ವಿದ್ಯಾರ್ಥಿಗಳು ಪೌರತ್ವ ತರಬೇತಿಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು.
(VIJAYANAGARA): ವಿದ್ಯಾರ್ಥಿಗಳು ಪೌರತ್ವ ತರಬೇತಿಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮ ನಿಜ ಜೀವನದಲ್ಲಿ ಪೌರತ್ವ ತರಬೇತಿಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು, ಎಂದು ಉಪನಾಯಕನಹಳ್ಳಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಚಾರ್ಯರಾದ ಋಷಿಕೇಶ ರೆಡ್ಡಿ ಅಭಿಪ್ರಾಯ ಪಟ್ಟರು,
ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಹೊಸಪೇಟೆ ಯ ಷಾ.ಭವರಲಾಲ್ ಬಾಬುಲಾಲ್ ನಾಹರ್ ಶಿಕ್ಷಣ ಮಹಾವಿದ್ಯಾಲಯದ 2022-23 ನೇ ಸಾಲಿನ ಪೌರತ್ವ ತರಬೇತಿ ಶಿಬಿರವನ್ನು ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಉಪನಾಯಕನಹಳ್ಳಿ ಗ್ರಾಮದಲ್ಲಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೌರತ್ವ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿ ಗಳಾಗಿ ಆಗಮಿಸಿ ಮಾತನಾಡಿದ್ದರು.
ಈಗಿನ ವಾಸ್ತವಿಕ ಕಾಲಘಟ್ಟಕ್ಕೆ ಪೌರತ್ವ ತರಬೇತಿ ಶಿಬಿರ ಕೇವಲ ಮೂರು ದಿನಕ್ಕೆ ಸಿಮಿತವಾಗದೇ, ಅದನ್ನು ವಿಸ್ತಾರಿಸಬೇಕು ಎಂದರು, ಕಾಲೇಜಿನ ಶಿಬಿರಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು,
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಶಿಬಿರದ ನಿರ್ದೇಶಕರಾದ ಡಾ.ಎನ್.ವಿಶ್ವನಾಥ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದರು, ಶಿಬಿರಅಧಿಕಾರಿಗಳಾದ ಡಾ.ಕೆ.ಎಂ.ಪಾರ್ವತಿ,ಡಾ.ಜಗದೀಶ್,ಶಿವನಗೌಡ ಎಸ್.ಸಾತ್ಮಾರ್,ಡಾ.ಸತೀಶ್ ಸೂರಿಮಠ,ಡಾ.ಸಿದ್ಧಲಿಂಗ ಸ್ವಾಮಿ.ಪಿ.ಎಂ,ಡಾ.ಮಲ್ಲಿಕಾ ಕೆ.ಹೆಚ್.ಎಂ.ಶಿಬಿರದ ಸಂಯೋಜಕರಾದ ಮಲ್ಲಿಕಾರ್ಜುನ ಬಿದರಕುಂದಿ, ಮಲ್ಲಿಕಾರ್ಜನ ಇಟ್ಟಗಿ, ಡಾ.ಉಮೇಶ್ ಹಡಗಲಿ,ಗಿರೀಶ ನಾಗರಬೆಂಚಿ,ಅಮರೇಶ,ಸೋಮಶೇಖರ ಉಪಸ್ಥಿತರಿದ್ದರು,ಯಮನಕ್ಕ ಸ್ವಾಗತಿಸಿದರು, ಅನ್ನಪೂರ್ಣ ಪ್ರಾರ್ಥಸಿದ್ದರು,ತೇಜಸ್ವಿನಿ ಕರ್ಣಂ,ನಿರೂಪಿಸಿದ್ದರು,ಸುಮಾ ವಂದಿಸಿದ್ದರು.
ವರದಿ: ವೀರೇಂದ್ರ ಅಂಬಳಿ