೆಯಲಾಗಿದೆ
ಆದರೆ ವಿಸ್ತೀರ್ಣದಲ್ಲಿ  ದೊಡ್ಡದಾಗಿರುವ ಚಿಕ್ಕನಾಯಕನಹಳ್ಳಿಗೆ  4 ಕೌಂಟರ್ ನೀಡಲಾಗಿದೆಚಿಕ್ಕನಾಯಕಹಳ್ಳಿ ಯಲ್ಲಿ ಅತಿ ಹೆಚ್ಚಿನ ಕೊಬ್ಬರಿ ಬೆಳೆಗಾರರು ಇದ್ದು ಕೇವಲ 4 ಕೌಂಟರ್ ತೆರೆದಿರುವುದು ಕಳೆದ ಬಾರಿಯ ಹಾಗೆ ಹಾದರೆ ಕೊಬ್ಬರಿ ಸುಳಿದಿರುವಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ತಾಲೂಕು ಆಡಳಿತ ಹೆಚ್ಚಿನ ಗಮನ ನೀಡಿ ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಆಗ್ರಹ ಮಾಡಿದರು.

Leave a Reply

Your email address will not be published. Required fields are marked *

Scan the code