ಚಿಕ್ಕಮಗಳೂರುನ್ಯೂಸ್

ಕುವೆಂಪು ವಿಶ್ವವಿದ್ಯಾಲಯ ವಿರುದ್ದ ರೋಡಿಗೆ ಇಳಿದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು

ಕುವೆಂಪು ವಿಶ್ವವಿದ್ಯಾಲಯ ವಿರುದ್ದ ರೋಡಿಗೆ ಇಳಿದು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು

(CHIKKAMAGALURU): ಚಿಕ್ಕಮಂಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಶ್ರೀ ಜೆಸಿಬಿಎಂ (JCBM) ಕಾಲೇಜಿನ ವಿದ್ಯಾರ್ಥಿಗಳು ಇಂದು ರೋಡಿಗೆ ಇಳಿದು ಪ್ರತಿಭಟನೆ ಮಾಡಿದ್ದಾರೆ. ಕುವೆಂಪು ವಿಶ್ವವಿದ್ಯಾಲಯದ ತಾಂತ್ರಿಕ ದೋಷದಿಂದ ಫೀಸ್ ಕಟ್ಟಲಾಗಲಿಲ್ಲ ಆದ್ದರಿಂದ ವಿಶ್ವವಿದ್ಯಾಲಯವು ಹೆಚ್ಚುವರಿ ಶುಲ್ಕವನ್ನು ಬರಿಸಿದ್ದು ಬಡ ಮಕ್ಕಳಿಗೆ ತೊಂದರೆಯಾಗುತ್ತಿದೆ ವಿಶ್ವವಿದ್ಯಾಲಯದ ತೊಂದರೆಯನ್ನು ಇಟ್ಟುಕೊಂಡು ಬಡ ಮಕ್ಕಳಿಗೆ ಫೀಸ್ ಹೆಚ್ಚುವರಿ ಶುಲ್ಕವನ್ನು ವಿಧಿಸುವುದು ಒಳ್ಳೆಯದಲ್ಲ ಎಂದು ಪ್ರತಿಭಟನೆ ಮಾಡಿದ್ದಾರೆ.

ಪ್ರತಿಭಟನೆಯಲ್ಲಿ ಕಾಲೇಜಿನ ಪ್ರಥಮ ದ್ವಿತೀಯ ಹಾಗೂ ತೃತೀಯ ಡಿಗ್ರಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಒಟ್ಟು 140ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು.

ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಶೃಂಗೇರಿ ತಾಲೂಕಿನ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಯವರು ಆಗಮಿಸಿ ವಿದ್ಯಾರ್ಥಿಗಳ ಪ್ರತಿಭಟನೆಯ ವಿಷಯವನ್ನು ಕೇಳಿ ವಿದ್ಯಾರ್ಥಿಗಳಿಗೆ ಯೂನಿವೆರ್ಸಿಟಿಯಲ್ಲಿ ಪರೀಕ್ಷಾ ಶುಲ್ಕ ಮಾತ್ರ ಕಟ್ಟುವಂತೆ ತಿಳಿಸಿ ಹೆಚ್ಚಾಗಿ ವಿಶ್ವವಿದ್ಯಾಲಯಕ್ಕೂ ಒಂದು ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು. ಹಾಗೂ ತಮ್ಮಿಂದ ತಾಂತ್ರಿಕ ದೋಷದಿಂದ ತೊಂದರೆ ಉಂಟಾಗಿದೆ ಎಂದು ತಿಳಿಸುವುದಾಗಿ ವಿದ್ಯಾರ್ಥಿಗಳ ಮನ ಒಲಿಸಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಎಂ ಸ್ವಾಮಿಯವರು ಭಾಗಿಯಾಗಿ ವಿದ್ಯಾರ್ಥಿಗಳಿಗೆ ಸಲಹೆ ಸಾಂತ್ವಾನ ನೀಡಿದರು.

Leave a Reply

Your email address will not be published. Required fields are marked *

Scan the code