ಜಿಲ್ಲೆನ್ಯೂಸ್

ವಿದ್ಯಾರ್ಥಿಗಳು ನಿರಂತರ ಅಭ್ಯಾಸದಿಂದ ಯಶಸ್ಸು ಕಾಣಬಹುದು:-

ವಿದ್ಯಾರ್ಥಿಗಳು ನಿರಂತರ ಅಭ್ಯಾಸದಿಂದ ಯಶಸ್ಸು ಕಾಣಬಹುದು:-

(VIJAYANAGARA): ವಿದ್ಯಾರ್ಥಿಗಳು ಪ್ರತಿ ದಿನ ನಿರಂತರ ಹಾಗೂ ಕ್ರಮಬದ್ಧವಾಗಿ ಅಭ್ಯಾಸ ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿ ತಂದೆ,ತಾಯಿಗಳಿಗೆ ಕೀರ್ತಿ ತರಲು ಸಾಧ್ಯ ಎಂದು ಹಗರಿ ಬೊಮ್ಮನಹಳ್ಳಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಡಿಗೇರ ವೀರೇಶ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದರು,
ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಹೊಸಪೇಟೆ ಯ ಷಾ.ಭವರಲಾಲ್ ಬಾಬುಲಾಲ್ ನಾಹರ್ ಶಿಕ್ಷಣ ಮಹಾವಿದ್ಯಾಲಯದ 2022-23 ನೇ ಸಾಲಿನ ಪೌರತ್ವ ತರಬೇತಿ ಶಿಬಿರವನ್ನು ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಉಪನಾಯಕನಹಳ್ಳಿ ಗ್ರಾಮದಲ್ಲಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೌರತ್ವ ತರಬೇತಿ ಶಿಬಿರದ ಕಾರ್ಯ ಕ್ರಮದಲ್ಲಿ ” ಸ್ಪರ್ಧಾತ್ಮಕ ಪರೀಕ್ಷೆ ಸಮಯ ನಿರ್ವಹಣೆ ಮತ್ತು ಯಶಸ್ವಿಯಾಗಲು ಅನುಸರಿಸಬೇಕಾದ ಅಂಶಗಳು ” ಕುರಿತು ಉಪನ್ಯಾಸ ನೀಡಿದರು.


ವಿದ್ಯಾರ್ಥಿಗಳು ಸತತವಾಗಿ ಅಭ್ಯಾಸ ಮಾಡುವುದರ ಮೂಲಕ ಕಠಿಣವಾದ ವಿಷಯಗಳು ಸುಲಭವಾಗಿ ಪರೀಕ್ಷೆಯನ್ನು ಎದುರಿಸಬಹುದು,ಜೊತೆಗೆ ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸು ಮನೋಭಾವ ಇರಬೇಕು, ಪ್ರಾಮಾಣಿಕ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ ತಾಳ್ಮೆ ಮನೋಭಾವವಿರಬೇಕು.ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಸಾಮರ್ಥ್ಯ ವಿದ್ದು ಸೂಕ್ತ ಮಾರ್ಗದರ್ಶನ ಪಡೆದುಕೊಂಡರೆ ಉತ್ತಮ ಸಾಧನೆ ಮಾಡಬಹುದು ಹಾಗೂ ಹಳೆಯ ಮಾದರಿಯ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು, ಸರ್ಕಾರಿ ಪಠ್ಯಪುಸ್ತಕಗಳು ಮತ್ತು ದಿನಪತ್ರಿಕೆಗಳನ್ನು ಗಮನಿಸುವುದು ಮತ್ತು ನಿರಂತರವಾಗಿ ವಿದ್ಯಾರ್ಥಿಗಳು ತಮ್ಮ ಗುರಿಯೆಡೆಗೆ ಪ್ರಯತ್ನಶೀಲರಾಗಿರಬೇಕು ಎಂದರು,
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಶಿಬಿರದ ನಿರ್ದೇಶಕರಾದ ಡಾ.ಎನ್.ವಿಶ್ವನಾಥ ಶಿಬಿರಅಧಿಕಾರಿಗಳಾದ ಡಾ.ಕೆ.ಎಂ.ಪಾರ್ವತಿ,ಡಾ.ಜಗದೀಶ್,ಶಿವನಗೌಡ ಎಸ್.ಸಾತ್ಮಾರ್,ಡಾ.ಸತೀಶ್ ಸೂರಿಮಠ,ಡಾ.ಸಿದ್ಧಲಿಂಗ ಸ್ವಾಮಿ.ಪಿ.ಎಂ,ಡಾ.ಮಲ್ಲಿಕಾ ಕೆ.ಹೆಚ್.ಎಂ.ಶಿಬಿರದ ಸಂಯೋಜಕರಾದ ಮಲ್ಲಿಕಾರ್ಜುನ ಬಿದರಕುಂದಿ, ಡಾ.ಉಮೇಶ್ ಹಡಗಲಿ,ಗಿರೀಶ ನಾಗರಬೆಂಚಿ,ಅಮರೇಶ,ಸೋಮಶೇಖರ ಉಪಸ್ಥಿತರಿದ್ದರು,

ವರದಿ: ಅಂಬಳಿ ವೀರೇಂದ್ರ

Leave a Reply

Your email address will not be published. Required fields are marked *

Scan the code