ಪೌರತ್ವ ತರಬೇತಿ ಶಿಬಿರ ಉದ್ಘಾಟನೆ :- ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗ ಪಡಿಸಿಕೊಳಬೇಕು,
(VIJAYANAGARA): ಪೌರತ್ವ ತರಬೇತಿ ಶಿಬಿರ ಉದ್ಘಾಟನೆ:- ಬಳ್ಳಾರಿಯ ವೀರಶೈವ ವಿದ್ಯಾವರ್ಧಕ ಸಂಘದ ಹೊಸಪೇಟೆಯ ಷಾ.ಭವರಲಾಲ್ ಬಾಬುಲಾಲ್ ನಾಹರ್ ಶಿಕ್ಷಣ ಮಹಾವಿದ್ಯಾಲಯದ 2022-23 ನೇ ಸಾಲಿನ ಪೌರತ್ವ ತರಬೇತಿ ಶಿಬಿರವನ್ನು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಅರ್.ರಾಮನಗೌಡ ಉದ್ಘಾಟಿಸಿದರು.
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಉಪನಾಯಕನಹಳ್ಳಿ ಗ್ರಾಮದಲ್ಲಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪೌರತ್ವ ತರಬೇತಿ ಶಿಬಿರದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಕರಿಬಸವರಾಜ ಬಾದಾಮಿ ಮಾತನಾಡಿ,ವಿದ್ಯಾರ್ಥಿಗಳು ಸಮಯವನ್ನು ಸದುಪಯೋಗ ಪಡಿಸಿಕೊಂಡು,ಸೇವಾ ಮನೊಭಾವನೆಯನ್ನು ಅಳವಡಿಸಿಕೊಳ್ಳಬೇಕು ಎಂದರು, ಭಾರತ ಜಗತ್ತಿನಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ವಿಶಿಷ್ಠವಾದ ಸ್ಥಾನ ಪಡೆದಿದೆ, ಜೊತೆಗೆ ವಿದ್ಯಾರ್ಥಿಗಳು ಉತ್ತಮವಾದ ಶಿಕ್ಷಣ ಪಡೆದು ದೇಶಪ್ರೇಮ ವನ್ನು ಬೆಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದರು, ಕಾಲೇಜಿನ ಅಡಳಿತ ಮಂಡಳಿಯ ಸದಸ್ಯರಾದ ಹೆಚ್.ಗಂಗಾಧರ ಮಾತನಾಡಿದ್ದರು,
ಈ ಕಾರ್ಯಕ್ರಮದಲ್ಲಿ ಡಾ.ಎನ್.ವಿಶ್ವನಾಥ ಪ್ರಾಸ್ತಾವಿಕವಾಗಿ ಮಾತನಾಡಿ ವಿದ್ಯಾರ್ಥಿಗಳು, ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳು, ಅಳವಡಿಸಿಕೊಳ್ಳಬೇಕು, ಶಿಸ್ತು, ಸಂಯಮ,ಸಹಕಾರ, ಸಂಘಟನೆ, ನಾಯಕತ್ವ, ಗುಣಗಳನ್ನು ಬೆಳೆಸಿಕೊಳ್ಳಲು ತಿಳಿಸಿದ್ದರು,
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಶಿಬಿರದ ನಿರ್ದೇಶಕರಾದ ಡಾ.ಎನ್.ವಿಶ್ವನಾಥ, ಮೊ.ದೇ.ಮಾ.ವ.ಶಾಲೆಯ,ಪ್ರಾಚಾರ್ಯರಾದ ಋಷಿಕೇಶ ರೆಡ್ಡಿ, ಶಿಬಿರಧಿಕಾರಿಗಳಾದ ಡಾ.ಕೆ.ಎಂ.ಪಾರ್ವತಿ, ಡಾ.ಜಗದೀಶ್,ಶಿವನಗೌಡ ಎಸ್.ಸಾತ್ಮಾರ್, ಡಾ.ಸತೀಶ್ ಸೂರಿಮಠ,ಡಾ.ಸಿದ್ಧಲಿಂಗ ಸ್ವಾಮಿ.ಪಿ.ಎಂ,ಡಾ.ಮಲ್ಲಿಕಾ ಕೆ.ಹೆಚ್.ಎಂ.ಶಿಬಿರದ ಸಂಯೋಜಕರಾದ ಮಲ್ಲಿಕಾರ್ಜುನ ಬಿದರಕುಂದಿ, ಡಾ.ಉಮೇಶ್ ಹಡಗಲಿ,ಗಿರೀಶ ನಾಗರಬೆಂಚಿ,ಅಮರೇಶ,ಸೋಮಶೇಖರ್, ಮರಿಯಮ್ಮನಹಳ್ಳಿಯ ಉಪನ್ಯಾಸಕ ಯರಿಸ್ವಾಮಿ,ಅಂಬಳಿ ವೀರೇಂದ್ರ ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಸೌಮ್ಯ ಬೆಲ್ಲದ್ ನಿರೂಪಿಸಿದರು,ಎಮ್.ಸುಮಾ ಸ್ವಾಗತಿಸಿದರು,ತೇಜಸ್ವಿನಿ ಹಾಗೂ ಕೀರ್ತಿ ರೆಡ್ಡಿ ಪ್ರಾರ್ಥಿಸಿದ್ದರು, ಶಿಬಿರದ ಸಂಯೋಜಕ ರಾದ ಮಲ್ಲಿಕಾರ್ಜುನ ಬಿದರಕುಂದಿ ವಂದಿಸಿದ್ದರು.
ವರದಿ: ಸುನೀಲ್ ಕುಮಾರ್ ಎಂ NSD